ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಪ್ರಸ್ತುತ ಏಳನೇ ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳು ಸಾಧಕರ ಶ್ರದ್ಧೆಯನ್ನು ಭಂಗಗೊಳಿಸಿ ಅವರನ್ನು ಸಾಧನೆಯಿಂದ  ವಿಮುಖಗೊಳಿಸಲು ‘ಶಬ್ದಶಕ್ತಿ’ಯ ಮೂಲಕ ದೊಡ್ಡ ಪ್ರಮಾಣದಲ್ಲಿ ಸೂಕ್ಷ್ಮ ಯುದ್ಧವನ್ನು ಮಾಡುತ್ತಿವೆ. ವಾಣಿ ಮತ್ತು ಬರಹದಲ್ಲಿನ ಶಬ್ದಗಳ ಮೂಲಕ ಸಂಸ್ಥೆ, ಸಂತರು ಮತ್ತು ಸಾಧಕರ ಬಗ್ಗೆ ನಕಾರಾತ್ಮಕತೆಯನ್ನು ಹರಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಸೂಕ್ಷ್ಮ ಯುದ್ಧದಲ್ಲಿ ಕೆಟ್ಟ ಶಕ್ತಿಗಳು ಸಮಾಜದ ವಿರೋಧಿಗಳನ್ನು ಹಾಗೂ ನಕಾರಾತ್ಮಕ ವಿಚಾರಗಳ ಪ್ರಭಾವದಲ್ಲಿರುವ ಸಾಧಕರನ್ನು ಮಾಧ್ಯಮವನ್ನಾಗಿ  ಮಾಡಿಕೊಂಡು, ಅವರ ಬರಹ ಮತ್ತು ವಾಣಿಯ ಮೂಲಕ ಇತರ ಸಾಧಕರಲ್ಲಿ ವಿಕಲ್ಪಗಳನ್ನು ಮೂಡಿಸಲು ಕಾರ್ಯನಿರತವಾಗಿವೆ. ಸಾಧಕನ ಶ್ರದ್ಧೆಯ ಮೇಲೆ ಪೆಟ್ಟು ಬಿದ್ದಾಗ ಅವನ ಮನಸ್ಸಿನಲ್ಲಿ ವಿಕಲ್ಪಗಳು ಉಂಟಾಗಿ ಅವನ ಸಾಧನೆಯಲ್ಲಿ ಅಧೋಗತಿಯಾಗುತ್ತದೆ.

ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡುತ್ತಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಈ ಷಡ್ಯಂತ್ರಕ್ಕೆ ಬಲಿಯಾಗದೆ, ಉತ್ಸಾಹದಿಂದ ನಿಮ್ಮ ಸಾಧನೆಯನ್ನು ಹೆಚ್ಚಿಸಿ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೮.೩.೨೦೨೬)

ಯಾರಾದರೂ ಸನಾತನ ಸಂಸ್ಥೆ, ಸನಾತನದ ಸಂತರು ಮತ್ತು ಸಾಧಕರ ಬಗ್ಗೆ ವಿಕಲ್ಪಗಳನ್ನು ಹರಡುವಂತಹ ಆಕ್ಷೇಪಾರ್ಹ ಬರಹ ಅಥವಾ ಮಾತುಗಳನ್ನು ಆಡುತ್ತಿದ್ದರೆ, ಆ ಬಗ್ಗೆ ನಿಮ್ಮ ಕ್ಷೇತ್ರದ ಜವಾಬ್ದಾರ ಧರ್ಮಪ್ರಚಾರಕ ಸಂತರಿಗೆ ತಿಳಿಸಬೇಕು. – ವಿಶ್ವಸ್ತರು, ಸನಾತನ ಸಂಸ್ಥೆ

  • ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮ-ಜಗತ್ತು : ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ; ಆದರೆ ಯಾವುದರ ಅಸ್ತಿತ್ವದ ಜ್ಞಾನವು ಸಾಧನೆ ಮಾಡುವವನಿಗೆ ಆಗುತ್ತದೆಯೋ, ಅದನ್ನು ‘ಸೂಕ್ಷ್ಮ-ಜಗತ್ತು’ ಎಂದು ಕರೆಯುತ್ತಾರೆ.