
ಪರಾತ್ಪರ ಗುರು ಪಾಂಡೆ ಮಹಾರಾಜರು ೧೫.೧೧.೨೦೦೮ ರಂದು ಪ.ಪೂ. ಪಾಂಡೆ ಮಹಾರಾಜರು ನನಗೆ ‘ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ’ ಅವು ಅವುಗಳಿಗೆ ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ; ಶವಸಮಾನ ಶರೀರದ ಮೇಲೆ ಒಡವೆಗಳು ಶೋಭಿಸುವುದಿಲ್ಲ’ ಎಂದು ಹೇಳಿದರು.ಇದಕ್ಕಾಗಿ ಸೂಕ್ಷ್ಮದಲ್ಲಿನ ಪ್ರಯೋಗ ಮಾಡಲು ಹೇಳಿದರು. ಆಗ ನಾನು ಕಣ್ಣುಗಳನ್ನು ಮುಚ್ಚಿಕೊಂಡು ಅವರೆದುರು ಕುಳಿತುಕೊಂಡೆ. ನನಗೆ ಒಡವೆಗಳನ್ನು ಧರಿಸಿದ ಒಂದು ಕಪ್ಪು ಮಾನವೀ ಆಕೃತಿಯು ಕಾಣಿಸಿತು. ಆ ಆಕೃತಿಯ ಧರಿಸಿದ ಒಡವೆಗಳು ನಿಸ್ತೇಜವಾಗಿದ್ದವು. ಸ್ವಲ್ಪ ಸಮಯದ ನಂತರ ಆ ಆಕೃತಿಯ ತಲೆಯೊಳಗೆ ಈಶ್ವರನ ಚೈತನ್ಯವು ಹೋಗುವುದು ಕಾಣಿಸಿತು. ಆಮೇಲೆ ಆ ಚೈತನ್ಯವು ಒಡವೆಗಳಿದ್ದ ಸ್ಥಳಗಳಿಗೆ ತಲುಪಿತು ಮತ್ತು ಆ ಒಡವೆಗಳಿಂದ ಪ್ರಕ್ಷೇಪಿಸತೊಡಗಿತು. ಇದರಿಂದ ಆ ಒಡವೆಗಳ ಸೌಂದರ್ಯವು ಹೆಚ್ಚಾಯಿತು ಮತ್ತು ಅವುಗಳಿಂದ ಆ ವ್ಯಕ್ತಿಗೆ ಲಾಭವಾಗುತ್ತಿರುವುದರ ಅರಿವಾಯಿತು.
– ಕು. ಸೋನಲ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !