‘ಆಭರಣಗಳು ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ !’

ಪರಾತ್ಪರ ಗುರು ಪಾಂಡೆ ಮಹಾರಾಜರು

ಪರಾತ್ಪರ ಗುರು ಪಾಂಡೆ ಮಹಾರಾಜರು ೧೫.೧೧.೨೦೦೮ ರಂದು ಪ.ಪೂ. ಪಾಂಡೆ ಮಹಾರಾಜರು ನನಗೆ ‘ಮನುಷ್ಯನ ಶರೀರದ ಮೇಲೆ ಆಭರಣಗಳು ಅವುಗಳ ಸೌಂದರ್ಯದಿಂದ ಶೋಭಿಸುವುದಲ್ಲ’ ಅವು ಅವುಗಳಿಗೆ ಈಶ್ವರನಿಂದ ಸಿಗುವ ಚೈತನ್ಯದಿಂದ ಶೋಭಿಸುತ್ತವೆ; ಶವಸಮಾನ ಶರೀರದ ಮೇಲೆ ಒಡವೆಗಳು ಶೋಭಿಸುವುದಿಲ್ಲ’ ಎಂದು ಹೇಳಿದರು.ಇದಕ್ಕಾಗಿ ಸೂಕ್ಷ್ಮದಲ್ಲಿನ ಪ್ರಯೋಗ ಮಾಡಲು ಹೇಳಿದರು. ಆಗ ನಾನು ಕಣ್ಣುಗಳನ್ನು ಮುಚ್ಚಿಕೊಂಡು ಅವರೆದುರು ಕುಳಿತುಕೊಂಡೆ. ನನಗೆ ಒಡವೆಗಳನ್ನು ಧರಿಸಿದ ಒಂದು ಕಪ್ಪು ಮಾನವೀ ಆಕೃತಿಯು ಕಾಣಿಸಿತು. ಆ ಆಕೃತಿಯ ಧರಿಸಿದ ಒಡವೆಗಳು ನಿಸ್ತೇಜವಾಗಿದ್ದವು. ಸ್ವಲ್ಪ ಸಮಯದ ನಂತರ ಆ ಆಕೃತಿಯ ತಲೆಯೊಳಗೆ ಈಶ್ವರನ ಚೈತನ್ಯವು ಹೋಗುವುದು ಕಾಣಿಸಿತು. ಆಮೇಲೆ ಆ ಚೈತನ್ಯವು ಒಡವೆಗಳಿದ್ದ ಸ್ಥಳಗಳಿಗೆ ತಲುಪಿತು ಮತ್ತು ಆ ಒಡವೆಗಳಿಂದ ಪ್ರಕ್ಷೇಪಿಸತೊಡಗಿತು. ಇದರಿಂದ ಆ ಒಡವೆಗಳ ಸೌಂದರ್ಯವು ಹೆಚ್ಚಾಯಿತು ಮತ್ತು ಅವುಗಳಿಂದ ಆ ವ್ಯಕ್ತಿಗೆ ಲಾಭವಾಗುತ್ತಿರುವುದರ ಅರಿವಾಯಿತು.

– ಕು. ಸೋನಲ ಜೋಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ.