‘ಸಲೀಂ’ ಏನಾದರೂ ‘ಸುರೇಶ’ ಎಂದು ಸುಳ್ಳು ಹೇಳಿ ವಂಚಿಸಿದರೆ ಆತನಿಗೆ ಉಳಿಗಾಲ ಇಲ್ಲ ! – Harsh Sanghavi

  • ‘ಲವ್ ಜಿಹಾದ್’ ಬಗ್ಗೆ ಗುಜರಾತ ಗೃಹಸಚಿವರಿಂದ ಕಠಿಣ ಎಚ್ಚರಿಕೆ!

  • ವಿವಾಹ ನೋಂದಣಿಯ ಬಗ್ಗೆ ಕೂಲಂಕುಷವಾಗಿ ತನಿಖೆ

  • ಪೋಷಕರ ಒಪ್ಪಿಗೆ ಕಡ್ಡಾಯವಾಗಲಿದೆ

ಕರ್ಣಾವತಿ (ಗುಜರಾತ) – ತನ್ನ ಗುರುತನ್ನು ಮರೆಮಾಚಿ ಹುಡುಗಿಯರನ್ನು ಜಾಲಕ್ಕೆ ಎಳೆದುಕೊಳ್ಳುವವರಿಗೆ ಸರಕಾರ ಪಾಠವನ್ನು ಕಲಿಸಲಿದೆ, ಅವರು ಮತ್ತೆ ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಯಾರಾದರೂ ‘ಸಲೀಂ’ ತನ್ನನ್ನು ‘ಸುರೇಶ’ ಎಂದು ಹೇಳಿಕೊಂಡು ನಮ್ಮ ಹುಡುಗಿಯರನ್ನು ವಂಚಿಸಿದರೆ, ಆತನನ್ನು ಕ್ಷಮಿಸಲಾಗುವುದಿಲ್ಲ. ಸರಕಾರವು ಪ್ರೇಮದ ವಿರೋಧಿಯಲ್ಲ; ಆದರೆ ವಂಚನೆ ಮತ್ತು ನಕಲಿ ಗುರುತಿನ ಆಧಾರದ ಮೇಲೆ ನಡೆಯುವ ಇಂತಹ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದು ಗುಜರಾತ ಗೃಹಸಚಿವ ಹರ್ಷ ಸಂಘವಿ ಅವರು ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದರು. ಮನೆಯಿಂದ ಓಡಿಹೋಗಿ ಮದುವೆಯಾಗುವವರಿಗೆ ವಿವಾಹ ನೋಂದಣಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಹೊಸ ನಿಯಮಗಳ ಪ್ರಕಾರ, ವಿವಾಹ ನೋಂದಣಿಯ ಸಮಯದಲ್ಲಿ ಎರಡೂ ಕಡೆಯವರ ಗುರುತು, ವಯಸ್ಸು ಮತ್ತು ಒಪ್ಪಿಗೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಸರಕಾರವು ಈ ಪ್ರಕ್ರಿಯೆಯಲ್ಲಿ ಪೋಷಕರ ಮಾಹಿತಿ ಮತ್ತು ಅವರ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅವರ ಒಪ್ಪಿಗೆಯಿಲ್ಲದೆ ವಿವಾಹ ನಡೆಯಲು ಸಾಧ್ಯವಾಗುವುದಿಲ್ಲ.

ಮುಸಲ್ಮಾನರು ಮತ್ತು ಮಸೀದಿಗಳೇ ಇಲ್ಲದ ಜಿಲ್ಲೆಗಳಿಂದ ‘ನಿಕಾಹ್’ (ವಿವಾಹ) ಪ್ರಮಾಣಪತ್ರಗಳ ವಿತರಣೆ!

ಗೃಹಸಚಿವ ಹರ್ಷ ಸಂಘವಿ ಅವರು ಮಾತನಾಡಿ, ಪಂಚಮಹಲ್ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಮುಸಲ್ಮಾನ ಅಥವಾ ಒಂದು ಮಸೀದಿಯೂ ಇರಲಿಲ್ಲ. ಆದರೂ ಇಲ್ಲಿ ನೂರಾರು ನಿಕಾಹ್ (ವಿವಾಹ) ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಬನಾಸಕಾಂತ, ನವಸಾರಿ ಮತ್ತು ಮೆಹ್ಸಾನಾ ಜಿಲ್ಲೆಗಳಲ್ಲೂ ಇಂತಹದ್ದೇ ಪ್ರಕರಣಗಳು ನಡೆದಿವೆ. ಸರಕಾರವು ಪ್ರೇಮವಿವಾಹ ವಿರೋಧಿಯಲ್ಲ; ಆದರೆ ಹುಡುಗಿಯರ ಗೌರವ ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಈ ಸುಧಾರಣೆಯನ್ನು ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.