
ಕರ್ತೃತ್ವಭಾವನೆ ಮೂಡಿದಾಗ, ಸಾಧಕರು ‘ನಮ್ಮ ತುಲನೆಯಲ್ಲಿ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಅವರು ಎಷ್ಟೆಲ್ಲ ಸೇವೆಗಳನ್ನು ನಿರ್ವಹಿಸುತ್ತಾರೆ ?’ ಎಂಬುದನ್ನು ನೆನಪಿಸಿಕೊಳ್ಳಬೇಕು !

ಓರ್ವ ಸಾಧಕ : ಸದ್ಯ ವಿಭಾಗದ ಸೇವಕರು ತಮ್ಮ ಇತರ ಸೇವೆಗಳಿಂದಾಗಿ ತಮ್ಮ ಸೇವೆಗಳನ್ನು ನನಗೆ ಹಸ್ತಾಂತರಿಸಿದ್ದಾರೆ. ಅವುಗಳನ್ನು ಮಾಡುವಾಗ ನನಗೆ ಕೆಲವೊಮ್ಮೆ ಒತ್ತಡವಾಗುತ್ತದೆ ಮತ್ತು ಕೆಲವೊಮ್ಮೆ ಕರ್ತೃತ್ವ ಭಾವನೆಯು ಜಾಗೃತಗೊಳ್ಳುತ್ತದೆ, ‘ನಾನು ಬಹಳಷ್ಟು ಸೇವೆ ಮಾಡುತ್ತಿದ್ದೇನೆ, ಅಂದರೆ ನಾನು ಒಂದೇ ಸಮಯದಲ್ಲಿ ಬಹಳಷ್ಟು ವಿಷಯಗಳನ್ನು ನಿಭಾಯಿಸುತ್ತಿದ್ದೇನೆ. ನಾನು ಅವುಗಳ ಸಮನ್ವಯ ಮಾಡುತ್ತಿದ್ದೇನೆ.’ ಎಂದು ಎನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು; ಆದರೆ ‘ನಾನು ಬಹಳಷ್ಟು ಮಾಡುತ್ತಿದ್ದೇನೆ’ ಎಂದು ಅನಿಸಿದರೆ, ‘ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಷ್ಟು ಮಾಡುತ್ತಾರೆ ? ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಎಷ್ಟು ಮಾಡುತ್ತಾರೆ ?’ ಎಂಬುದನ್ನು ನೆನಪಿಸಿಕೋ. ಆಗ ‘ಅವರ ತುಲನೆಯಲ್ಲಿ ನಿನ್ನದು ಏನೂ ಅಲ್ಲ’ ಎಂಬುದು ನಿನ್ನ ಗಮನಕ್ಕೆ ಬರುತ್ತದೆ ಮತ್ತು ಈಶ್ವರನು ಏನು ಮಾಡುತ್ತಾನೆ ? ಅನಂತ ಕೋಟಿ ಬ್ರಹ್ಮಾಂಡಗಳನ್ನು ನೋಡಿಕೊಳ್ಳುತ್ತಾನೆ, ಆದರೆ ನಾವಿರುವುದು ಒಂದು ಸಣ್ಣ ಆಶ್ರಮದ ಸಣ್ಣ ಸಣ್ಣ ಸೇವೆಗಳನ್ನು ನೋಡಿಕೊಳ್ಳಲು. ಅರ್ಥವಾಯಿತೇ ? ಈ ಭಾವನೆ ದೂರವಾಗುತ್ತದೆ ಮತ್ತು ನಂತರ ನೀನು ಮತ್ತಷ್ಟು ಮತ್ತಷ್ಟು ಸೇವೆ ಮಾಡುತ್ತೀಯ. ಸಾಧಕರೇ, ನೀವೂ ಇವನಿಗೆ ನೆನಪಿಸಿಕೊಡಿ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !