|

ನವದೆಹಲಿ – ಪಾಕಿಸ್ತಾನಿ ಭಯೋತ್ಪಾದಕರು ನವೆಂಬರ್ 26, 2008 (26/11) ರಂದು ಮುಂಬಯಿ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ನಂತರ ಭಾರತವು ಪ್ರತಿದಾಳಿ ನಡೆಸಬೇಕಿತ್ತು ಎಂದು ನನ್ನ ಮನಸ್ಸಿಗೆ ಬಂದಿತ್ತು. ಈ ಸಂಬಂಧ ನಾನು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೆ; ಆದರೆ ಕಾಂಗ್ರೆಸ್ ನಾಯಕತ್ವವು ಪಾಕಿಸ್ತಾನಕ್ಕೆ ನೇರವಾಗಿ ಪ್ರತ್ಯುತ್ತರ ನೀಡಲು ಒಪ್ಪಿಗೆ ನೀಡಲಿಲ್ಲ, ಎಂದು ಕಾಂಗ್ರೆಸ್ ಸರಕಾರದ ಆಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು 17 ವರ್ಷಗಳ ನಂತರ ಮಾಹಿತಿಯನ್ನು ಬಹಿರಂಗಪಡಿಸಿದರು. ಅವರು ಒಂದು ವಾರ್ತಾವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
💥 Ex-Home Minister P. Chidambaram admits after 17 yrs:
After 26/11 🇮🇳 wanted strikes on Pakistan🇵🇰 but Congress blocked them after a US warning!
This defeatist mindset let Pakistan’s terror flourish & cost India dearly.
Why reveal truth now? He must be held accountable.… pic.twitter.com/0mSkGo55tD
— Sanatan Prabhat (@SanatanPrabhat) September 30, 2025
ಸಂದರ್ಶನದಲ್ಲಿ ಚಿದಂಬರಂ ಮಾತು ಮುಂದುವರೆಸಿ,
೧. ನನಗೆ ಖಚಿತವಾಗಿ ಗೊತ್ತಿಲ್ಲ, ನಾನು ಕೇವಲ ಊಹಿಸಬಹುದು. ಈ ತೀರ್ಮಾನವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಿದೇಶಾಂಗ ಸೇವೆಯ ಅಭಿಪ್ರಾಯಗಳನ್ನು ಆಧರಿಸಿತ್ತು. ನಾವು ನೇರವಾಗಿ ಪ್ರತಿಕ್ರಿಯೆ ನೀಡದೆ ರಾಜತಾಂತ್ರಿಕ ಮಾರ್ಗವನ್ನು ಆರಿಸಬೇಕು ಎಂದು ಅವರು ಹೇಳಿದರು. ಆ ಸಮಯದಲ್ಲಿ ಇದೇ ತೀರ್ಮಾನಕ್ಕೆ ಬರಲಾಯಿತು.
೨. ಆ ಸಮಯದಲ್ಲಿ ಇಡೀ ಜಗತ್ತು ಭಾರತಕ್ಕೆ ಯುದ್ಧ ಮಾಡದಂತೆ ಹೇಳಿತ್ತು.
೩. ಆ ಅವಧಿಯಲ್ಲಿ ಅಮೆರಿಕಾದ ಅಂದಿನ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಜಾ ರೈಸ್ ಭಾರತಕ್ಕೆ ಬಂದಿದ್ದರು. ಅವರು ಕೂಡ ಪ್ರಧಾನಮಂತ್ರಿಯವರಿಗೆ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡದಂತೆ ಸಲಹೆ ನೀಡಿದರು. (ಇದರಿಂದ ‘ಮುಂಬಯಿಯ ಮೇಲಿನ ಆಕ್ರಮಣದ ಹಿಂದೆ ಅಮೆರಿಕಾದ ಕೈವಾಡವಿತ್ತು’ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಅಮೆರಿಕಾವನ್ನು ಈಗಲಾದರೂ ಸರಕಾರ ಪ್ರಶ್ನಿಸಬೇಕು. ಇದರೊಂದಿಗೆ, ದೇಶಹಿತವನ್ನು ಬಲಿಕೊಟ್ಟು ಅಮೆರಿಕಾದ ತಾಳಕ್ಕೆ ಕುಣಿಯುವ ಕಾಂಗ್ರೆಸ್ಸನ್ನು ಸಹ ಜನರು ಪ್ರಶ್ನಿಸಬೇಕು ಮತ್ತು ಕಾಂಗ್ರೆಸ್ಸಿನ ರಾಜಕೀಯ ಅಸ್ತಿತ್ವವನ್ನು ಕೊನೆಗೊಳಿಸಬೇಕು! – ಸಂಪಾದಕರು)
ಏನಾಗಿತ್ತು?
೨೦೦೮ ರ ನವೆಂಬರ್ ೨೬ ರಂದು ಮುಂಬಯಿ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ೧೦ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬಯಿ ಪ್ರವೇಶಿಸಿ ಅನೇಕ ಸ್ಥಳಗಳಲ್ಲಿ ಗುಂಡು ಹಾರಿಸಿ ಸ್ಫೋಟಗಳನ್ನು ನಡೆಸಿದರು. ಈ ಆಕ್ರಮಣದಲ್ಲಿ ೧೬೬ ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇದರಲ್ಲಿ ವಿದೇಶಿ ನಾಗರಿಕರೂ ಸೇರಿದ್ದರು. ಆ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (UPA) ಸರಕಾರವಿತ್ತು ಮತ್ತು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದರು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!