|

ದಾವಣಗೆರೆ – ನಗರದ ಮಟ್ಟಿ ಕಲ್ಲು ಇಲ್ಲಿ ಗಣೇಶೋತ್ಸವದ ನಿಮಿತ್ತ ಅಫ್ಜಲ್ ಖಾನ್ ವಧೆಯ ಫಲಕಗಳನ್ನು ಹಾಕಲಾಗಿತ್ತು. ಇದರಿಂದ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣ ನೀಡಿ, ಪೊಲೀಸರು ಹಿಂದೂಗಳಿಗೆ ಅವುಗಳನ್ನು ಆಗಸ್ಟ್ 29ರ ಬೆಳಗ್ಗೆ 10.30ರೊಳಗೆ ತೆಗೆದುಹಾಕಲು ಗಡುವು ನೀಡಿದರು; ಆದರೆ ಅದಕ್ಕೂ ಮುನ್ನವೇ ರಾತ್ರಿ 1.30 ಕ್ಕೆ ಪೊಲೀಸರೇ ಅವುಗಳನ್ನು ತೆಗೆದುಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನು ಸ್ಥಳೀಯ ಹಿಂದೂಗಳು ತೀವ್ರವಾಗಿ ವಿರೋಧಿಸಿದ್ದಾರೆ.
ಹಿಂದುತ್ವನಿಷ್ಠ ಯುವಕರು ‘ಸಮಾಜಕ್ಕೆ ನಿಜವಾದ ಇತಿಹಾಸ ತಿಳಿಯಬೇಕು’ ಎಂಬ ಉದ್ದೇಶದಿಂದ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ನನ್ನು ವಧೆ ಮಾಡುತ್ತಿರುವ ಚಿತ್ರವನ್ನು ಹಾಕಿದ್ದರು; ಆದರೆ ಪೊಲೀಸರು ಇದಕ್ಕೆ ವಿರೋಧ ವ್ಯಕ್ತಪಡಿಸಿ ‘ಇದರಿಂದ ಸಮಾಜದಲ್ಲಿ ದ್ವೇಷ ನಿರ್ಮಾಣವಾಗುತ್ತದೆ’ ಎಂದು ಆರೋಪಿಸಿದರು. ಪೊಲೀಸರು ಫಲಕಗಳನ್ನು ತೆಗೆದುಹಾಕಲು ಯತ್ನಿಸಿದಾಗ ಹಿಂದೂ ಯುವಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಇದರಿಂದ ಪೊಲೀಸರು ಅವರಿಗೆ ಫಲಕಗಳನ್ನು ತೆಗೆದುಹಾಕಲು ಗಡುವು ನೀಡಿ, ಅಲ್ಲಿಯವರೆಗೆ ಫಲಕಗಳನ್ನು ತೆಗೆದುಹಾಕುವಂತೆ ತಿಳಿಸಿದ್ದರು; ಆದರೆ ಹಿಂದಿನ ರಾತ್ರಿಯೇ ಪೊಲೀಸರು ಸ್ವತಃ ಫಲಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೊನೆಯ ಮಾಹಿತಿ ಲಭ್ಯವಾದಾಗ, ಸ್ಥಳೀಯ ಹಿಂದುತ್ವನಿಷ್ಠ ನಾಯಕರು ಮತ್ತು ಕಾರ್ಯಕರ್ತರು ಆಗಸ್ಟ್ 29 ರಂದು ಸೇರಿ ಸಭೆ ನಡೆಸಲು ನಿರ್ಧರಿಸಿದ್ದರು.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !