ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಪೊಲೀಸರು ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ!

  • ವಿಧಾನಸಭೆಯಲ್ಲಿ ಭಾಜಪದ ಆರೋಪ

  • ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕೆಂದು ಭಾಜಪ ಕೂಡ ಬೇಡಿಕೆ ಇಟ್ಟಿತ್ತು ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಅವರು ಉತ್ತರಿಸಿದ್ದಾರೆ

ಬೆಂಗಳೂರು – ದಕ್ಷಿಣ ಕನ್ನಡದಲ್ಲಿ ಯಕ್ಷಗಾನ, ಕೋಲ, ರಥೋತ್ಸವ ಮತ್ತು ನೇಮೋತ್ಸವದಂತಹ ಕಾರ್ಯಕ್ರಮಗಳು ಹಲವು ವರ್ಷಗಳಿಂದ ನಡೆಯುತ್ತಿವೆ; ಆದರೆ ಇತ್ತೀಚೆಗೆ ಜನ್ಮಾಷ್ಟಮಿಯ ಸಮಯದಲ್ಲಿ ಪೊಲೀಸರು ಧ್ವನಿವರ್ಧಕಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಭಾಜಪ ಸರಕಾರದ ಅವಧಿಯಲ್ಲಿ ಹೀಗೆ ಎಂದೂ ಆಗಲಿಲ್ಲ; ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಂಪ್ರದಾಯಗಳಿಗೆ ತೊಂದರೆಗಳು ಹೆಚ್ಚಾಗಿವೆ ಎಂದು ಭಾಜಪ ಶಾಸಕ ವೇದವ್ಯಾಸ ಕಾಮತ್ ಅವರು ಆಗಸ್ಟ್ 20 ರಂದು ವಿಧಾನಸಭೆಯಲ್ಲಿ ಆರೋಪಿಸಿದರು. ಭಾಜಪ ಈ ಪ್ರಶ್ನೆ ಎತ್ತಿದಾಗ ಕಾಂಗ್ರೆಸ್ ಶಾಸಕರು ಗದ್ದಲ ಎಬ್ಬಿಸಲು ಪ್ರಾರಂಭಿಸಿದರು.

ಸಂಪ್ರದಾಯ ಮತ್ತು ಕಾನೂನುಗಳ ನಡುವೆ ಸಮತೋಲನ ಅಗತ್ಯ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲಿನ ನಿಷೇಧದ ಬಗ್ಗೆ ಭಾಜಪ ಕೂಡ ಈ ಹಿಂದೆ ಪ್ರಸ್ತಾಪಿಸಿತ್ತು ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

ಸಂಪಾದಕೀಯ ನಿಲುವು

  • ಹಿಂದೂಗಳ ಹಬ್ಬಗಳಲ್ಲಿ ಬಳಸುವ ಧ್ವನಿವರ್ಧಕಗಳಿಗೆ ಪೊಲೀಸರಿಂದ ಅನುಮತಿ ಪಡೆಯಲಾಗುತ್ತದೆ; ಆದರೆ ಹೆಚ್ಚಿನ ಮಸೀದಿಗಳಲ್ಲಿ ಅನುಮತಿ ಪಡೆಯದೆ ಅಥವಾ ನಿಯಮಗಳನ್ನು ಉಲ್ಲಂಘಿಸಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿರುತ್ತದೆ!
  • ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿರುವವರ ಅಜಾನ್ (ನಮಾಜ್‌ಗಾಗಿ ಕರೆಯುವುದು)ನಲ್ಲಿ ‘ಅಲ್ಲಾಹನ ಹೊರತು ಬೇರೆ ದೇವರು ಇಲ್ಲ’ ಎಂದು ಹೇಳಲಾಗುವುದನ್ನು ಬಹುಸಂಖ್ಯಾತ ಹಿಂದೂಗಳು ಏಕೆ ಕೇಳಿಸಿಕೊಳ್ಳಬೇಕು ?
  • ಹಿಂದೂಗಳ ಧಾರ್ಮಿಕ ಹಬ್ಬಗಳಲ್ಲಿ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳುವ ಕಾಂಗ್ರೆಸ್ ಸರಕಾರ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಇಂತಹ ಕಾಂಗ್ರೆಸ್‌ಗೆ ಮತ ನೀಡಿ ಅಧಿಕಾರಕ್ಕೆ ತಂದ ಹಿಂದೂಗಳಿಗೆ ಇದು ನಾಚಿಕೆಗೇಡಿನ ಸಂಗತಿ!