ರತ್ನಾಗಿರಿಯ ಸೌ. ಅಂಜಲಿ ಹನುಮಂತ ಕರಂಬೆಳಕರ (೬೮ ವರ್ಷ) ಸನಾತನದ ೧೩೩ ನೇ ಸಂತ ಪದವಿಯಲ್ಲಿ ವಿರಾಜಮಾನ

ಸೌ. ಅಂಜಲಿ ಹನುಮಂತ ಕರಂಬೆಳಕರ

ರತ್ನಾಗಿರಿ, ಆಗಸ್ಟ್ ೧೦ (ವಾರ್ತೆ) – ರತ್ನಾಗಿರಿಯಲ್ಲಿನ ಸನಾತನ ಸಂಸ್ಥೆಯ ಸಾಧಕಿ ಸೌ. ಅಂಜಲಿ ಹನುಮಂತ ಕರಂಬೆಳಕರ (೬೮ ವರ್ಷ) ಅವರು ೧೩೩ನೇ (ಸಮಷ್ಟಿ) ಸಂತ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ ಎಂಬ ಆನಂದವಾರ್ತೆಯನ್ನು ಆಗಸ್ಟ್ ೧೦ ರಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕಿ ಸದ್ಗುರು ಸ್ವಾತಿ ಖಾಡ್ಯೆ ಅವರು ತಿಳಿಸಿದರು. ಈ ವಿಷಯವನ್ನು ಅನೌಪಚಾರಿಕ ಸಮಾರಂಭದಲ್ಲಿ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸತ್ಯವಾನ ಕದಂ, ಕರಂಬೆಳಕರ ಕುಟುಂಬದವರು ಮತ್ತು ಸನಾತನದ ಸಾಧಕರು ಉಪಸ್ಥಿತರಿದ್ದರು.