
೧. ಪ್ರಯಾಣದ ಸಮಯದಲ್ಲಿ ತಮ್ಮ ಬಳಿ ಗ್ರಂಥಗಳು, ಕಿರುಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ನ ಪತ್ರಿಕೆಗಳನ್ನು ಇಟ್ಟುಕೊಳ್ಳಿ !
‘ಗಣೇಶೋತ್ಸವವು ೨೭ ಆಗಸ್ಟ್ದಿಂದ ೬ ಸಪ್ಟೆಂಬರ್ ೨೦೨೫ ರ ವರೆಗೆ ನಡೆಯಲಿದೆ. ಆ ಸಂದರ್ಭದಲ್ಲಿ, ಅನೇಕ ಸಾಧಕರು ತಮ್ಮ ತಮ್ಮ ಊರಿಗೆ ಹೋಗುತ್ತಾರೆ. ಪ್ರಯಾಣದ ಸಮಯದಲ್ಲಿ ಸಾಧ್ಯವಾದರೆ ತಮ್ಮ ಬಳಿ ಸನಾತನ ಸಂಸ್ಥೆಯು ಪ್ರಕಾಶಿಸಿರುವ ಗ್ರಂಥಗಳು, ಕಿರುಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಇಟ್ಟುಕೊಳ್ಳಿ. ಸಹ ಪ್ರಯಾಣಿಕರಿಗೆ ಅದರ ಮಹತ್ವವನ್ನು ತಿಳಿಸಿ. ಅದೇ ರೀತಿ ‘ಸನಾತನ ಪ್ರಭಾತ’ ಪತ್ರಿಕೆಗಳ ೨-೩ ಸಂಚಿಕೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಮತ್ತು ಅವುಗಳನ್ನು ತೋರಿಸಿ ಅದರ ಚಂದಾದಾರರಾಗಲು ಉದ್ಯುಕ್ತಗೊಳಿಸಿ.
೨. ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವವರ ಮಾಹಿತಿ ತಿಳಿಸಿ !
ಸಾಧಕರು ಸಹ ಪ್ರಯಾಣಿಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಾಧನೆ, ರಾಷ್ಟ್ರ ಮತ್ತು ಧರ್ಮದ ಕಾರ್ಯಗಳ ಬಗ್ಗೆ ತಿಳಿಸಬೇಕು. ಅವರು ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದಲ್ಲಿ ಅಥವಾ ಪತ್ರಿಕೆಗಳ ಚಂದಾದಾರರಾಗಲು ಉತ್ಸುಕರಾಗಿದ್ದರೆ, ಅವರ ಮಾಹಿತಿಯನ್ನು ಸಂಬಂಧಿಸಿದ ಜವಾಬ್ದಾರ ಸಾಧಕರಿಗೆ ತಿಳಿಸಬೇಕು.
೩. ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರಯಾಣದ ಸಮಯದಲ್ಲಿ ಗ್ರಂಥ ಮತ್ತು ಕಿರುಗ್ರಂಥಗಳ ಪ್ರಸಾರ ಮಾಡಿದ ನಂತರ ಅವರಿಗೆ ಉತ್ಸಾಹಪೂರ್ಣ ಪ್ರತಿಕ್ರಿಯೆ ಸಿಗುವುದು
ಕೆಲವು ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರಯಾಣ ಮಾಡುವಾಗ ಕೆಲವು ಸನಾತನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಅವರು ತಮ್ಮ ಸಹ ಪ್ರಯಾಣಿಕರಿಗೆ ಗ್ರಂಥಗಳನ್ನು ತೋರಿಸಿ ಮುಂಬರುವ ಹಬ್ಬಗಳಿಗೆ ಅನುಗುಣವಾಗಿ ಅವುಗಳ ಬಗ್ಗೆ ಮಾಹಿತಿಯನ್ನು ನೀಡಿ ಅದರ ಪ್ರಸಾರ ಮಾಡಿದರು. ಸಹಪ್ರಯಾಣಿಕರಿಂದ ಸಹ ಇದಕ್ಕೆ ಉತ್ಸಾಹಪೂರ್ಣ ಪ್ರತಿಕ್ರಿಯೆ ದೊರೆತಿದೆ.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !