Amit Shah : ಯಾವುದೇ ಹಿಂದೂ ಭಯೋತ್ಪಾದನಾಗಲು ಸಾಧ್ಯವಿಲ್ಲ! – ಅಮಿತ್ ಶಹಾ

ಕೇಂದ್ರ ಗೃಹ ಸಚಿವ ಅಮಿತ್ ಶಹಾ ಇವರಿಂದ ರಾಜ್ಯಸಭೆಯಲ್ಲಿ ಸ್ಪಷ್ಟನೆ !

ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ – ಯಾವುದೇ ಹಿಂದೂ ಭಯೋತ್ಪಾದಕ ಆಗಲು ಸಾಧ್ಯವಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರು ಜುಲೈ 30 ರಂದು ರಾಜ್ಯಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಕುರಿತ ಚರ್ಚೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಅಮಿತ್ ಶಹಾ ಮಂಡಿಸಿದ ಅಂಶಗಳು

1. ವಿರೋಧ ಪಕ್ಷಗಳು ಮತಗಳಿಗಾಗಿ ಭಯೋತ್ಪಾದನೆಗೆ ಧಾರ್ಮಿಕ ಬಣ್ಣ ನೀಡಲು ಪ್ರಯತ್ನಿಸಿದವು; ಆದರೆ ಭಾರತದ ಜನರು ಈ ಸುಳ್ಳನ್ನು ತಿರಸ್ಕರಿಸಿದರು. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದನ್ನು ಉತ್ತೇಜಿಸಿದವರಲ್ಲಿ ಒಬ್ಬರಾಗಿದ್ದರು.

2. ನವೆಂಬರ್ 26, 2008 ರ ಮುಂಬಯಿ ದಾಳಿಯ ಕುರಿತು ಮಾತನಾಡಿದ ಶಹಾ, ಈ ಭಯೋತ್ಪಾದಕ ದಾಳಿಗೆ ಹಿಂದೂ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಲು ಕೆಲವು ಪಕ್ಷಗಳು ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಂಡರು. ಇದೆಲ್ಲವನ್ನೂ ರಾಜಕೀಯ ಲಾಭಕ್ಕಾಗಿ ಮಾಡಲಾಗಿದೆ. ನಿರಪರಾಧಿಗಳನ್ನು ಜೈಲಿಗೆ ಹಾಕಲಾಯಿತು, ಹಿಂಸಿಸಲಾಯಿತು ಮತ್ತು ಕಳಂಕಿತ ಮಾಡಲಾಯಿತು. ನ್ಯಾಯಕ್ಕಾಗಿ ಅಲ್ಲ, ಚುನಾವಣಾ ಉದ್ದೇಶಕ್ಕಾಗಿ ಪಿತೂರಿ ಮಾಡಲು ಇದೆಲ್ಲವನ್ನೂ ಮಾಡಲಾಯಿತು.

3. ಈ ದೇಶದಲ್ಲಿ ಭಯೋತ್ಪಾದನೆ ಹರಡಲು ಏಕೈಕ ಕಾರಣ ಕಾಂಗ್ರೆಸ್‌ನ ಮತ ರಾಜಕೀಯ. ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಗೆ ತಪ್ಪಿತಸ್ಥನಾಗಿದ್ದ ಮೊಹಮ್ಮದ್ ಅಫ್ಜಲ್‌ನ ಮರಣದಂಡನೆಯನ್ನು ಪಿ. ಚಿದಂಬರಂ ಗೃಹ ಸಚಿವರಾಗಿದ್ದಾಗ ಹಲವು ವರ್ಷಗಳ ಕಾಲ ಜಾರಿಗೊಳಿಸಲು ಸಾಧ್ಯವಾಗಲಿಲ್ಲ.