ಶ್ರೀಲಂಕಾದ ರಾಮಸೇತುವಿನ ಬಳಿ ದೈವೀ ಪ್ರವಾಸದಲ್ಲಿದ್ದಾಗ ಶ್ರೀರಾಮನಲ್ಲಿ ಕೃತಜ್ಞತಾಪೂರ್ವಕವಾಗಿ ಪ್ರಾರ್ಥಿಸುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಭಾವಪೂರ್ಣ ಉದ್ಗಾರಗಳು !

ಶ್ರೀಲಂಕಾದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಹೂವನ್ನು ಅರ್ಪಿಸಿ ಭಾವಪೂರ್ಣವಾಗಿ ರಾಮ ಸೇತುವೆಗೆ ನಮಸ್ಕರಿಸುವ ಕ್ಷಣ

ನಾವು ಮಾಡುತ್ತಿರುವ ದೈವೀ ಪ್ರಯಾಣವು ಸುಖಕರವಾಗಿ ಮತ್ತು ಉತ್ತಮವಾಗಿ ಸಾಗಲಿ ಎಂದು ಸಾಧಕರು ಸತತವಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆಯ ಉರ್ಜೆ ಮತ್ತು ತಳಮಳದ ಸೇತುವೆಯಿಂದಲೇ ನಾವು ಇಂದು ರಾಮಸೇತುವಿನವರೆಗೆ ತಲುಪಿದ್ದೇವೆ. ಕಲಿಯುಗದಲ್ಲಿ ಶ್ರೀರಾಮನಂತೆ ರಾಮರಾಜ್ಯವನ್ನು ಸ್ಥಾಪಿಸಲು ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಸಾಧಕ ವಾನರಸೇನೆಗೆ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು !

‘ಹೇ ಪ್ರಭು ಶ್ರೀರಾಮ, ‘ಗುರುಗಳ ರಾಮರಾಜ್ಯ ಸ್ಥಾಪನೆಯ (ಹಿಂದೂ ರಾಷ್ಟ್ರ ಸ್ಥಾಪನೆಯ) ಈ ಈಶ್ವರಿ ಕಾರ್ಯದಲ್ಲಿ ನಮ್ಮೆಲ್ಲ ಸಾಧಕರಿಗೆ ಒಂದು ಅಳಿಲು ಸೇವೆಯನ್ನು ಸಲ್ಲಿಸಲು ಸಾಧ್ಯವಾಗಲಿ ಮತ್ತು ಗುರುಕೃಪಾಯೋಗದ ಸೇತುವೆಯ ಮೂಲಕ ಮಾರ್ಗಕ್ರಮಣವನ್ನು ಮಾಡಿ ಮೋಕ್ಷಪ್ರಾಪ್ತಿಯನ್ನು ಪಡೆಯಲು ಸಾಧ್ಯವಾಗಲಿ,’ ಎಂದು ನಿಮ್ಮ ಚರಣಗಳಲ್ಲಿ ಕಳಕಳಿಯಿಂದ ಪ್ರಾರ್ಥನೆ ಮಾಡುತ್ತಿದ್ದೇನೆ.’