ಗುರುಗಳ ಬೋಧನೆಯೊಂದಿಗೆ ಏಕರೂಪವಾಗುವ ಮಹತ್ವ !

(ಪೂ.) ಸಂದೀಪ ಆಳಶಿ

‘ಗುರುಗಳ ಸ್ಥೂಲ ರೂಪವೆಂದರೆ ಅವರ ದೇಹ ಮತ್ತು ಸೂಕ್ಷ್ಮ ರೂಪವೆಂದರೆ ಅವರ ಬೋಧನೆ ! ಸಾಧಕರು ಗುರುಗಳ ಸ್ಥೂಲ ರೂಪದೊಂದಿಗೆ ಮಾತ್ರವಲ್ಲದೇ, ಸೂಕ್ಷ್ಮ ರೂಪದೊಂದಿಗೆ ಏಕರೂಪವಾಗಬೇಕು. ಗುರುಗಳ ಸೂಕ್ಷ್ಮ ರೂಪದೊಂದಿಗೆ ಅಂದರೆ ಬೋಧನೆಯೊಂದಿಗೆ ಏಕರೂಪವಾಗಲು ಗುರುಗಳು ನೀಡಿದ ಬೋಧನೆಯನ್ನು ಸತತ ಆಚರಣೆಯಲ್ಲಿ ತರುವುದು (ಅನುಸರಿಸುವುದು) ಮಹತ್ವದ್ದಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದಲೂ ಸಾಧಕರಿಗೆ ಸಾಧನೆಯ ಎಲ್ಲ ಅಂಗಗಳಿಂದ ಬೋಧನೆಯನ್ನು ನೀಡುತ್ತಿದ್ದಾರೆ. ‘ಅವರ ಬೋಧನೆಯನ್ನು ನಾವು ನಿಜವಾಗಿಯೂ ಪ್ರತಿದಿನ ಆಚರಣೆಯಲ್ಲಿ ತರುತ್ತೇವೆಯೇ ?’, ಇದನ್ನು ಸಾಧಕರು ಅಂತರ್ಮುಖವಾಗಿ ವಿಚಾರ ಮಾಡಬೇಕು.’

– (ಪೂ.) ಸಂದೀಪ ಆಳಶಿ (೭.೨.೨೦೨೨)