
ಸೂರ್ಯೋದಯವಾದೊಡನೆ ಹೂವುಗಳು ಅರಳುತ್ತವೆ; ಆದರೆ ಸೂರ್ಯನು ‘ಇದನ್ನು ನಾನು ಮಾಡಿದೆ’ ಎಂದು ಹೇಳುವುದಿಲ್ಲ ! ಪರಾತ್ಪರ ಗುರು ಡಾ. ಜಯಂತ ಆಠವಲೆರೂಪಿ ಧರ್ಮಸೂರ್ಯನ ವಿಷಯದಲ್ಲಿಯೂ ಹೀಗೆಯೇ ಇದೆ ! ವಿವಿಧ ನಾಡಿಪಟ್ಟಿಗಳ ಮೂಲಕ ಮಹರ್ಷಿಗಳು ಮತ್ತು ಅನೇಕ ಸಂತರೂ, ‘ಭೂಮಿಯ ಮೇಲೆ ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನನವಾಗಿದ್ದು ಅವರ ಮೂಲಕವೇ ಆ ಕಾರ್ಯವಾಗಲಿದೆ’, ಎಂದು ಹೇಳಿದ್ದಾರೆ. ಅವರ ಸ್ಥೂಲದಲ್ಲಿನ ಕಾರ್ಯವು ಕೇವಲ ಶೇ. ೩೦ ರಷ್ಟಿದೆ, ಆದರೆ ಸೂಕ್ಷ್ಮದಲ್ಲಿನ ಕಾರ್ಯವು ಶೇ. ೭೦ ರಷ್ಟಿದೆ. ಪರಾತ್ಪರ ಗುರು ಡಾಕ್ಟರರಂತಹ ಅತ್ಯುಚ್ಚ ಕೋಟಿಯ ಸಂತರ ಅವ್ಯಕ್ತ ಸಂಕಲ್ಪ ಮತ್ತು ಅಸ್ತಿತ್ವದಿಂದ ಎಲ್ಲ ಕಾರ್ಯವೂ ತಾನಾಗಿಯೇ ನಡೆಯುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಸನಾತನದ ಸಂತರು ಮತ್ತು ಸಾಧಕರಿಗೂ ಹೆಜ್ಜೆ ಹೆಜ್ಜೆಗೂ ಇದರ ಅನುಭವವಾಗುತ್ತಿರುವುದರಿಂದ, ‘ಪರಾತ್ಪರ ಗುರು ಡಾಕ್ಟರರೇ ನಮ್ಮಿಂದ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಸಂತಸಂಘಟನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ’ ಎಂಬ ಭಾವ ವನ್ನು ಹೊಂದಿದ್ದಾರೆ. ಪರಾತ್ಪರ ಗುರು ಡಾಕ್ಟರರೂಪಿ ಧರ್ಮಸೂರ್ಯನಿಗೆ ಸೇವೆಯ ರೂಪದಲ್ಲಿ ಅರ್ಘ್ಯ ನೀಡುವ ಅವಕಾಶವನ್ನೂ ಅವರೇ ನೀಡುತ್ತಿದ್ದಾರೆ; ಆದ್ದರಿಂದ ಎಲ್ಲಾ ಸಾಧಕರು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಪರಾತ್ಪರ ಗುರು ಡಾಕ್ಟರರ ಚರಣ ಗಳಲ್ಲಿ ಕೋಟಿಶಃ ಕೃತಜ್ಞರಾಗಿದ್ದೇವೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !