Pakistan Rebuild Damaged Airbases : ಭಾರತದ ‘ಆಪರೇಷನ್ ಸಿಂಧೂರ್’ ದಾಳಿಯಿಂದ ನಾಶವಾದ ಭಯೋತ್ಪಾದಕ ನೆಲೆಗಳನ್ನು ಪುನಃ ನಿರ್ಮಿಸಲು ಪಾಕ್ ಸೇನೆ ₹40 ಕೋಟಿ ವಿನಿಯೋಗಿಸಲಿದೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರ ನಡೆಸಿ, ಪಾಕಿಸ್ತಾನದಲ್ಲಿರುವ ಲಷ್ಕರ್-ಎ-ತೋಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಒಂಬತ್ತು ನೆಲೆಗಳನ್ನು ನಾಶಪಡಿಸಿತು. ಈಗ, ಈ ನೆಲೆಗಳನ್ನು ಪುನರ್ನಿರ್ಮಿಸಲು ಪಾಕಿಸ್ತಾನಿ ಸೇನೆಯು 40 ಕೋಟಿ ರೂಪಾಯಿ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನವು ತನ್ನ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

೧. ಪಾಕಿಸ್ತಾನಿ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ ಮುನೀರ ಅವರು ಸ್ವತಃ ಮಧ್ಯಪ್ರವೇಶಿಸಿ ಈ ಸರಕಾರಿ ನಿಧಿಯನ್ನು ಒದಗಿಸಿದ್ದಾರೆ. ವಿಶೇಷವೆಂದರೆ, ಈ ನಿಧಿಯು ಭಯೋತ್ಪಾದಕ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಮದರಸಾಗಳು ಮತ್ತು ಮಸೀದಿಗಳಿಗೂ ಸಿಗಲಿದೆ.

೨. ಈ ನೆಲೆಗಳ ದುರಸ್ತಿಗಾಗಿ ಜೂನ್ 30 ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ. ಫೀಲ್ಡ್ ಮಾರ್ಷಲ್ ಮುನೀರ ಅವರು ಈ ನೆಲೆಗಳನ್ನು ದುರಸ್ತಿ ಮಾಡಲು ತಂಡವನ್ನು ಸಿದ್ಧಪಡಿಸಿದ್ದಾರೆ. ಮುನೀರ ಅವರು ಸ್ವತಃ ತಮ್ಮ ಮೇಲ್ವಿಚಾರಣೆ ಈ ಕೆಲಸಗಳನ್ನು ಮಾಡುತ್ತಿದ್ದಾರೆ.

೩. ಈ ನೆಲೆಗಳಲ್ಲಿರುವ ಮದರಸಾಗಳು ಜೂನ್ 20 ರಿಂದ ತೆರೆಯಬೇಕಿತ್ತು, ಆದರೆ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದ ಕಾರಣ, ಜುಲೈ 1 ರಂದು ತೆರೆಯಲಾಗುವುದು.

 

ಸಂಪಾದಕೀಯ ನಿಲುವು

  • ಇದು ಪಾಕಿಸ್ತಾನಿ ಸೇನೆಯು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ!
  • ಕೇವಲ ಭಯೋತ್ಪಾದಕ ಕ್ಯಾಂಪ್‌ಗಳನ್ನು ನಾಶಪಡಿಸುವುದರಿಂದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ನಿಲ್ಲುವುದಿಲ್ಲ, ಬದಲಾಗಿ ಪಾಕಿಸ್ತಾನಿ ಸೇನೆ ಮತ್ತು ಅಲ್ಲಿನ ಜಿಹಾದಿ ಮನಸ್ಥಿತಿಯನ್ನು ನಾಶಪಡಿಸುವುದು ಅವಶ್ಯಕ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಭಾರತ ಈಗ ಈ ಧೈರ್ಯವನ್ನು ತೋರಿಸಬೇಕು!