ಭಾರತವು ಇಸ್ರೇಲಿನಂತೆ ಮೊದಲು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಬೇಕಿತ್ತು !

ಇರಾನ್-ಇಸ್ರೇಲ್ ಯುದ್ಧದ ಕುರಿತು ರಕ್ಷಣಾತಜ್ಞರಾದ ಬ್ರಹಮಾ ಚೆಲಾನಿಯವರ ಅಭಿಪ್ರಾಯ

ನವದೆಹಲಿ – ವಾಯು ಯುದ್ಧದ ಮೊದಲ ಸಿದ್ಧಾಂತದ ಪ್ರಕಾರ, ಇಸ್ರೇಲ ತನ್ನ ಆರಂಭಿಕ ದಾಳಿಯಲ್ಲಿ ಇರಾನಿನ ವಾಯು ರಕ್ಷಣಾ ವ್ಯವಸ್ಥೆ ಮತ್ತು ‘ಬ್ಯಾಲಿಸ್ಟಿಕ್ ಮಿಸೈಲ್ ಲಾಂಚರ್‌’ಗಳನ್ನು ನಾಶಪಡಿಸಿತು. ಇದರಿಂದ ಇರಾನಿನ ಪ್ರತಿದಾಳಿಯು ಸಾಮರ್ಥ್ಯವು ದುರ್ಬಲವಾಯಿತು ಹಾಗೂ ಇಸ್ರೇಲಿಗೆ ಒಳಗೆ ಮೂಲದಲ್ಲಿ ದಾಳಿ ಮಾಡಲು ದಾರಿ ಸುಗಮವಾಯಿತು.

ಆದರೆ, ಭಾರತದ ರಾಜಕೀಯ ನಾಯಕತ್ವವು ಈ ಮೂಲಭೂತ ಸಿದ್ಧಾಂತವನ್ನು ನಿರ್ಲಕ್ಷಿಸಿತು. ಅವರು ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಮಾತ್ರ ದಾಳಿ ಮಾಡಲು ಹೇಳಿದ್ದರು. ಇದು ಕೆಲವು ಭಾರತೀಯ ಯುದ್ಧ ವಿಮಾನಗಳ ನಷ್ಟಕ್ಕೆ ಕಾರಣವಾಯಿತು ಎಂದು ರಕ್ಷಣಾ ಕ್ಷೇತ್ರದ ತಜ್ಞ ಬ್ರಹಮಾ ಚೆಲಾನಿಯವರು ಅಭಿಪ್ರಾಯಪಟ್ಟಿದ್ದಾರೆ.