|
ನವದೆಹಲಿ – ‘ಹಿಸ್ ಸ್ಟೋರಿ ಆಫ್ ಇತಿಹಾಸ್’ (ಅವನ ‘ಇತಿಹಾಸ’ದ ಕಥೆ) ಎಂಬ ಚಲನಚಿತ್ರವು ಮೇ 30 ರಂದು ಬಿಡುಗಡೆಯಾಗಿದೆ. ಇದು ಸ್ವತಂತ್ರ ಭಾರತದಲ್ಲಿ ಇತಿಹಾಸವನ್ನು ಹೇಗೆ ವಿರೂಪಗೊಳಿಸಲಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಲನಚಿತ್ರವು ಭೌತಶಾಸ್ತ್ರ ಕಲಿಸುವ ಪ್ರಾಧ್ಯಾಪಕ ನೀರಜ್ ಅತ್ರಿ ಅವರ ನಿಜ ಕಥೆಯ ಮೇಲೆ ಆಧಾರಿತವಾಗಿದೆ. ಚಲನಚಿತ್ರದ ಸಣ್ಣ ಜಾಹೀರಾತಿನಲ್ಲಿ ಹೇಳಿರುವಂತೆ, ಇತಿಹಾಸವು ಮಾಂತ್ರಿಕವಾಗಿದೆ. ವಾಸ್ತವದಲ್ಲಿ ನಡೆಯದ ಇತಿಹಾಸವನ್ನು ನಮ್ಮ ಮೇಲೆ ಹೇರಲಾಗಿದೆ. ಉದಾಹರಣೆಗೆ: ವಾಸ್ಕೋ-ಡ-ಗಾಮಾ ಭಾರತವನ್ನು ಕಂಡುಹಿಡಿದನು; ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಬ್ರಾಹ್ಮಣರು ಹೊರಗಿನಿಂದ ಭಾರತಕ್ಕೆ ಬಂದರು; ಮಹಿಳೆಯರಿಗೆ ಮತ್ತು ಶೂದ್ರರಿಗೆ ವೇದ ಪಠಣಕ್ಕೆ ಅವಕಾಶವಿರಲಿಲ್ಲ ಇತ್ಯಾದಿ.
🎬 The Real Protagonist of the Film “His Story of Itihaas” – Neeraj Atri says:
💬 “The Film Is Not Being Given Enough Screens!”
Speaking to Sanatan Prabhat, Mr. Neeraj Atri said:
🛡️ “This film exposes the anti-Hindu agenda. Since it challenges the established ecosystem, many… pic.twitter.com/Tw6oPJapmK— Sanatan Prabhat (@SanatanPrabhat) June 1, 2025
ಚಿತ್ರಕ್ಕೆ ಹೆಚ್ಚು ‘ಸ್ಕ್ರೀನ್’ಗಳನ್ನು ನೀಡುತ್ತಿಲ್ಲ! – ನೀರಜ್ ಅತ್ರಿ
ಈ ಕುರಿತು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡಿದ ಶ್ರೀ ಅತ್ರಿ, ಈ ಚಲನಚಿತ್ರವು ಹಿಂದೂ ವಿರೋಧಿಗಳ ಮುಖವಾಡವನ್ನು ಕಳಚುತ್ತದೆ. ಇದು ಪ್ರಬಲ ವ್ಯವಸ್ಥೆಗೆ ವಿರುದ್ಧವಾಗಿರುವುದರಿಂದ, ಅನೇಕ ಚಿತ್ರಮಂದಿರಗಳ ಮಾಲೀಕರು ಈ ಚಿತ್ರಕ್ಕೆ ‘ಸ್ಕ್ರೀನ್’ಗಳನ್ನು ನೀಡುತ್ತಿಲ್ಲ ಎಂದು ಗಮನಿಸಲಾಗಿದೆ. ಆದರೂ, ಈ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ. ಚಿತ್ರದ ಕುರಿತು ಮಾತನಾಡುತ್ತಾ, ಈ ಚಿತ್ರವು ಯುವ ಪೀಳಿಗೆಯನ್ನು ಹಿಂದೂ ವಿರೋಧಿಗಳನ್ನಾಗಿ ಮಾಡಲು ಹೇಗೆ ‘ಬ್ರೈನ್ವಾಶ್’ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಶಾಲೆಯಲ್ಲಿ ಇತಿಹಾಸ ಅಧ್ಯಯನದ ಮೂಲಕ ಮಕ್ಕಳ ಧರ್ಮದ ಬಗ್ಗೆ ನಕಾರಾತ್ಮಕ ಕಲ್ಪನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಹಿಂದೂ ಪೋಷಕರು ತಿಳಿದುಕೊಳ್ಳಬಹುದು. ಆದ್ದರಿಂದ, ಹೆಚ್ಚಿನ ಸಂಖ್ಯೆಯ ಹಿಂದೂಗಳು ತಮ್ಮ ಮಕ್ಕಳೊಂದಿಗೆ ಈ ಚಲನಚಿತ್ರವನ್ನು ನೋಡಬೇಕು ಎಂದು ಶ್ರೀ ಅತ್ರಿ ‘ಸನಾತನ ಪ್ರಭಾತ’ದ ಮೂಲಕ ಹಿಂದೂಗಳಿಗೆ ಕರೆ ನೀಡಿದ್ದಾರೆ. |
Too much fiction in this world
Too much bull shit in this world
Neeraj has been singularly waking Hindus up everyday
Watch his story!#HisStoryOfItihaas @5karma_films @AtriNeeraj https://t.co/58DmXzUYb8
— Kreately.in (@KreatelyMedia) May 31, 2025
ನೀರಜ್ ಅತ್ರಿ ಅವರು ಭೌತಶಾಸ್ತ್ರವನ್ನು ಕಲಿಸುತ್ತಿದ್ದಾಗ, ‘ಭಾರತೀಯ ವ್ಯವಸ್ಥೆ (ಎನ್.ಸಿ.ಇ.ಆರ್.ಟಿ.) ವಿದ್ಯಾರ್ಥಿಗಳಿಗೆ ಹೇಗೆ ತಪ್ಪು ಇತಿಹಾಸವನ್ನು ಕಲಿಸಿದೆ’ ಎಂಬುದನ್ನು ಅರ್ಥಮಾಡಿಕೊಂಡಿರುವುದನ್ನು ಚಲನಚಿತ್ರವು ತೋರಿಸುತ್ತದೆ. ವ್ಯವಸ್ಥೆಯ ವಿರುದ್ಧ ಅವರು ನಡೆಸಿದ ಹೋರಾಟ, ಇತಿಹಾಸದ ಪುಸ್ತಕಗಳಲ್ಲಿನ ಮಾಹಿತಿಯನ್ನು ಯಾವ ಆಧಾರದ ಮೇಲೆ ನೀಡಲಾಗಿದೆ, ಈ ಬಗ್ಗೆ ಅತ್ರಿ ಅವರು ಮಾಹಿತಿ ಹಕ್ಕಿನಡಿ ಹೇಗೆ ಅರ್ಜಿ ಸಲ್ಲಿಸಿದರು ಮತ್ತು ಅವರ ಒಟ್ಟಾರೆ ಹೋರಾಟದ ಮೇಲೆ ಈ ಚಲನಚಿತ್ರವು ಬೆಳಕು ಚೆಲ್ಲುತ್ತದೆ. ಅತ್ರಿ ಅವರ ಪಾತ್ರವನ್ನು ನಟ ಸುಬೋಧ್ ಭಾವೆ ನಿರ್ವಹಿಸಿದ್ದಾರೆ. ಮನ್ಪ್ರೀತ್ ಸಿಂಗ್ ಧಾಮಿ ಚಿತ್ರದ ಲೇಖಕರು ಮತ್ತು ನಿರ್ದೇಶಕರು ಮತ್ತು ‘ಪಂಚಕರ್ಮ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಿಸಿದೆ.
उद्यापासून #HisStoryOfItihaas हा आमचा हिंदी चित्रपट भारतभरात प्रदर्शित होत आहे.
एका सत्य घटनेवरून प्रेरित असलेला हा चित्रपट.
आवर्जून पहा. आवडला तर त्याच पूर्ण श्रेय ज्यांच्या कामावर चित्रपट बेतला आहे त्या “नीरज अत्री ” यांचे
आणि या चित्रपटाचे दिग्दर्शक मनप्रीत यांचे . pic.twitter.com/t0VOq3FDXi— Subodh Bhave सुबोध भावे (@subodhbhave09) May 29, 2025
| His Story Of Itihaas | Trailer | In cinemas on 30 May | Subodh Bhave, Yogendra Tiku, Ankur Vikal
ಸೌಜನ್ಯ : Panchkarma Films) |
This is You sir….who inspired us to make a movie.🙏🙏🙏 https://t.co/96iPM2T39b
— Subodh Bhave सुबोध भावे (@subodhbhave09) June 1, 2025
ಸಂಪಾದಕೀಯ ನಿಲುವುಶಾಲಾ ಪಠ್ಯಪುಸ್ತಕಗಳ ಮೂಲಕ ಭಾರತೀಯ ಇತಿಹಾಸದ ವಿಕೃತೀಕರಣವು ಸ್ವತಂತ್ರ ಭಾರತದಲ್ಲಿ ಹಿಂದೂ ವಿರೋಧಿ ವೈಚಾರಿಕ ಭಯೋತ್ಪಾದನೆಯ ಅತಿದೊಡ್ಡ ಪಿತೂರಿಯಾಗಿದೆ. ಇದನ್ನು ಬಹಿರಂಗಪಡಿಸುವ ಈ ಚಿತ್ರವನ್ನು ನೋಡುವುದು ಮತ್ತು ನಿಮ್ಮ ಮಕ್ಕಳಿಗೆ ತೋರಿಸುವುದು ಪ್ರತಿಯೊಬ್ಬ ಹಿಂದೂವಿನ ಧರ್ಮ ಮತ್ತು ರಾಷ್ಟ್ರ ಕರ್ತವ್ಯ ಎಂಬುದನ್ನು ಗಮನಿಸಿ! |


Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ