Terrorists Returning To Their Camps : ‘ಆಪರೇಷನ್ ಸಿಂದೂರ’ನ ನಂತರ ಪುನಃ ತಮ್ಮ ತಾಣಗಳಿಗೆ ಮರಳುತ್ತಿರುವ ಜಿಹಾದಿ ಭಯೋತ್ಪಾದಕರು !

ಪುನಃ ಕಾಶ್ಮೀರದಲ್ಲಿ ನುಸುಳಿ ದೊಡ್ಡ ಅನಾಹುತ ನಡೆಸುವ ಸಾಧ್ಯತೆ !

ಇನ್ಸ್‌ಪೆಕ್ಟರ್ ಜನರಲ್ ಶಶಾಂಕ್ ಆನಂದ್ (ಬಲ)

ನವದೆಹಲಿ – ಇತ್ತೀಚೆಗಷ್ಟೆ ಭಾರತದಿಂದ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನವು ತನ್ನ ಭಾರತ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಸಿದ್ಧವಿಲ್ಲ. ಗಡಿ ಭದ್ರತಾ ಪಡೆಯ ಅನುಸಾರ, ‘ಆಪರೇಷನ್ ಸಿಂದೂರ’ನ ನಂತರ ಜಿಹಾದಿ ಭಯೋತ್ಪಾದಕರು ಪುನಃ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ತಾಣಗಳಿಗೆ ಮರಳುತ್ತಿದ್ದಾರೆ ಮತ್ತು ತರಬೇತಿ ಪಡೆಯುತ್ತಿದ್ದಾರೆ. ಆದುದರಿಂದ, ಅವರು ಜಮ್ಮು-ಕಾಶ್ಮೀರದಲ್ಲಿ ಪುನಃ ನುಸುಳಿ ದೊಡ್ಡ ಅನಾಹುತವನ್ನು ಮಾಡಬಹುದು’ ಎಂಬ ಮಾಹಿತಿಯು ಗುಪ್ತಚರ ಇಲಾಖೆಗೆ ದೊರೆತಿದೆ. ಇದರಿಂದ ಭದ್ರತಾ ಏಜೆನ್ಸಿಗಳು ಎಚ್ಚೆತ್ತುಕೊಂಡಿವೆ ಎಂದು ದಳದ ಮಹಾನಿರೀಕ್ಷಕರಾದ ಶಶಾಂಕ ಆನಂದರವರು ತಿಳಿಸಿದ್ದಾರೆ.

1. ಶಶಾಂಕ ಆನಂದರವರು ಮಾತನಾಡುತ್ತ, ನಮಗೆ ನಿರಂತರವಾಗಿ ವಿವಿಧ ರೀತಿಯ ರಹಸ್ಯ ಮಾಹಿತಿಗಳು ದೊರೆಯುತ್ತಿವೆ. ಆದರೂ, ಭಯೋತ್ಪಾದಕರು ಯಾವಾಗ ನುಸುಳಲು ಪ್ರಯತ್ನಿಸುವರು ಎಂಬುದು ಇನ್ನೂ ತಿಳಿದಿಲ್ಲ; ಆದರೆ ಭದ್ರತಾ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ, ಎಂದು ಹೇಳಿದರು.

2. ಶಶಾಂಕ ಆನಂದರವರು ಮೇ 10 ರಂದು ಪಾಕಿಸ್ತಾನದ ದುಃಸಾಹಸದ ಬಗ್ಗೆ ಹೀಗೆ ವಿವರಿಸಿದರು, ಪಾಕಿಸ್ತಾನವು ನಮ್ಮ ಚೌಕಿಗಳನ್ನು ಗುರಿಯಾಗಿಸಲು ಡ್ರೋನ್ ಗಳನ್ನು ಕಳುಹಿಸಿತ್ತು. ಸೈನಿಕರು ಆ ಡ್ರೋನ್ ಗಳನ್ನು ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾಗ, ಒಂದು ಡ್ರೋನ್ ಬಾಂಬ್ ಹಾಕಿತು, ಅದರಲ್ಲಿ ನಮ್ಮ ಉಪನಿರೀಕ್ಷಕರಾದ ಮಹಮ್ಮದ ಇಮ್ತಿಯಾಜ, ಸಿಪಾಯಿ ದೀಪಕ ಕುಮಾರ ಮತ್ತು ಭಾರತೀಯ ಸೇನೆಯ ನಾಯಕ ಸುನಿಲ ಕುಮಾರರವರು ಸಾವನ್ನಪ್ಪಿದರು. ಗಡಿ ಭದ್ರತಾ ದಳವು ಈ ಸೈನಿಕರ ಹೆಸರಿನಲ್ಲಿ ತಮ್ಮ 2 ಚೌಕಿಗಳು ಮತ್ತು ಸಾಂಬಾ ಸೆಕ್ಟರ್ನಲ್ಲಿರುವ ಒಂದು ಚೌಕಿಗೆ ‘ಸಿಂದೂರ’ ಎಂದು ಹೆಸರಿಸಲು ಪ್ರಸ್ತಾಪಿಸಿದೆ.

3. ಈ ಹಿಂದೆ ಮೇ 13 ರಂದು ‘ಆಪರೇಷನ್ ಕೆಲರ’ನಲ್ಲಿ ಭಾರತೀಯ ಸೇನೆಯು ಲಷ್ಕರ್-ಎ-ತೈಬಾದ 4 ಭಯೋತ್ಪಾದಕರ ಹತ್ಯೆ ಮಾಡಿತ್ತು. ಈ ಭಯೋತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಸಂಪಾದಕೀಯ ನಿಲುವು

  • ಪಹಲಗಾಮನ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂದೂರ್’ ಮೂಲಕ ಭಯೋತ್ಪಾದಕರ 9 ತಾಣಗಳನ್ನು ನಾಶಪಡಿಸಿದೆ, ಆದರೂ ಭಯೋತ್ಪಾದನೆ ಇನ್ನೂ ನಾಶವಾಗಿಲ್ಲ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅನೇಕ ತಾಣಗಳಿದ್ದು, ಅಲ್ಲಿ ಸಾವಿರಾರು ಭಯೋತ್ಪಾದಕರು ತರಬೇತಿ ಪಡೆಯುತ್ತಿದ್ದಾರೆ. ಆದುದರಿಂದ ಸಂಪೂರ್ಣ ಪಾಕಿಸ್ತಾನವನ್ನು ನಾಶಪಡಿಸದ ಹೊರತು ಕಾಶ್ಮೀರದಲ್ಲಿ ಭಯೋತ್ಪಾದನೆ ಎಂದಿಗೂ ನಿಲ್ಲುವುದಿಲ್ಲ ಎಂಬುದು ವಾಸ್ತವವಾಗಿದೆ !
  • ಭಯೋತ್ಪಾದಕರು ಭಾರತದಲ್ಲಿ ನುಸುಳುವ ಮತ್ತು ನಂತರ ಅವರನ್ನು ಕೊಲ್ಲಲು ಕಾಯುವ ಬದಲು, ಭಾರತವು ಈಗಲೇ ಈ ತಾಣಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಭಯೋತ್ಪಾದಕರನ್ನು ಕೊಲ್ಲಬೇಕು. ಈ ಪ್ರಕ್ರಿಯೆಯು ನಿರಂತರವಾಗಿ ಮುಂದುವರಿದರೆ ಮಾತ್ರ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬಹುದು !