ಪುನಃ ಕಾಶ್ಮೀರದಲ್ಲಿ ನುಸುಳಿ ದೊಡ್ಡ ಅನಾಹುತ ನಡೆಸುವ ಸಾಧ್ಯತೆ !

ನವದೆಹಲಿ – ಇತ್ತೀಚೆಗಷ್ಟೆ ಭಾರತದಿಂದ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನವು ತನ್ನ ಭಾರತ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಸಿದ್ಧವಿಲ್ಲ. ಗಡಿ ಭದ್ರತಾ ಪಡೆಯ ಅನುಸಾರ, ‘ಆಪರೇಷನ್ ಸಿಂದೂರ’ನ ನಂತರ ಜಿಹಾದಿ ಭಯೋತ್ಪಾದಕರು ಪುನಃ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ತಾಣಗಳಿಗೆ ಮರಳುತ್ತಿದ್ದಾರೆ ಮತ್ತು ತರಬೇತಿ ಪಡೆಯುತ್ತಿದ್ದಾರೆ. ಆದುದರಿಂದ, ಅವರು ಜಮ್ಮು-ಕಾಶ್ಮೀರದಲ್ಲಿ ಪುನಃ ನುಸುಳಿ ದೊಡ್ಡ ಅನಾಹುತವನ್ನು ಮಾಡಬಹುದು’ ಎಂಬ ಮಾಹಿತಿಯು ಗುಪ್ತಚರ ಇಲಾಖೆಗೆ ದೊರೆತಿದೆ. ಇದರಿಂದ ಭದ್ರತಾ ಏಜೆನ್ಸಿಗಳು ಎಚ್ಚೆತ್ತುಕೊಂಡಿವೆ ಎಂದು ದಳದ ಮಹಾನಿರೀಕ್ಷಕರಾದ ಶಶಾಂಕ ಆನಂದರವರು ತಿಳಿಸಿದ್ದಾರೆ.
🚨Terrorists are returning to their camps near LoC – Jammu BSF IG Shashank Anand
🛑A fresh wave of infiltration in Kashmir could lead to another major terror strike.
👉India’s swift response to the Pahalgam attack, “Operation Sindoor”, wiped out nine terror camps. However… pic.twitter.com/sQRC1FWRaw
— Sanatan Prabhat (@SanatanPrabhat) May 28, 2025
1. ಶಶಾಂಕ ಆನಂದರವರು ಮಾತನಾಡುತ್ತ, ನಮಗೆ ನಿರಂತರವಾಗಿ ವಿವಿಧ ರೀತಿಯ ರಹಸ್ಯ ಮಾಹಿತಿಗಳು ದೊರೆಯುತ್ತಿವೆ. ಆದರೂ, ಭಯೋತ್ಪಾದಕರು ಯಾವಾಗ ನುಸುಳಲು ಪ್ರಯತ್ನಿಸುವರು ಎಂಬುದು ಇನ್ನೂ ತಿಳಿದಿಲ್ಲ; ಆದರೆ ಭದ್ರತಾ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ, ಎಂದು ಹೇಳಿದರು.
2. ಶಶಾಂಕ ಆನಂದರವರು ಮೇ 10 ರಂದು ಪಾಕಿಸ್ತಾನದ ದುಃಸಾಹಸದ ಬಗ್ಗೆ ಹೀಗೆ ವಿವರಿಸಿದರು, ಪಾಕಿಸ್ತಾನವು ನಮ್ಮ ಚೌಕಿಗಳನ್ನು ಗುರಿಯಾಗಿಸಲು ಡ್ರೋನ್ ಗಳನ್ನು ಕಳುಹಿಸಿತ್ತು. ಸೈನಿಕರು ಆ ಡ್ರೋನ್ ಗಳನ್ನು ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾಗ, ಒಂದು ಡ್ರೋನ್ ಬಾಂಬ್ ಹಾಕಿತು, ಅದರಲ್ಲಿ ನಮ್ಮ ಉಪನಿರೀಕ್ಷಕರಾದ ಮಹಮ್ಮದ ಇಮ್ತಿಯಾಜ, ಸಿಪಾಯಿ ದೀಪಕ ಕುಮಾರ ಮತ್ತು ಭಾರತೀಯ ಸೇನೆಯ ನಾಯಕ ಸುನಿಲ ಕುಮಾರರವರು ಸಾವನ್ನಪ್ಪಿದರು. ಗಡಿ ಭದ್ರತಾ ದಳವು ಈ ಸೈನಿಕರ ಹೆಸರಿನಲ್ಲಿ ತಮ್ಮ 2 ಚೌಕಿಗಳು ಮತ್ತು ಸಾಂಬಾ ಸೆಕ್ಟರ್ನಲ್ಲಿರುವ ಒಂದು ಚೌಕಿಗೆ ‘ಸಿಂದೂರ’ ಎಂದು ಹೆಸರಿಸಲು ಪ್ರಸ್ತಾಪಿಸಿದೆ.
#WATCH | Jammu | BSF IG Jammu Shashank Anand says, “We are getting many inputs regarding terrorists returning to their launchpads & camps and possible infiltration along LoC & IB. Security Forces will have to remain alert.” pic.twitter.com/ASd3rauAq4
— ANI (@ANI) May 27, 2025
3. ಈ ಹಿಂದೆ ಮೇ 13 ರಂದು ‘ಆಪರೇಷನ್ ಕೆಲರ’ನಲ್ಲಿ ಭಾರತೀಯ ಸೇನೆಯು ಲಷ್ಕರ್-ಎ-ತೈಬಾದ 4 ಭಯೋತ್ಪಾದಕರ ಹತ್ಯೆ ಮಾಡಿತ್ತು. ಈ ಭಯೋತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್