Rajdeep Sardesai On POK : ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿ !’

ಇಂಡಿಯಾ ಟುಡೇ’ ಪತ್ರಕರ್ತ ರಾಜದೀಪ ಸರದೇಸಾಯಿ ಅವರ ರಾಷ್ಟ್ರಘಾತುಕ ಸಲಹೆ

ಇಂಡಿಯಾ ಟುಡೇ ಪತ್ರಕರ್ತ ರಾಜದೀಪ್ ಸರ್ದೇಸಾಯಿ

ನವದೆಹಲಿ – ‘ಇಂಡಿಯಾ ಟುಡೇ’ ನಿಯತಕಾಲಿಕೆಯ ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಒಂದು ವಿಡಿಯೋ ಪ್ರಸಾರವಾಗಿದೆ. ‘ಇಂಡಿಯಾ ಟುಡೇ’ ಮೇಲಿನ ಚರ್ಚೆಯ ಈ ವಿಡಿಯೋವನ್ನು ಮೇ 22, 2025 ರಂದು ‘ಇಂಡಿಯಾ ಟುಡೇ’ಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಬಗ್ಗೆ ಪರಿಗಣಿಸಬೇಕು ಮತ್ತು ನೆರೆಯ ದೇಶದೊಂದಿಗಿನ ವಿವಾದಗಳಿಗೆ ‘ಶಾಶ್ವತ ಪರಿಹಾರ’ ಕಂಡುಕೊಳ್ಳಲು ನಿಯಂತ್ರಣ ರೇಖೆಯನ್ನು (ಎಲ್.ಓ.ಸಿ.) ಅಂತರರಾಷ್ಟ್ರೀಯ ಗಡಿಯಾಗಿ ಸ್ವೀಕರಿಸಬೇಕು, ಎಂದು ಸಲಹೆ ನೀಡಿದ್ದಾರೆ.

ರಾಜದೀಪ ಸರದೇಸಾಯಿ ಇವರು,

1. “ನಾವು ಮೂಲ ವಿಷಯದತ್ತ ಗಮನ ಹರಿಸುವವರೆಗೂ ಶಾಶ್ವತ ಪರಿಹಾರ ಸಿಗುವುದಿಲ್ಲ. ನಾವು ಪಾಕಿಸ್ತಾನದೊಂದಿಗೆ ಭಯೋತ್ಪಾದನೆಯ ಬಗ್ಗೆ ಮಾತನಾಡಬೇಕಾಗಿದೆ. ಹಾಗೂ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಮ್ಮ ಆಂತರಿಕ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.”

2. “ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹೇಗೆ ವಶಪಡಿಸಿಕೊಳ್ಳುತ್ತೇವೆ? ನಮ್ಮಲ್ಲಿ ಎರಡು ಆಯ್ಕೆಗಳಿವೆ. ಒಂದು, ಪ್ರಸ್ತುತ ನಿಯಂತ್ರಣ ರೇಖೆಯನ್ನು ಅಂತರರಾಷ್ಟ್ರೀಯ ಗಡಿಯಾಗಿ ಸ್ವೀಕರಿಸುವುದು. ನನ್ನ ಪ್ರಕಾರ, ಇದು ಒಂದು ಸಂಭವನೀಯ ಪರಿಹಾರ ಆಗಬಹುದು.”

3. “ನಾಳೆ ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋದರೆ ಪಾಕಿಸ್ತಾನ ಅದನ್ನು ಬಿಟ್ಟುಕೊಡುತ್ತದೆ ಎಂದು ನೀವು ಭಾವಿಸುತ್ತೀರಾ?” ಎಂದು ರಾಜದೀಪ ಸರದೇಸಾಯಿ ಪ್ರಶ್ನಿಸಿದರು. ಅಲ್ಲದೆ, “ನಾವು ಪಾಕಿಸ್ತಾನದ ಪ್ರತಿದಾಳಿ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಬಾರದು” ಎಂದೂ ಅವರು ಹೇಳಿದರು. (ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಸರದೇಸಾಯಿ ಅವರಿಗೆ ಮಾಹಿತಿ ಹೇಗೆ ಸಿಕ್ಕಿತು? ಪಾಕಿಸ್ತಾನದ ಸಾಮರ್ಥ್ಯ ಏನು ಎಂಬುದನ್ನು ಭಾರತವು ನಡೆಸಿದ ಪ್ರತಿದಾಳಿಯ ಸಮಯದಲ್ಲಿ ಇಡೀ ಜಗತ್ತು ನೋಡಿದೆ. ಭಾರತಕ್ಕಿಂತ ಪಾಕಿಸ್ತಾನದ ಮೇಲೆ ಹೆಚ್ಚು ವಿಶ್ವಾಸ ಇಡುವ ಸರದೇಸಾಯಿ ಭಾರತದ ಪ್ರಜೆಯೋ ಅಥವಾ ಪಾಕಿಸ್ತಾನದ ಪ್ರಜೆಯೋ? – ಸಂಪಾದಕರು)

ಸಂಪಾದಕೀಯ ನಿಲುವು

  • ಇಂತಹ ಯೋಚನೆ ಮನಸ್ಸಿಗೆ ಬರುವುದಾದರೂ ಹೇಗೆ? ಮತ್ತು ಅದನ್ನು ಹೇಳಲು ಧೈರ್ಯವಾದರೂ ಹೇಗೆ ಬರುತ್ತದೆ? ಇದರ ಹಿಂದಿರುವ ಮನಸ್ಥಿತಿಯನ್ನು ನೋಡಿದಾಗ ಇಂತಹವರ ಚಿಂತನೆ ರಾಷ್ಟ್ರಘಾತಕವೇ ಆಗಿರುತ್ತದೆ ಎಂದು ಗಮನಕ್ಕೆ ಬರುತ್ತದೆ. ಇಂತಹವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆ ವಿಧಿಸುವುದು ಅವಶ್ಯಕವಾಗುತ್ತದೆ.
  • ಇಂತಹ ರಾಷ್ಟ್ರಘಾತಕ ಪತ್ರಕರ್ತರು ವೈಚಾರಿಕ ಭಯೋತ್ಪಾದಕರೇ ಆಗಿದ್ದಾರೆ. ಇವರು ತಮ್ಮ ವೃತ್ತಿಜೀವನದಲ್ಲಿ ದೇಶಕ್ಕೆ ಎಷ್ಟು ಪ್ರಮಾಣದಲ್ಲಿ ವೈಚಾರಿಕ ಹಾನಿ ಮಾಡಿರಬಹುದು ಎಂದು ಯೋಚಿಸದಿರುವುದೇ ಉತ್ತಮ!