ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ 10 ಸಂಬಂಧಿಕರ ಸಾವು
ನವದೆಹಲಿ – ಭಾರತದ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ 10 ಸಂಬಂಧಿಕರು ಮತ್ತು ಆತನ 4 ಆಪ್ತ ಭಯೋತ್ಪಾದಕ ಸಹಚರರು ಹತರಾಗಿದ್ದಾರೆ. ಬಹಾವಲಪುರದಲ್ಲಿರುವ ಜೈಶ್ ನ ಕೇಂದ್ರ ಕಚೇರಿಯಾದ ಮರ್ಕಜ್ ಸುಭಾನ್ ಅಲ್ಲಾ ಮಸೀದಿಯ ಮೇಲೆ 4 ಕ್ಷಿಪಣಿಗಳಿಂದ ನಡೆಸಿದ ದಾಳಿಯಲ್ಲಿ ಇವರು ಹತರಾದರು. ಈ ಬಗ್ಗೆ ಮಸೂದ್ ಅಜರ್ ಪ್ರತಿಕ್ರಿಯಿಸಿದ್ದು, ‘ನನ್ನ ಅಕ್ಕ ಮತ್ತು ಆಕೆಯ ಪತಿ, ನನ್ನ ಸೋದರಳಿಯ ಮತ್ತು ಅವನ ಪತ್ನಿ, ನನ್ನ ಸೋದರ ಸೊಸೆ ಮತ್ತು ಆಕೆಯ 5 ಮಕ್ಕಳು ಹತರಾಗಿದ್ದಾರೆ. ಹಾಗೆಯೇ ಆಪ್ತ ಸಹಚರರು ಕೂಡ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ನಾನೂ ಕೂಡ ಸತ್ತಿದ್ದರೆ ಚೆನ್ನಾಗಿತ್ತು.’
‘ನಾವು ಹಿಂದೆ ಸರಿಯಲು ಸಿದ್ಧರಿದ್ದೇವೆ’ ಎಂಬ ಹೇಳಿಕೆ !ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಈ ದಾಳಿ ಬಗ್ಗೆ ಮಾತನಾಡಿ, ಪಾಕಿಸ್ತಾನವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ; ಆದರೆ ಭಾರತವು ದಾಳಿಯನ್ನು ನಿಲ್ಲಿಸಿದರೆ, ನಾವು ಕೂಡ ಪ್ರತಿದಾಳಿಯನ್ನು ನಿಲ್ಲಿಸುತ್ತೇವೆ. ಭಾರತವು ಹಿಂದೆ ಸರಿಯಲು ಸಿದ್ಧವಿದ್ದರೆ, ನಾವು ಕೂಡ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಪಾಕಿಸ್ತಾನವು ಶಾಂತಿಯ ಪ್ರಸ್ತಾಪವನ್ನು ಮುಂದಿಡುತ್ತಿದೆ ಮತ್ತು ಉದ್ವಿಗ್ನತೆ ಹೆಚ್ಚಾಗದಂತೆ ತಡೆಯುತ್ತಿದೆ ಎಂದವರು ಹೇಳಿದರು. ಅಣುಬಾಂಬ್ ಬೆದರಿಕೆ ಹಾಕಿದ್ದ ಪಾಕಿಸ್ತಾನದ ರಕ್ಷಣಾ ಸಚಿವರು ಈಗ ಭಯಭೀತರಾಗಿದ್ದಾರೆ |
ಲಷ್ಕರ್-ಎ-ತೊಯ್ಬಾ ಕಮಾಂಡರ್ ಸಾವು
ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಮುರಿದ್ಕೆಯ ಮರ್ಕಜ್ ತಯ್ಯಬಾ ಮೇಲಿನ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಹಾಫಿಜ್ ಅಬ್ದುಲ್ ಮಲಿಕ್ ಸಾವನ್ನಪ್ಪಿದ್ದಾನೆ. ಮಲಿಕ್ ಈ ಉಗ್ರ ಸಂಘಟನೆಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದನು. ಅವನು ಅನೇಕ ವರ್ಷಗಳಿಂದ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಉಗ್ರನಾಗಿದ್ದನು.
ದಾಳಿಯಲ್ಲಿ 26 ಮಂದಿ ಸಾವು, 45 ಮಂದಿಗೆ ಗಾಯ – ಪಾಕ್ ಸೇನೆ
ಪಾಕಿಸ್ತಾನದ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಅವರು ಮಾತನಾಡಿ, ಭಾರತವು 24 ಕ್ಷಿಪಣಿಗಳನ್ನು ಹಾರಿಸಿದೆ. ಇದರಲ್ಲಿ 26 ಮಂದಿ ಮೃತಪಟ್ಟಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುಪಡೆಯ ಎಲ್ಲಾ ವಿಮಾನಗಳು ಮತ್ತು ಆಸ್ತಿಗಳು ಸುರಕ್ಷಿತವಾಗಿವೆ. ಎರಡೂ ದೇಶಗಳ ಯುದ್ಧ ವಿಮಾನಗಳು ಪರಸ್ಪರ ವಾಯು ಗಡಿಯನ್ನು ಉಲ್ಲಂಘಿಸಿಲ್ಲ. ಭಾರತವು ದಾಳಿ ಮಾಡಿದಾಗ, ಪಾಕಿಸ್ತಾನದ ವಾಯು ಗಡಿಯಲ್ಲಿ 57 ಅಂತರಾಷ್ಟ್ರೀಯ ವಿಮಾನಗಳು ಮತ್ತು ಅನೇಕ ದೇಶೀಯ ವಿಮಾನಗಳಿದ್ದವು. ಭಾರತವು ಸಾವಿರಾರು ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ. ಭಾರತದ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ಸೇನಾ ನೆಲೆಗಳನ್ನು ನಾಶಪಡಿಸಲಾಗಿದೆ. ಹಾಗೆಯೇ 4 ಭಾರತೀಯ ಯುದ್ಧ ವಿಮಾನಗಳು ಮತ್ತು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವು ನೀಲಂ-ಝೀಲಂ ಜಲವಿದ್ಯುತ್ ಯೋಜನೆಯ ನೋಸೆರಿ ಅಣೆಕಟ್ಟನ್ನು ಗುರಿಯಾಗಿಸಿ ಹಾನಿ ಮಾಡಿದೆ. ಜಲವಿದ್ಯುತ್ ಯೋಜನೆಯ ಮೇಲಿನ ದಾಳಿಯನ್ನು ಎಂದಿಗೂ ನಾವು ಒಪ್ಪುವುದಿಲ್ಲ. ಇಂತಹ ದಾಳಿಗಳಿಂದ ಎರಡೂ ದೇಶಗಳ ನಡುವೆ ದೊಡ್ಡ ಬಿಕ್ಕಟ್ಟು ಉಂಟಾಗಬಹುದು ಎಂದು ಚೌಧರಿ ಎಚ್ಚರಿಸಿದ್ದಾರೆ.
‘ಭಾರತದ ದಾಳಿಯಲ್ಲಿ ಅನೇಕ ನಾಗರಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ!’ – ಪಾಕಿಸ್ತಾನ
ಸಂಪಾದಕೀಯ ನಿಲುವುಭಾರತವು ಜಿಹಾದಿ ಭಯೋತ್ಪಾದಕರನ್ನು ಕೊಂದಿದ್ದರೂ ಪಾಕ್ ನಾಗರಿಕರನ್ನು ಕೂಡ ಕೊಂದಿದೆ ಎಂದು ಜಗತ್ತಿಗೆ ತೋರಿಸಲು ಪಾಕ್ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಆರೋಪ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ! |
ಪಾಕಿಸ್ತಾನವು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿ ಭಾರತದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಿದೆ. ಭಾರತದ ದಾಳಿಯಲ್ಲಿ ಅನೇಕ ನಾಗರಿಕರು ಹತರಾಗಿದ್ದಾರೆ, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಅನೇಕ ನಾಗರಿಕರು ಗಾಯಗೊಂಡಿದ್ದಾರೆ. ಭಾರತದ ದಾಳಿಗಳು ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಗಳಾಗಿವೆ. ಪಾಕಿಸ್ತಾನವು ಭಾರತದ ಈ ಬೆದರಿಕೆಯ ಧೋರಣೆಯನ್ನು ವಿರೋಧಿಸುತ್ತದೆ. ಇಂತಹ ಬೇಜವಾಬ್ದಾರಿ ನಡವಳಿಕೆಯಿಂದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಅಪಾಯ ಉಂಟಾಗುತ್ತದೆ ಎಂದು ಭಾರತದ ರಾಯಭಾರಿಗಳಿಗೆ ಪಾಕಿಸ್ತಾನವು ಎಚ್ಚರಿಕೆ ನೀಡಿದೆ.
‘ಭಾರತದ ಸೇನಾ ಕಾರ್ಯಾಚರಣೆ ದುರದೃಷ್ಟಕರ!’ – ಚೀನ
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಭಾರತದ ಕಾರ್ಯಾಚರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ಸೇನಾ ಕಾರ್ಯಾಚರಣೆ ದುರದೃಷ್ಟಕರವಾಗಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಮಗೆ ಕಾಳಜಿ ಇದೆ. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಶಾಂತಿ ಮತ್ತು ಸ್ಥಿರತೆಗೆ ಆದ್ಯತೆ ನೀಡುವಂತೆ ನಾವು ಉಭಯ ದೇಶಗಳಿಗೆ ಮನವಿ ಮಾಡುತ್ತೇವೆ. ಸಂಯಮದಿಂದ ವರ್ತಿಸಿ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.
ಟರ್ಕಿಯ ವಿದೇಶಾಂಗ ಸಚಿವ ಹಕಾನ ಫಿದಾನ ಅವರು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ ಡಾರ್ ಅವರಿಗೆ ದೂರವಾಣಿ ಕರೆ ಮಾಡಿ ಟರ್ಕಿ ಪಾಕ್ ನೊಂದಿಗೆ ನಿಂತಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತಕ್ಕೆ ಇಸ್ರೇಲ್ ಬೆಂಬಲ
ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ ಅಜರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಇಸ್ರೇಲ್ ಭಾರತದ ಸ್ವಯಂ ರಕ್ಷಣೆಯ ಹಕ್ಕನ್ನು ಬೆಂಬಲಿಸುತ್ತದೆ. ಆತಂಕವಾದಿಗಳಿಗೆ ಇದನ್ನು ತಿಳಿದಿರಬೇಕು: ನಿರಪರಾಧ ಜನರ ವಿರುದ್ಧದ ಅವರ ಕ್ರೂರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಈಗ ಯಾವುದೇ ಸ್ಥಳ ಉಳಿದಿಲ್ಲ.
ಶಾಂತಿಯ ಮಾರ್ಗವನ್ನು ಕಂಡುಕೊಳ್ಳಿ! – ಸಂಯುಕ್ತ ಅರಬ್ ಎಮಿರೇಟ್ಸ್
ಸಂಯುಕ್ತ ಅರಬ್ ಸಂಸ್ಥಾನದ ವಿದೇಶಾಂಗ ವ್ಯವಹಾರಗಳ ಉಪ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತದ ಕಾರ್ಯಾಚರಣೆ ಬಗ್ಗೆ ಮಾತನಾಡಿ, ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಪರಿಹರಿಸಲು ಮತ್ತು ಶಾಂತಿಯ ಮಾರ್ಗವನ್ನು ಕಂಡುಕೊಳ್ಳಲು ರಾಜತಾಂತ್ರಿಕ ಮಾತುಕತೆ ಮತ್ತು ಸಂವಹನವು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ ಎಂದು ಸಲಹೆ ನೀಡಿದ್ದಾರೆ.
ಉಭಯ ದೇಶಗಳು ಸಂಯಮ ವಹಿಸಬೇಕು! – ರಷ್ಯಾ
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ ಅವರು ಪ್ರತಿಕ್ರಿಯಿಸಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಸೇನಾ ಸಂಘರ್ಷದ ಬಗ್ಗೆ ನಮ್ಮ ದೇಶವು ಕಳವಳಗೊಂಡಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡಬಾರದು; ಆದ್ದರಿಂದ ನಾವು ಎರಡೂ ಕಡೆಗಳಿಗೆ ಸಂಯಮ ವಹಿಸುವಂತೆ ಮನವಿ ಮಾಡುತ್ತೇವೆ ಎಂದು ಕೋರಿದ್ದಾರೆ.
ಪ್ರಧಾನಿ ಮೋದಿಯಿಂದ ಸೇನೆಯ ಶ್ಲಾಘನೆ
ಭಾರತವು ಕೈಗೊಂಡ ಕಾರ್ಯಾಚರಣೆಯ ನಂತರ ಮೇ 7 ರಂದು ಬೆಳಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ‘ಆಪರೇಷನ್ ಸಿಂಧೂರ್’ಗಾಗಿ ಮೂರೂ ಸೇನಾ ಪಡೆಗಳನ್ನು ಶ್ಲಾಘಿಸಿದರು. ಇದು ನವ ಭಾರತವಾಗಿದೆ. ದೇಶಕ್ಕೆ ಇದು ಹೆಮ್ಮೆಯ ಕ್ಷಣ. ಸೇನೆಯು ಅಲ್ಪಾವಧಿಯಲ್ಲಿಯೇ ನಿಖರವಾದ ದಾಳಿ ನಡೆಸಿದೆ ಎಂದು ಹೇಳಿದರು. ಕೇಂದ್ರ ಸರಕಾರವು ನಾಳೆ, ಮೇ 8 ರಂದು ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆಯನ್ನು ಕರೆದಿದೆ. ಈ ಸಭೆಯು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
11 ಭಾರತೀಯ ವಿಮಾನ ನಿಲ್ದಾಣಗಳ ಕಾರ್ಯ ಸ್ಥಗಿತ
ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿಯ ಪರಿಣಾಮ ದೇಶಾದ್ಯಂತ ವಿಮಾನ ಹಾರಾಟದ ಮೇಲೆ ಬೀರಿದೆ. 11 ವಿಮಾನ ನಿಲ್ದಾಣಗಳ ಕಾರ್ಯ ಸ್ಥಗಿತಗೊಳಿಸಲಾಗಿದೆ. ಜಮ್ಮು, ಶ್ರೀನಗರ, ಲೇಹ್, ಚಂಡೀಗಢ, ಧರ್ಮಶಾಲಾ, ಅಮೃತಸರ, ಬಿಕಾನೇರ, ಜೋಧಪುರ, ರಾಜಕೋಟ, ಭುಜ್ ಮತ್ತು ಜಾಮನಗರ ವಿಮಾನ ನಿಲ್ದಾಣಗಳ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿವೆ.
ಸಂಪಾದಕೀಯ ನಿಲುವುಮಸೂದ್ ಅಜರ್ ನ ಈ ಆಸೆಯನ್ನು ಅಲ್ಲಾ ಶೀಘ್ರವೇ ನೆರವೇರಿಸಲಿದ್ದಾನೆ ಎಂಬುದನ್ನು ಅವನು ನೆನಪಿಟ್ಟುಕೊಳ್ಳಬೇಕು! |