ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಶಿವಾನಿ ಬಾಲಕೃಷ್ಣ ನಾಯಕ ಈ ಪೀಳಿಗೆಯಲ್ಲಿ ಒಬ್ಬಳು !
ಕು. ಶಿವಾನಿ ಬಾಲಕೃಷ್ಣ ನಾಯಕ ಇವಳ ಬಗ್ಗೆ ಅವಳ ತಂದೆಗೆ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಜನ್ಮದಿಂದ ೨ ವರ್ಷ
‘ಚಿ. ಶಿವಾನಿಗೆ ಭಕ್ತಿಗೀತೆಗಳನ್ನು ಕೇಳಿದಾಗ ಆನಂದವಾಗುತ್ತಿತ್ತು.
೨. ವಯಸ್ಸು ೨ ರಿಂದ ೪ ವರ್ಷ
ಅ. ಶಿವಾನಿಗೆ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು, ವಯಸ್ಸು ೪೮ ವರ್ಷ) ಇವರೊಂದಿಗೆ ಮಾತನಾಡುವಾಗ ಮತ್ತು ಅವರ ಛಾಯಾಚಿತ್ರವನ್ನು ನೋಡುವಾಗ ಆನಂದವಾಗುತ್ತಿತ್ತು.
ಆ. ಅವಳಿಗೆ ‘ನೀನು ಯಾರು ?’, ಎಂದು ಕೇಳಿದರೆ ಅವಳು ‘ನಾನು ಶ್ರೀಕೃಷ್ಣನ ಗೋಪಿ ಇದ್ದೇನೆ’, ಎಂದು ಹೇಳುತ್ತಿದ್ದಳು.
ಇ. ನಾವು ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಹೋದಾಗ ಅವಳು ತಾನಾಗಿಯೇ ಘೋಷಣೆ ಕೂಗುತ್ತಿದ್ದಳು.

೩. ವಯಸ್ಸು ೪ ರಿಂದ ೬ ವರ್ಷ
೩ ಅ. ಸೇವೆ ಮಾಡಲು ಇಷ್ಟವಾಗುವುದು : ಶಿವಾನಿಯು ಸತ್ಸಂಗಕ್ಕೆ ಹೋದಾಗ ನೀರಿನ ಬಾಟಲಿಗಳನ್ನು ತುಂಬಿಸಿಡುವುದು ಮತ್ತು ಕುರ್ಚಿಗಳನ್ನು ಒರೆಸಿ ಒಂದು ಸಾಲಿನಲ್ಲಿ ಇಡುವುದು, ಈ ಸೇವೆಗಳನ್ನು ಮಾಡುತ್ತಾಳೆ.
೩ ಆ. ತಪ್ಪುಗಳ ಬಗ್ಗೆ ಸಂವೇದನಾಶೀಲ : ಅವಳಿಗೆ ತನ್ನ ಮತ್ತು ಮನೆಯಲ್ಲಿನ ವ್ಯಕ್ತಿಗಳ ತಪ್ಪುಗಳು ತಕ್ಷಣ ಗಮನಕ್ಕೆ ಬರುತ್ತವೆ. ಅವಳು ಆ ಬಗ್ಗೆ ನಮಗೆ ಹೇಳುತ್ತಾಳೆ.
೩ ಇ. ನಾಮಜಪಾದಿ ಉಪಾಯಗಳ ಗಾಂಭೀರ್ಯ : ಅವಳು ”ನಾವು ಸಂಚಾರವಾಣಿಯನ್ನು ನೋಡಿದರೆ ಅಥವಾ ದೂರದರ್ಶನ ವಾಹಿನಿಗಳಲ್ಲಿನ ಅಸಾತ್ತ್ವಿಕ ಕಾರ್ಯಕ್ರಮಗಳನ್ನು ನೋಡಿದರೆ ನಮ್ಮ ಮೇಲೆ ಆವರಣ ಬರುತ್ತದೆ, ನಮ್ಮ ಮೇಲಿನ ಆವರಣವನ್ನು ದೂರಗೊಳಿಸಲು ನಾವು ನಾಮಜಪಾದಿ ಉಪಾಯಗಳನ್ನು ಮಾಡಬೇಕು” ಎಂದು ಹೇಳುತ್ತಾಳೆ.
೩ ಈ. ಸಂತರ ಬಗೆಗಿನ ಭಾವ : ಪೂ. ರಮಾನಂದ ಗೌಡರು ಪ್ರಸಾರಸೇವೆಗಾಗಿ ನಮ್ಮ ಊರಿಗೆ ಬರಲಿದ್ದರೆ ಶಿವಾನಿಯು ಅವರ ದಾರಿಯನ್ನು ಕಾಯುತ್ತಾಳೆ. ಅವರು ಮನೆಗೆ ಬಂದ ನಂತರ ಶಿವಾನಿಯು ಅವರೊಂದಿಗೆ ಉತ್ಸಾಹದಿಂದ ಮಾತನಾಡುತ್ತಾಳೆ.’
– ಶ್ರೀ. ಬಾಲಕೃಷ್ಣ ನಾಯಕ (ಕು. ಶಿವಾನಿಯ ತಂದೆ), ಉಡುಪಿ. (೧೦.೬.೨೦೨೪)