
೧. ಇಂತಹ ಘಟನೆಗಳು ಹಿಂದೂಗಳಿಗೆ ಲಜ್ಜಾಸ್ಪದ ಸಂಗತಿ !
ಮುಂಬೈನ ಮಲಾಡ್ನ ಪಠಾಣವಾಡಿಯ ಬಳಿ ಯುಗಾದಿ ನಿಮಿತ್ತ ಹೊರಡಿಸಿದ ಕಲಶ ಮೆರವಣಿಗೆಯಲ್ಲಿ ಕೇಸರಿಧ್ವಜ ಹಿಡಿದಿದ್ದ ಇಬ್ಬರು ಹಿಂದೂ ಯುವಕರನ್ನು ೪೦ ರಿಂದ ೫೦ ಮುಸಲ್ಮಾನರು ಥಳಿಸಿದ್ದಾರೆ. ಈ ಸಮಯದಲ್ಲಿ ಮತಾಂಧರು ಹಿಂದೂಗಳ ಕೈಯಿಂದ ಕೇಸರಿಧ್ವಜವನ್ನು ಕಸಿದುಕೊಳ್ಳಲು ಸಹ ಪ್ರಯತ್ನಿಸಿದರು.
೨. ಎಲ್ಲೆಡೆ ಇಂತಹ ಆಡಳಿತಗಾರರು ಬೇಕು !
ಮೀರತ್ದಲ್ಲಿ ರಸ್ತೆಗಳಲ್ಲಿ ನಮಾಜುಪಠಣ ಮಾಡುವ ಬಗ್ಗೆ ಹೊರಡಿಸಲಾದ ಆದೇಶಗಳು ಸರಿಯಾಗಿವೆ. ರಸ್ತೆಗಳು ನಡೆದಾಡುಲು ಇರುತ್ತವೆ, ನಮಾಜುಪಠಣಕ್ಕಲ್ಲ ಎಂದು ಹೇಳುವ ಮೂಲಕ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶವನ್ನು ಬೆಂಬಲಿಸಿದರು.
೩. ಹಿಂದೂ ದೇವಾಲಯಗಳ ಹಣವನ್ನು ಹಿಂದೂ ಧರ್ಮಕ್ಕಾಗಿ ಮಾತ್ರ ಖರ್ಚು ಮಾಡಬೇಕು !
ಮುಂಬೈಯ ‘ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್’ ‘ಶ್ರೀ ಸಿದ್ಧಿವಿನಾಯಕ ಭಾಗ್ಯಲಕ್ಷ್ಮಿ ಯೋಜನೆ’ಯ ಅಡಿಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ೧೦ ಸಾವಿರ ರೂಪಾಯಿಗಳನ್ನು ಅವರ ತಾಯಂದಿರ ಬ್ಯಾಂಕ್ ಖಾತೆಯಲ್ಲಿ ಠೇವಣಿ ರೂಪದಲ್ಲಿ ಇಡಲಿದೆ.
೪. ಬಂಗಾಲದ ಹಿಂದೂದ್ವೇಷಿ ತೃಣಮೂಲ ಕಾಂಗ್ರೆಸ್ ಸರಕಾರ !
ಬಂಗಾಲ ಪೊಲೀಸರು ‘ಅಂಜನಿ ಪುತ್ರ ಸೇನೆ’ಗೆ ಶ್ರೀರಾಮನವಮಿ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿ ದ್ದಾರೆ. ೨೦೨೨ ಮತ್ತು ೨೦೨೩ ರಲ್ಲಿ ಮೆರವಣಿಗೆಯ ಸಮಯದಲ್ಲಿ ಕೋಮುಗಲಭೆಯಾಗಿತ್ತು, ಇದರಿಂದಾಗಿ ಅದು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
೫. ದೇಶದ ಪ್ರತಿಯೊಂದು ಗ್ರಾಮವನ್ನು ‘ಹಿಂದೂ ಗ್ರಾಮ’ ಮಾಡಿ !
ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಛತ್ತರಪುರ (ಮಧ್ಯಪ್ರದೇಶ)ದ ಗಢಾ ಗ್ರಾಮದ ಬಳಿ ‘ಹಿಂದೂ ಗ್ರಾಮ’ಕ್ಕೆ ಅಡಿಪಾಯ ಹಾಕಿದರು. ಈ ಗ್ರಾಮದಲ್ಲಿ ೧ ಸಾವಿರ ಹಿಂದೂ ಕುಟುಂಬಗಳನ್ನು ನೆಲೆಗೊಳಿಸಲಾಗುವುದು. ಈ ಗ್ರಾಮದಲ್ಲಿ ಸಂಸ್ಕೃತ ಶಾಲೆ, ಗೋಶಾಲೆ, ಯಜ್ಞಶಾಲೆ ಇರಲಿವೆ.
೬. ಎಲ್ಲೆಡೆ ಇಂತಹ ಆಡಳಿತಗಾರರು ಬೇಕು !
ಉತ್ತರಪ್ರದೇಶದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಎಲ್ಲಾ ದೇವಾಲಯಗಳಲ್ಲಿ ೨೪ ಗಂಟೆಗಳ ಕಾಲ ಶ್ರೀ ರಾಮಚರಿತ ಮಾನಸದ ನಿರಂತರ ಪಠಣ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದರು.