
‘ಮೃತ್ಯುವಾದಾಗ, ಸೂಕ್ಷ್ಮ ದೇಹವು ಹೊರಬರುತ್ತದೆ. ಆಕಾಶ, ವಾಯು ಮತ್ತು ಅಗ್ನಿ ಎಂಬ ಮೂರು ತತ್ತ್ವಗಳಿಂದ ಸೂಕ್ಷ್ಮ ದೇಹವು ರೂಪುಗೊಂಡಿದೆ. ವಾಸನಾ ಇದುವೇ ಅದರ ಜೀವನವಾಗಿದೆ. ವಾಸನಾ ನಾಶವಾದಾಗ ಈ ದೇಹವೂ ಕೊನೆಗೊಳ್ಳುತ್ತದೆ. ಇದೇ ಮುಕ್ತಿಯಾಗಿದೆ ! ಜೀವನದುದ್ದಕ್ಕೂ ಬ್ರಹ್ಮಚಿಂತನೆ ಮಾಡುವ, ಬ್ರಹ್ಮಾನುಭೂತಿ (ಬ್ರಹ್ಮನ ಸಾಕ್ಷಾತ್ಕಾರ) ಪಡೆದ ಜೀವನ್ಮುಕ್ತ (ಬಂಧನದಿಂದ ಮುಕ್ತನಾದವನು)ನಾಗಿ ಸಾಯುತ್ತಾನೆ. ಅವನ ದೇಹ ಬೀಳುತ್ತದೆ. ವಾಸನಾ ಇದು ಉಳಿದಿಲ್ಲದ ಕಾರಣ ವಾಸನಾದೇಹವು, ಅಂದರೆ ‘ಅತಿವಾಹಕ ದೇಹವೂ’ ಉಳಿಯುವುದಿಲ್ಲ. ಅವನ ಸೂಕ್ಷ್ಮ ದೇಹವೂ ವಿಲೀನವಾಗುತ್ತದೆ. ಅವನು ಎಲ್ಲಿಗೂ ಹೋಗುವುದಿಲ್ಲ, ಇಲ್ಲಿಯೇ ವಿರಾಟ ಅಸ್ತಿತ್ವದೊಂದಿಗೆ ಏಕರೂಪವಾಗುತ್ತಾನೆ. ವಾಸನಾ ಇರುವವರ ಸೂಕ್ಷ್ಮ ದೇಹವು ಮರಣದ ನಂತರ ದೇಹದಿಂದ ಹೊರಬರುತ್ತದೆ. ಅದರ ಸೂಕ್ಷ್ಮ ದೇಹವು ಮರಣದ ನಂತರ ದೇಹದಿಂದ ಹೊರಬರುತ್ತದೆ. ಸೂಕ್ಷ್ಮ ದೇಹ (ಲಿಂಗದೇಹ ಅಥವಾ ವಾಸನಾ ದೇಹ) ಇರುವವರೆಗೆ, ಅದು ಹೊಸ ಹೊಸ ದೇಹಗಳನ್ನು ಧರಿಸುತ್ತದೆ. ಜನ್ಮ ಜನ್ಮಾಂತರ ಅಲೆದಾಡುತ್ತದೆ.
ಆತ್ಮಸಾಕ್ಷಾತ್ಕಾರವಿಲ್ಲದೆ ಮತ್ತು ಭಗವಂತನ ಕೃಪೆ ಇಲ್ಲದೆ ಸೂಕ್ಷ್ಮ ದೇಹಗಳು, ವಾಸನಾ ದೇಹಗಳು ಇವುಗಳ ವಿಸರ್ಜನೆಯು ಆಗುವುದಿಲ್ಲ. ಅಲ್ಲಿಯವರೆಗೆ ಸ್ವಸ್ಥತೆಯೂ ಇಲ್ಲ, ಶಾಂತಿಯೂ ಇಲ್ಲ, ಮುಕ್ತಿಯೂ ಇಲ್ಲ !
(ಸೌಜನ್ಯ : ಮಾಸಿಕ ‘ಘನಗರ್ಜಿತ’ ಡಿಸೆಂಬರ್ ೨೦೨೨)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!