ಮಾರ್ಚ ೧೭ ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ (ದಿನಾಂಕಾನುಸಾರ) ನಿಮಿತ್ತ
೬ ಜೂನ್ ೧೬೭೪ ರಂದು ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ನಡೆದಿತ್ತು. ಈ ಅದ್ವಿತೀಯ ಸಮಾರಂಭಕ್ಕಾಗಿ ಒಟ್ಟು ಸುಮಾರು ೧ ಕೋಟಿ ರೂಪಾಯಿ ವೆಚ್ಚ (ಆಗ ಹೊನ್ನ ಮುದ್ರೆ ಇತ್ತು) ಆಗಿತ್ತು. ಈ ವೆಚ್ಚವನ್ನು ಶಿವಾಜಿ ಮಹಾರಾಜರು ಮೊಗಲರಿಂದ ಹೇಗೆ ವಸೂಲಿ ಮಾಡಿದರು ? ಈ ಪ್ರಸಂಗ ಮತ್ತು ಗೆರಿಲ್ಲ ಯುದ್ಧದ ಉತ್ಕ್ರಷ್ಟ ಉದಾಹರಣೆಯನ್ನು ನೋಡೋಣ. ಮಹಾರಾಷ್ಟ್ರದ ನಗರ ಜಿಲ್ಲೆಯಲ್ಲಿ ಪೆಡಗಾಂವ ಹೆಸರಿನ ಗ್ರಾಮವಿದೆ. ಅಲ್ಲಿ ಬಹಾದೂರಖಾನ ಕೊಕಲತಾಶ ಹೆಸರಿನ ಔರಂಗಜೇಬನ ಸುಬೇದಾರನಿದ್ದನು. ಅವನು ಬಹಳ ಉದ್ಧಟನಾಗಿದ್ದನು. ಅವನ ೨೦೦ ಉಚ್ಚ ತಳಿಯ ಅರಬ್ಬಿ ಕುದುರೆಗಳು ಮತ್ತು ಸಾಧಾರಣ ೧ ಕೋಟಿ ರೂಪಾಯಿಗಳು ಬಹಾದೂರ ಕೋಟೆಯಲ್ಲಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಹಿತಿ ಸಿಕ್ಕಿತು. ಅಲ್ಲಿ ನಿಯೋಜಿಸಲಾಗಿದ್ದ ಸೈನ್ಯವೂ ದೊಡ್ಡದಿತ್ತು. ಇವೆಲ್ಲ ಸಂಪತ್ತು ದೆಹಲಿಗೆ ರವಾನೆಯಾಗುವುದರಲ್ಲಿತ್ತು. ಆಗ ಶಿವಾಜಿ ಮಹಾರಾಜರು ತನ್ನ ಸೈನಿಕರಿಗೆ, ೨ ಸಾವಿರ ಸೈನ್ಯದೊಂದಿಗೆ ಬಹಾದೂರಕೋಟೆಯ ಮೇಲೆ ದಂಡೆತ್ತಿ ಹೋಗಬೇಕು, ಅಲ್ಲಿನ ಸಂಪತ್ತು ಮತ್ತು ೨೦೦ ಅರಬ್ಬಿ ಕುದುರೆಗಳನ್ನು ಲೂಟಿ ಮಾಡಿ ತರಬೇಕು ಎಂದು ಆಜ್ಞೆ ಮಾಡಿದರು ಈ ವಾರ್ತೆ ಖಾನನಿಗೆ ಸಿಕ್ಕಿತು ಮತ್ತು ಅವನು ತಮಾಷೆಯಿಂದ ನಗುತ್ತ ”ಕೇವಲ ೨ ಸಾವಿರ ಮರಾಠಾ ಸೈನಿಕರು ? ಅವರಿಗಾಗಿ ಕೋಟೆಯ ಬಾಗಿಲು ತೆರೆದಿರಲಿ. ಒಂದು ವೇಳೆ ಅವರು ನಮ್ಮ ಹತ್ತಿರ ಬಂದರೂ ಅವರನ್ನು ಕತ್ತರಿಸುತ್ತೇವೆ’’ ಎಂದು ಹೇಳಿದನು. |
೧. ಸೈನಿಕರು ಬಹಾದೂರ ಕೋಟೆಯ ಮೇಲೆ ಆಕ್ರಮಣ ನಡೆಸುವುದು; ಆದರೆ ಮೊಗಲರ ಅನಿರೀಕ್ಷಿತ ಆಕ್ರಮಣದಿಂದ ಅವರು ಹೆದರಿ ಅಲ್ಲಿಂದ ಓಡಿ ಹೋಗುವುದು.
೧೬ ಜುಲೈ ೧೬೭೪ ರಂದು ಪೇಡಗಾಂವನ ಈ ಬಹಾದೂರ ಕೋಟೆಯಿಂದ ಮೊಗಲ ಸೈನಿಕರಿಗೆ ದೂರದ ವರೆಗೆ ಧೂಳು ಹಾರುತ್ತಿರುವುದು ಕಾಣಿಸಿತು. ಇದರಿಂದ ಕುದುರೆಗಳು ಓಡುತ್ತಿವೆಯೆಂದು ಅವರ ಗಮನಕ್ಕೆ ಬಂದಿತು. ತಕ್ಷಣವೇ ಕೋಟೆಯ ಮೇಲೆ ಅಪಾಯದ ಕಹಳೆಯನ್ನು ಊದಿದರು ಮತ್ತು ಮೊದಲೇ ಸಿದ್ಧರಾಗಿದ್ದ ಖಾನನ ಪ್ರಚಂಡ ಸೇನೆಯು ಹೋರಾಡಲು ಮುಂದಾಯಿತು. ಕೋಟೆಯ ಬಾಗಿಲು ತೆರೆಯಿತು. ಮರಾಠಾ ಸೈನಿಕರು ಹತ್ತಿರ ಬರುತ್ತಿದ್ದಂತೆಯೇ, ಖಾನನ ಸೇನಾಪತಿ ಹೋರಾಡಲು ಆದೇಶಿಸಿದನು. ಅನಿರೀಕ್ಷಿತ ಆಕ್ರಮಣದಿಂದ ಮರಾಠಾ ಸೈನಿಕರು ಹೆದರಿದರು. ಜೀವ ರಕ್ಷಿಸಿಕೊಳ್ಳಲು ಹಿಂದಕ್ಕೆ ತಿರುಗಿದರು; ಆದರೆ ಅವರ ಕುದುರೆಗಳು ಓಡುತ್ತಿರಲಿಲ್ಲ. ಖಾನನ ಸಂಪೂರ್ಣ ಸೈನ್ಯ ಹತ್ತಿರ ಬರತೊಡಗಿತು.
ಅವರ ಹಣೆಬರಹ ಚೆನ್ನಾಗಿತ್ತು ಅಷ್ಟರಲ್ಲಿ ಕುದುರೆಗಳು ವೇಗವಾಗಿ ಓಡತೊಡಗಿದವು ಮತ್ತು ಸೈನಿಕರು ಬೆನ್ನು ತೋರಿಸಿ ಓಡತೊಡಗಿದರು. ಬಹಾದೂರ ಖಾನ ಸ್ವತಃ ಅವರನ್ನು ಅಡ್ಡಗಟ್ಟಲು ಮೊಗಲ ಸೈನ್ಯದ ಮುಂದಾಳತ್ವ ವಹಿಸಿದ್ದನು. ಈ ಕುದುರೆಗಳ ಓಟ ಹೀಗೆಯೇ ಅನೇಕ ಮೈಲಿಗಳ ವರೆಗೆ ಮುಂದುವರಿಯಿತು; ಏಕೆಂದರೆ ಬಹಾದೂರಖಾನನಿಗೆ ಮರಾಠಾ ಸೈನಿಕರ ಕುದುರೆ ಓಟದ ಬಗೆಗಿನ ಹೆದರಿಕೆ ಅವನಲ್ಲಿ ಉನ್ಮಾದವನ್ನುಂಟು ಮಾಡುತ್ತಿತ್ತು. ಮರಾಠಾ ಸೈನಿಕರು ಓಡಿ ಹೋದರು. ಸಂಪೂರ್ಣ ೨ ಸಾವಿರ ಸೈನಿಕರು ಬಚಾವಾದರು.
೨. ಮರಾಠಾ ಸೈನಿಕರು ಬಹಾದೂರಖಾನನ ಗಮನವನ್ನು ಬೇರೆಡೆಗೆ ಸೆಳೆದು ಕೋಟೆಯ ಮೇಲೆ ದಾಳಿ ಮಾಡಿ ೨೦೦ ಅರಬ್ಬಿ ಕುದುರೆಗಳನ್ನು ಮತ್ತು ಸಂಪತ್ತನ್ನು ಹೊತ್ತೊಯ್ಯುವುದು
ಕೊನೆಗೆ ಖಾನನ ಸೈನ್ಯ ನಿಂತಿತು ಮತ್ತು ಸಂತೋಷದಿಂದ ವಿಜೃಂಭಿಸಿದರು. ಎಲ್ಲರೂ ಮರಳಿ ಬರತೊಡಗಿದರು. ಈ ಗೆಲುವು ಔರಂಗಜೇಬನಿಗೆ ತಿಳಿದ ಕೂಡಲೇ ಏನು ಬಹುಮಾನ ಸಿಗಬಹುದು ? ಎನ್ನುವ ಸಂತೋಷದಿಂದ ಬಹಾದೂರಖಾನನು ಎದೆಯುಬ್ಬಿಸಿಕೊಂಡು ಕುದುರೆಯ ಮೇಲೆ ಬಹಳ ಪೌರುಷದಿಂದ ಬರುತ್ತಿದ್ದನು; ಏಕೆಂದರೆ ಶಿವಾಜಿಯ ಸೈನಿಕರನ್ನು ಓಡಿ ಹೋಗುವಂತೆ ಮಾಡುವುದು ಸಣ್ಣ ಕೆಲಸವಾಗಿರಲಿಲ್ಲ. ಅಷ್ಟರಲ್ಲಿಯೇ ಎಲ್ಲ ಸೈನಿಕರು ಶಾಂತರಾದರು ಮತ್ತು ಬಿಟ್ಟ ಕಣ್ಣಿನಿಂದ ಬಹಾದೂರಖಾನನನ್ನು ನೋಡತೊಡಗಿದರು. ಹೊಗೆಯ ದೊಡ್ಡ ದೊಡ್ಡ ಅಲೆಗಳು ಕೋಟೆಯಿಂದ ಬರುತ್ತಿತ್ತು. ಖಾನನು ಹೆದರಿಕೆಯಿಂದ ಉಗುಳು ನುಂಗುತ್ತಾ ಕೋಟೆಗಾರನಿಗೆ ”ನಾವೆಲ್ಲರೂ ಇಲ್ಲಿರುವಾಗ, ಕೋಟೆಯಲ್ಲಿ ಯಾರಿದ್ದಾರೆ ?’ ಎಂದು ಕೇಳಿದನು. ”ಯಾರೂ ಇಲ್ಲ ಜಹಾಂಪನಾ. ನಿಮ್ಮ ಆದೇಶದಂತೆ ಶಿವಾಜಿಯ ಆ ೨ ಸಾವಿರ ಸೈನಿಕರ ಕೋಟೆಗಾರ, ಸೇನಾಪತಿ ಮತ್ತು ಸ್ವತಃ ಖಾನ ಸಹಿತ ದಂಡೆತ್ತಿ ಹೋಗಿದ್ದರು. ಖಾನನ ಹೃದಯ ಬಡಿತ ಹೆಚ್ಚಾಯಿತು. ಏನಾಗಿದೆಯೆಂದು ಅವರಿಗೆ ಅಂದಾಜು ಬಂದಿತು. ಅದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರು ಯಾರೆಂದೂ ಗಮನಕ್ಕೆ ಬಂದಿತು. ಯಾವುದರ ಭಯವಿತ್ತೋ ಅದೇ ನಡೆಯಿತು. ಅದೇ ಸಮಯದಲ್ಲಿ ಒಬ್ಬ ಕುದುರೆ ಸವಾರನು ಕೂಗುತ್ತ ಓಡಿ ಬಂದನು ‘ಹುಜೂರ, ಅನಾಹುತವಾಯಿತು. ಸರ್ವನಾಶವಾಯಿತು. ನಮ್ಮದೆಲ್ಲ ಲೂಟಿಯಾಯಿತು. ನೀವೆಲ್ಲರೂ ಅಲ್ಲಿ ೨೦೦೦ ಮರಾಠಾ ಸೈನಿಕರ ಹಿಂದೆ ಓಡಿದಿರಿ ಮತ್ತು ಇಲ್ಲಿ ಕೋಟೆಗೆ ೭೦೦೦ ಮರಾಠಾ ಸೈನಿಕರು ಸುತ್ತುವರಿದರು. ಎಲ್ಲವನ್ನೂ ಲೂಟಿ ಮಾಡಿಕೊಂಡು ಕೊಂಡೊಯ್ದರು’ ಎಂದು ಹೇಳಿದನು.
ಈ ರೀತಿ ರಾಜ್ಯಾಭಿಷೇಕದ ೧ ಕೋಟಿ ರೂಪಾಯಿಗಳ ವೆಚ್ಚವೂ ವಸೂಲಾಯಿತು ಮತ್ತು ೨೦೦ ಉಚ್ಚ ತಳಿಯ ಅರಬ್ಬಿ ಕುದುರೆಗಳು ಛತ್ರಪತಿಯ ಸೈನ್ಯಕ್ಕೆ ಸೇರ್ಪಡೆಯಾಯಿತು. ಒಬ್ಬನೇ ಒಬ್ಬ ಸೈನಿಕನನ್ನು ಕಳೆದುಕೊಳ್ಳದೇ ಈ ನಾಟಕ ನಡೆಯಿತು. (ಆಧಾರ: ಸಾಮಾಜಿಕ ಮಾಧ್ಯಮ)