ಒಂದು ವರ್ಷದ ಹಿಂದೆಯೇ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರಿಂದ ದೂರು!
31 ಲಕ್ಷ ರೂಪಾಯಿ ಮೌಲ್ಯದ ಅನಧಿಕೃತ ವಿದ್ಯುತ್ ಬಳಸಿದ ದರ್ಗಾ!

ಮುಂಬಯಿ – ಗೋರೆಗಾಂವ್ (ಪೂರ್ವ) ಪ್ರದೇಶದ ಆರೆ ಕಾಲೋನಿಯಲ್ಲಿ ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾವನ್ನು ನೆಲಸಮಗೊಳಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ಸಂಬಂಧಿತ ಇಲಾಖೆಗಳ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 100 ಕ್ಕೂ ಹೆಚ್ಚು ಪೊಲೀಸರು, ದಂಗೆ ನಿಯಂತ್ರಣ ದಳ ಹಾಗೂ ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಸಂಬಂಧಪಟ್ಟ ಕಟ್ಟಡವನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು. ಈ ಹಿಂದೆ ಮಹಾನಗರ ಪಾಲಿಕೆಯು ಕಟ್ಟಡಕ್ಕೆ ನೋಟಿಸ್ ಜಾರಿ ಮಾಡಿ ಅದನ್ನು ತೆರವುಗೊಳಿಸುವಂತೆ ಸೂಚಿಸಿತ್ತು; ಆದರೆ ನಿಗದಿತ ಕಾಲಮಿತಿಯೊಳಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಡಳಿತ ಮಂಡಳಿ ಈ ಮೇಲಿನ ಕ್ರಮ ಜರುಗಿಸಿದೆ.
🚨 Illegal dargah on government land in Aarey Colony, Goregaon demolished.
BJP leader @KiritSomaiya had raised the issue and lodged a complaint nearly a year ago.
⚡ The dargah allegedly consumed electricity worth ₹31 lakh without authorisation.
Why did authorities take so… pic.twitter.com/zJeZXUEtth
— Sanatan Prabhat (@SanatanPrabhat) June 3, 2026
ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಈ ಬಗ್ಗೆ ಮಾತನಾಡಿ, ”ಅನಧಿಕೃತ ದರ್ಗಾ ವಿರುದ್ಧ ನಾನು ಒಂದು ವರ್ಷದ ಹಿಂದೆಯೇ ದೂರು ದಾಖಲಿಸಿದ್ದೆ” ಎಂದರು. ಆರೆ ಕಾಲೋನಿಯ ಭದ್ರತಾ ಅಧಿಕಾರಿ ವಿಜಯ್ ವಾಘ್ ಅವರು ಜನವರಿ 2026 ರಲ್ಲಿ ದಾಖಲಿಸಿದ ದೂರಿನಲ್ಲಿ, ಕಳೆದ 10 ವರ್ಷಗಳಿಂದ ಈ ದರ್ಗಾದಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದರು. ಇದರ ಅಡಿಯಲ್ಲಿ 77,೦೦೦ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಬಳಸಲಾಗಿದೆ. ಆ ವಿದ್ಯುತ್ನ ಮೌಲ್ಯ ಸುಮಾರು 31 ಲಕ್ಷ ರೂಪಾಯಿಗಳಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ