ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !

ಹಿಂದೂಗಳಲ್ಲಿ ಆಕ್ರೋಶ

ಈ ಚಿತ್ರವನ್ನು ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೇ ನೈಜ ಸ್ಥಿತಿ ತಿಳಿಸುಉವದಾಗಿದೆ ! – ಸಂಪಾದಕರು

ಬೆಂಗಳೂರು – ‘ವಿಶ್ವವಾಣಿ’ ಪತ್ರಿಕೆಯು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಡಿ.ಕೆ. ಶಿವಕುಮಾರ್ ಅವರನ್ನು ಶಿವನ ರೂಪದಲ್ಲಿ ತೋರಿಸುವ ಚಿತ್ರವನ್ನು ಜೂನ್ 3 ರ ಸಂಚಿಕೆಯ ಪುಟ 1 ರಲ್ಲಿ ಪ್ರಮುಖವಾಗಿ ಪ್ರಕಟಿಸಿದೆ.

ಶಿವಕುಮಾರ್ ಅವರನ್ನು ಭಗವಾನ್ ಶಿವನ ಸಾಂಪ್ರದಾಯಿಕ ವೈಶಿಷ್ಟ್ಯಗಳೊಂದಿಗೆ ಚಿತ್ರಿಸಿರುವ ಈ ಕಲಾಕೃತಿಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಪತ್ರಿಕೆಯ ವಿರುದ್ಧ ರಾಜಕೀಯ ವೈಭವೀಕರಣದ ಆರೋಪ ಕೇಳಿಬರುತ್ತಿದೆ. ವಿಶೇಷವೆಂದರೆ ದೈನಿಕದ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಅವರು ಈ ಚಿತ್ರವನ್ನು ‘ಎಕ್ಸ್’ ಮೂಲಕ ಜೂನ್ 3 ರ ಮುಂಜಾನೆ ಪ್ರಸಾರ ಮಾಡಿದ ನಂತರ ಅವರ ವಿರುದ್ಧ ಭಾರಿ ಪ್ರಮಾಣದಲ್ಲಿ ಟೀಕೆಗಳು ವ್ಯಕ್ತವಾದವು. ಇದರಿಂದಾಗಿ ಅವರು ಆ ಪೋಸ್ಟ್ ಅನ್ನು ಅಳಿಸಿ ಹಾಕಿರುವುದು (‘ಡಿಲೀಟ್’ ಮಾಡಿರುವುದು) ಕಂಡುಬಂದಿದೆ.

ಸಂಪಾದಕೀಯ ನಿಲುವು

  • ಇಂತಹ ಪತ್ರಿಕೆಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆಯಾಗಬೇಕು, ಆಗ ಮಾತ್ರ ಇಂತಹ ಘಟನೆಗಳು ನಿಲ್ಲುತ್ತವೆ !
  • ಈ ರೀತಿಯಾಗಿ ಇತರ ಧರ್ಮದವರ ಶ್ರದ್ಧಾಕೇಂದ್ರಗಳ ಚಿತ್ರ ಬಿಡಿಸುವ ಧೈರ್ಯವನ್ನು ಯಾರೂ ಎಂದಿಗೂ ತೋರಿಸುವುದಿಲ್ಲ. ಹಿಂದೂಗಳು ನಿದ್ರಾವಸ್ಥೆಯಲ್ಲಿ ಇರುವುದರಿಂದ ಯಾರೇ ಆದರೂ ಅವರ ಶ್ರದ್ಧಾಕೇಂದ್ರಗಳ ವಿಡಂಬನೆ ಮಾಡುತ್ತಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳುವರೇ ?