ಅಬು ಅಜ್ಮಿ ಅವರ ಹಿಂದೂದ್ವೇಷದ ವಿಷ ಕಾರುವಿಕೆ !

ಮುಂಬಯಿ – ಜಿಹಾದ್ ಅತ್ಯಂತ ಗೌರವಾನ್ವಿತ ಶಬ್ದವಾಗಿದ್ದು, ಹೋರಾಟಕ್ಕೆ ‘ಜಿಹಾದ್’ ಎನ್ನಲಾಗುತ್ತದೆ. ‘ಲವ್ ಜಿಹಾದ್’, ‘ಲ್ಯಾಂಡ್ (ಭೂಮಿ) ಜಿಹಾದ್’, ಇವೆಲ್ಲವೂ ಮೂರ್ಖತನದ ಪ್ರಕಾರಗಳಾಗಿವೆ. ‘ಲ್ಯಾಂಡ್ ಜಿಹಾದ್’ ಎಂಬ ಶಬ್ದ ಕಾಲ್ಪನಿಕವಾಗಿದೆ. ಹಿಂದೂ-ಮುಸ್ಲಿಂ ವಿವಾಹಗಳು ಹಳೆಯ ಕಾಲದಿಂದಲೂ ನಡೆಯುತ್ತಿದ್ದು, ಇದರಲ್ಲಿ ಕೇವಲ ಪ್ರೀತಿ ಇರುತ್ತದೆ. ಭಾರತದಲ್ಲಿ ಯಾವುದೇ ಮುಸ್ಲಿಂ ಸಂಘಟನೆಯು ಹಿಂದೂ ಹುಡುಗಿಯರನ್ನು ವಂಚಿಸಿ ಕರೆತರಲು ಹೇಳುವುದಿಲ್ಲ, ಬದಲಿಗೆ ಹಿಂದೂ ಸಂಘಟನೆಗಳೇ ಇದಕ್ಕಾಗಿ ಹಣ ನೀಡುತ್ತವೆ ಎಂದು ಅತ್ಯಂತ ಹಾಸ್ಯಾಸ್ಪದ ಮತ್ತು ವಾಸ್ತವವನ್ನು ಕಣ್ಣುಮುಚ್ಚಿ ನಿರಾಕರಿಸುವ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ನೀಡಿದ್ದಾರೆ. ಅದರ ಬದಲು ಅವರು ಹಿಂದೂ ಸಂಘಟನೆಗಳ ಮೇಲೆಯೇ ಮುಸ್ಲಿಂ ಹುಡುಗಿಯರಿಗೆ ಆಮಿಷ ಒಡ್ಡಿ ಮದುವೆ ಮಾಡಿಸುತ್ತಿದ್ದಾರೆ ಎಂದು ಉದ್ದೇಶಪೂರ್ವಕವಾಗಿ ಆರೋಪಿಸಿದ್ದಾರೆ.
ಅವರು, ನಮ್ಮ ದೇಶದ ಸಂವಿಧಾನವು 18 ವರ್ಷಗಳ ನಂತರ ವ್ಯಕ್ತಿಯು ಸ್ವತಂತ್ರನಾಗಿರುತ್ತಾನೆ, ಅವನು ಯಾವುದೇ ಧರ್ಮಕ್ಕೆ ಹೋಗಬಹುದು ಮತ್ತು ತನಗೆ ಇಷ್ಟಬಂದವರೊಂದಿಗೆ ವಿವಾಹವಾಗಬಹುದು ಎಂದು ಹೇಳುತ್ತದೆ; ಆದರೆ ಈಗ ಮಾತ್ರ ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದರು. (ಸಂವಿಧಾನದ ಹೆಸರಿನಲ್ಲಿ ಸ್ವಂತ ಸ್ವಾರ್ಥಕ್ಕಾಗಿ ಹಿಂದೂಗಳ ಹೆಣ್ಣುಮಕ್ಕಳು ಮತ್ತು ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವ ಜಿಹಾದಿ ಕೃತ್ಯಗಳನ್ನು ಬೆಂಬಲಿಸುವುದು ಅಬು ಅಜ್ಮಿ ಅವರಂತಹ ನಾಯಕರ ಹಳೆಯ ನೀತಿಯೇ ಆಗಿದೆ ! – ಸಂಪಾದಕರು)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ