‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !

ಅಬು ಅಜ್ಮಿ ಅವರ ಹಿಂದೂದ್ವೇಷದ ವಿಷ ಕಾರುವಿಕೆ !

ಮುಂಬಯಿ – ಜಿಹಾದ್ ಅತ್ಯಂತ ಗೌರವಾನ್ವಿತ ಶಬ್ದವಾಗಿದ್ದು, ಹೋರಾಟಕ್ಕೆ ‘ಜಿಹಾದ್’ ಎನ್ನಲಾಗುತ್ತದೆ. ‘ಲವ್ ಜಿಹಾದ್’, ‘ಲ್ಯಾಂಡ್ (ಭೂಮಿ) ಜಿಹಾದ್’, ಇವೆಲ್ಲವೂ ಮೂರ್ಖತನದ ಪ್ರಕಾರಗಳಾಗಿವೆ. ‘ಲ್ಯಾಂಡ್ ಜಿಹಾದ್’ ಎಂಬ ಶಬ್ದ ಕಾಲ್ಪನಿಕವಾಗಿದೆ. ಹಿಂದೂ-ಮುಸ್ಲಿಂ ವಿವಾಹಗಳು ಹಳೆಯ ಕಾಲದಿಂದಲೂ ನಡೆಯುತ್ತಿದ್ದು, ಇದರಲ್ಲಿ ಕೇವಲ ಪ್ರೀತಿ ಇರುತ್ತದೆ. ಭಾರತದಲ್ಲಿ ಯಾವುದೇ ಮುಸ್ಲಿಂ ಸಂಘಟನೆಯು ಹಿಂದೂ ಹುಡುಗಿಯರನ್ನು ವಂಚಿಸಿ ಕರೆತರಲು ಹೇಳುವುದಿಲ್ಲ, ಬದಲಿಗೆ ಹಿಂದೂ ಸಂಘಟನೆಗಳೇ ಇದಕ್ಕಾಗಿ ಹಣ ನೀಡುತ್ತವೆ ಎಂದು ಅತ್ಯಂತ ಹಾಸ್ಯಾಸ್ಪದ ಮತ್ತು ವಾಸ್ತವವನ್ನು ಕಣ್ಣುಮುಚ್ಚಿ ನಿರಾಕರಿಸುವ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ನೀಡಿದ್ದಾರೆ. ಅದರ ಬದಲು ಅವರು ಹಿಂದೂ ಸಂಘಟನೆಗಳ ಮೇಲೆಯೇ ಮುಸ್ಲಿಂ ಹುಡುಗಿಯರಿಗೆ ಆಮಿಷ ಒಡ್ಡಿ ಮದುವೆ ಮಾಡಿಸುತ್ತಿದ್ದಾರೆ ಎಂದು ಉದ್ದೇಶಪೂರ್ವಕವಾಗಿ ಆರೋಪಿಸಿದ್ದಾರೆ.

ಅವರು, ನಮ್ಮ ದೇಶದ ಸಂವಿಧಾನವು 18 ವರ್ಷಗಳ ನಂತರ ವ್ಯಕ್ತಿಯು ಸ್ವತಂತ್ರನಾಗಿರುತ್ತಾನೆ, ಅವನು ಯಾವುದೇ ಧರ್ಮಕ್ಕೆ ಹೋಗಬಹುದು ಮತ್ತು ತನಗೆ ಇಷ್ಟಬಂದವರೊಂದಿಗೆ ವಿವಾಹವಾಗಬಹುದು ಎಂದು ಹೇಳುತ್ತದೆ; ಆದರೆ ಈಗ ಮಾತ್ರ ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದರು. (ಸಂವಿಧಾನದ ಹೆಸರಿನಲ್ಲಿ ಸ್ವಂತ ಸ್ವಾರ್ಥಕ್ಕಾಗಿ ಹಿಂದೂಗಳ ಹೆಣ್ಣುಮಕ್ಕಳು ಮತ್ತು ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವ ಜಿಹಾದಿ ಕೃತ್ಯಗಳನ್ನು ಬೆಂಬಲಿಸುವುದು ಅಬು ಅಜ್ಮಿ ಅವರಂತಹ ನಾಯಕರ ಹಳೆಯ ನೀತಿಯೇ ಆಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ದೇಶದಲ್ಲಿ ‘ದಿ ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳಿಂದ ಮತ್ತು ನ್ಯಾಯಾಲಯದ ವಿವಿಧ ಅವಲೋಕನಗಳಿಂದ ‘ಲವ್ ಜಿಹಾದ್’ ಬಯಲಾಗಿದೆ. ಹೀಗಿದ್ದರೂ ತನ್ನ ಧರ್ಮದವರ ಹಿಂದೂದ್ವೇಷವನ್ನು ಮುಚ್ಚಿಡಲು ಅಬು ಅಜ್ಮಿ ಅವರು ಮಾಡಿರುವ ದಯನೀಯ ಪ್ರಯತ್ನವೇ ಮೂರ್ಖತನವನ್ನು ತೋರಿಸುತ್ತದೆ !
  • ಹಲವು ರಾಜ್ಯಗಳು ಈ ಹೆಚ್ಚುತ್ತಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ‘ಮತಾಂತರ ವಿರೋಧಿ ಕಾಯ್ದೆ’ಗಳನ್ನು ಜಾರಿಗೆ ತಂದಿವೆ, ಇದನ್ನು ಅಬು ಅಜ್ಮಿ ಗಮನಿಸುವರೇ ?