ಕೇರಳಕ್ಕೆ ಮುಂಗಾರು ಮಳೆಯು ಆಗಮನ !

ನವದೆಹಲಿ – ಮುಂಗಾರು ಮಳೆಯು ಜೂನ್ 4 ರಂದು ಕೇರಳ ರಾಜ್ಯಕ್ಕೆ ಆಗಮಿಸಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಜೂನ್ 5 ರ ಸಂಜೆಯ ವೇಳೆಗೆ ಕೇರಳದ ಬಹುತೇಕ ಭಾಗವನ್ನು ಮುಂಗಾರು ಮಳೆಯು ಆವರಿಸಿಕೊಳ್ಳಲಿದೆ. ಹಾಗೂ ಮುಂದಿನ 3 ರಿಂದ 4 ದಿನಗಳಲ್ಲಿ ಕರ್ನಾಟಕದ ಕರಾವಳಿಯ ಮೂಲಕ ಅದು ಮುಂದೆ ಸಾಗಲಿದೆ. ಗೋವಾದ ಅಕ್ಷಾಂಶದವರೆಗೆ ತಲುಪಲು ಪೂರಕ ಪರಿಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಜೂನ್ 10 ರೊಳಗೆ ಕೊಂಕಣ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ.

ಜೂನ್ 10 ರ ನಂತರ ಮುಂಗಾರು ಮಳೆಯ ವೇಗ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಇಡೀ ಮಹಾರಾಷ್ಟ್ರಕ್ಕೆ ಮಳೆ ತಲುಪಲು ಜೂನ್ 20 ಆಗಬಹುದು. ಮುಂಬಯಿ-ಪುಣೆಯಲ್ಲಿ ಸಾಮಾನ್ಯವಾಗಿ ಜೂನ್ 10 ರಿಂದ 15 ರ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ವರ್ಷ ಶೇಕಡಾ 90 ಕ್ಕಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜೂನ್ ತಿಂಗಳಿನಲ್ಲಿ ಕಡಿಮೆ ಮಳೆಯಾಗಲಿದೆ. ಅದರ ನಂತರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮಳೆ ಹೆಚ್ಚಾಗಲಿದೆ. ಕೆಲವು ಭಾಗಗಳಲ್ಲಿ ಪ್ರವಾಹದ ಭೀತಿಯಿದ್ದರೆ, ಇನ್ನು ಕೆಲವು ಕಡೆ ಅತ್ಯಂತ ಕಡಿಮೆ ಮಳೆಯಾಗಬಹುದು.