ಅವೈಜ್ಞಾನಿಕ ಹಿಂದೂದ್ವೇಷಿಗಳಿಗೆ ತಪರಾಕಿ !

೧. ಹನುಮಾನ್‌ ಚಾಲೀಸಾ ಪಠಣದ ಜೊತೆಗೆ ಸ್ವರಕ್ಷಣಾ ತರಬೇತಿಯನ್ನೂ ಪಡೆಯಿರಿ ! 

ಜಮುಯಿ (ಬಿಹಾರ)ದಲ್ಲಿ, ಹನುಮಾನ್‌ ಚಾಲೀಸಾವನ್ನು ಪಠಿಸಿ ಹಿಂದಿರುಗುತ್ತಿದ್ದ ಹಿಂದೂಗಳು ಮುಸಲ್ಮಾನ ಬಹುಸಂಖ್ಯಾತ ಪ್ರದೇಶದ ಮಸೀದಿಯ ಬಳಿ ಬಂದಾಕ್ಷಣ ಮತಾಂಧ ಮುಸಲ್ಮಾನರು ಅವರ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದರು. ಅಲ್ಲದೆ ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಇದರಲ್ಲಿ ಮಹಿಳೆಯರು ಸೇರಿದಂತೆ ೧೦ ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದಾರೆ.

೨. ಇವರು ಭಾರತೀಯರೋ ಅಥವಾ ಮೊಘಲರ ವಂಶಜರೋ ?

ಹಿಮಾಚಲ ಪ್ರದೇಶದ ಸುಜಾನಪುರದಲ್ಲಿರುವ ಮಸೀದಿಯ ಮುಂಭಾಗದಲ್ಲಿ ಮಹಾರಾಣಾ ಪ್ರತಾಪ ಪ್ರತಿಮೆಯನ್ನು ಸ್ಥಾಪಿಸಲು ಮುಸಲ್ಮಾನ ಸುಧಾರಣಾ ಸಭೆಯು ವಿರೋಧ ವ್ಯಕ್ತಪಡಿಸಿದೆ. ಪ್ರತಿಮೆಯನ್ನು ಬೇರೆಡೆ ಸ್ಥಾಪಿಸಬೇಕು, ಇದು ದ್ವೇಷಕ್ಕೆ ಕಾರಣವಾಗಬಹುದು ಎಂದು ಸಂಘಟನೆಯು ಒತ್ತಾಯಿಸಿದೆ.

೩. ಕಾಂಗ್ರೆಸ್ಸಿನ ಪಾಕಿಸ್ತಾನಿ ಆಡಳಿತವನ್ನು ತಿಳಿಯಿರಿ ! 

ಶಿಮ್ಲಾದ (ಹಿಮಾಚಲ ಪ್ರದೇಶದ) ಸಂಜೌಲಿ ಮಸೀದಿಯ ೩ ಅಕ್ರಮ ಮಹಡಿಗಳನ್ನು ಕೆಡವಲು ಆದೇಶಿಸಿದ್ದರೂ ಕಳೆದ ೪ ತಿಂಗಳಿನಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ೧೫ ದಿನದೊಳಗೆ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ನೆಲಸಮ ಮಾಡದಿದ್ದಲ್ಲಿ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ದೇವಭೂಮಿ ಸಂಘರ್ಷ ಸಮಿತಿ ಎಚ್ಚರಿಸಿದೆ.

೪. ನೋಟೀಸ್‌ ಬೇಡ, ನೇರ ಕ್ರಮ ಕೈಗೊಳ್ಳಬೇಕು !

ಮುಂಬೈಯಲ್ಲಿ ಧ್ವನಿವರ್ಧಕಗಳನ್ನು ಮಿತಿಗಿಂತ ಹೆಚ್ಚು ಇರಿಸುವ ಮಸೀದಿಗಳಿಗೆ ಪೊಲೀಸರು ನೋಟಿಸ್‌ ಕಳುಹಿಸುತ್ತಿದ್ದಾರೆ. ಘಾಟ್‌ಕೋಪರ್‌ನ ಚಿರಾಗ್‌ನಗರದಲ್ಲಿರುವ ಜಾಮಾ ಮಸೀದಿಯ ಧ್ವನಿವರ್ಧಕದ ಧ್ವನಿ ೫೫ ಡೆಸಿಬಲ್‌ಗಿಂತ ಹೆಚ್ಚಿರುವುದನ್ನು ಕಂಡು ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

೫. ಅವೈಜ್ಞಾನಿಕ ಹಿಂದೂದ್ವೇಷಿಗಳಿಗೆ ತಪರಾಕಿ !

ಗಂಗಾನದಿಯ ನೀರು ಸ್ನಾನಕ್ಕೆ ಮಾತ್ರವಲ್ಲ, ಕುಡಿಯುವುದಕ್ಕೂ ಶುದ್ಧವಾಗಿದೆ. ಯಾರಿಗಾದರೂ ಸಣ್ಣದೊಂದು ಸಂದೇಹವಿದ್ದರೂ ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ತೃಪ್ತಿಪಡೆಯುವಂತೆ ವಿಜ್ಞಾನಿ (ಪದ್ಮಶ್ರೀ) ಡಾ. ಅಜಯ್‌ ಕುಮಾರ ಸೋನಕರ ಕರೆ ನೀಡಿದ್ದಾರೆ.

೬. ಇದನ್ನು ಇಡೀ ದೇಶದಲ್ಲಿ ಮಾಡಿ !

ಸಂಭಾಲ್‌ (ಉತ್ತರಪ್ರದೇಶ)ದ ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಮಾಳಿಗೆಯಿಂದ ಅಲ್ಲಿನ ಇಮಾಮ್‌ ಮೊದಲಿನಂತೆ ಧ್ವನಿವರ್ಧಕದ ಮೂಲಕ ಅಲ್ಲ, ಅದನ್ನು ಬಳಸದೇ ಆಜಾನ್‌ ನೀಡುತ್ತಿರುವ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ರಾಜ್ಯದಲ್ಲಿ ಅಕ್ರಮ ಧ್ವನಿವರ್ಧಕ ಹಾಕುವುದನ್ನು ನಿಷೇಧಿಸಲಾಗಿದೆ.