ಸಮಾಜವಾದಿ ಪಕ್ಷದ ನಾಯಕರು ಅವರ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿಸುತ್ತಾರೆ; ಆದರೆ ಬೇರೆಯವರ ಮಕ್ಕಳು ಉರ್ದು ಕಲಿಯಬೇಕು, ಎಂದು ಅವರಿಗೆ ಅನಿಸುತ್ತದೆ ! – ಯೋಗಿ ಆದಿತ್ಯನಾಥ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ವಿಧಾನಸಭೆಯಲ್ಲಿನ ಉರ್ದು ಪ್ರೇಮಿ ಸಮಾಜವಾದಿ ಪಕ್ಷಕ್ಕೆ ತಪರಾಕಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕರು ಅವರ ಮಕ್ಕಳಿಗೆ ಇಂಗ್ಲೀಷ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತಾರೆ; ಆದರೆ ಅವರಿಗೆ ನಿಮ್ಮ ಮಕ್ಕಳು ಉರ್ದು ಕಲಿಯಬೇಕು ಎಂದು ಅನಿಸುತ್ತದೆ. ಈ ಜನರು ಅವರ ಮಕ್ಕಳಿಗೆ ಮೌಲ್ವಿ ಮಾಡಲು ಇಚ್ಛಿಸುತ್ತಾರೆ. ಸಮಾಜವಾದಿ ಪಕ್ಷದ ನಾಯಕರು ದೇಶವನ್ನು ಕಟ್ಟರವಾದದ ಕಡೆಗೆ ತೆಗೆದುಕೊಂಡು ಹೋಗಲು ಇಚ್ಚಿಸುತ್ತಿದ್ದಾರೆಯೇ ? ಇದು ನಡೆಯುವುದಿಲ್ಲ. ಸಮಾಜವಾದದ ದ್ವಿಮುಖ ಚರಿತ್ರೆ ಜನರ ಮುಂದೆ ಬಹಿರಂಗಪಡಿಸಬೇಕು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷಕ್ಕೆ ತಪರಾಕಿ ನೀಡಿದರು. ಸಮಾಜವಾದಿ ಪಕ್ಷವು ವಿಧಾನ ಸಭೆಯ ಕಾರ್ಯಕಲಾಪ ಇಂಗ್ಲೀಷಕ್ಕಿಂತಲೂ ಉರ್ದು ಭಾಷೆಯಲ್ಲಿ ನಡೆಸಲು ಆಗ್ರಹಿಸುತ್ತಿದ್ದರು. ಅದರ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರೆಸಿ, ವಿರೋಧಪಕ್ಷ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ವಿರೋಧಿಸುತ್ತದೆ. ಇದೇ ಜನರು ಉರ್ದು ಪೋಷಿಸುತ್ತಾರೆ. ಅವರು ಭೋಜಪುರಿ, ಅವಧಿ ಈ ಭಾಷೆಗಳನ್ನು ವಿರೋಧಿಸುತ್ತಾರೆ. ನಾವು ಸ್ಥಳೀಯ ಭಾಷೆಗಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡುತ್ತೇವೆ. ಉತ್ತರ ಪ್ರದೇಶದಲ್ಲಿನ ಆಡು ಭಾಷೆಗಳನ್ನು ಗೌರವಿಸಬೇಕು. ಅದರ ರಕ್ಷಣೆಗಾಗಿ, ನಮ್ಮ ಸರಕಾರ ಭೋಜಪುರಿ ಅಕಾಡೆಮಿ ಸ್ಥಾಪನೆ ಮಾಡುತ್ತಿದೆ. ಸಂತ ತುಳಸಿದಾಸರ ಹೆಸರಿನ ಅವಧಿ ಅಕಾಡೆಮಿ ಸ್ಥಾಪನೆ ಮಾಡಲಾಗುವುದು. ಬ್ರಜ ಭಾಷೆಯ ಅಕಾಡೆಮಿ ಸ್ಥಾಪನೆ ಮಾಡುತ್ತಿದ್ದೇವೆ. ಸೂರದಾಸರು ಅವರ ಎಲ್ಲಾ ಗ್ರಂಥಗಳು ಬ್ರಜಭಾಷೆಯಲ್ಲಿ ಬರೆದಿದ್ದಾರೆ. ರಾಮಾಚರಿತ ಮಾನಸ ಉತ್ತರ ಭಾರತದಲ್ಲಿನ ಜನರಿಗಾಗಿ ಮತ್ತು ಮಾರೀಶಸ ಮತ್ತು ಫೀಜಿ ಸಹಿತ ಇತರ ದೇಶಗಳಲ್ಲಿ ವಾಸಿಸುವ ಸ್ಥಳಾಂತರರಿಗೆ ಇದು ಮಹತ್ವದ ಗ್ರಂಥವಾಗಿದೆ. ಅದು ಅವಧಿ ಭಾಷೆಯಲ್ಲಿ ಇದೆ’, ಎಂದು ಹೇಳಿದರು.

ಸಂಪಾದಕೀಯ ನಿಲುವು

ಉರ್ದು ವಿದೇಶಿ ಭಾಷೆ ಆಗಿದ್ದು ದೇಶದಲ್ಲಿ ಮತ್ತು ವಿದೇಶದಲ್ಲಿ ಅದರಿಂದ ಯಾವುದೇ ಲಾಭವಿಲ್ಲ. ಅದನ್ನು ಪೋಷಿಸುವ ಪಕ್ಷದಲ್ಲಿನ ನಾಯಕರಿಗೆ ಇಸ್ಲಾಮಿ ದೇಶಗಳಿಗೆ ಕಳುಹಿಸಬೇಕು !