ಪ್ರಯಾಗರಾಜ ಕುಂಭಮೇಳ 2025
ಭಾರತದಲ್ಲಿನ ಎಲ್ಲಾ ರಾಜ್ಯಗಳ ಸಹಿತ ವಿದೇಶಿ ನಾಗರೀಕರ ಸಹಭಾಗ !

ಪ್ರಯಾಗರಾಜ, ಫೆಬ್ರುವರಿ ೩,(ಸುದ್ಧಿ.) – ಮಹಾಕುಂಭಮೇಳದಲ್ಲಿ ಸನಾತನದ ಗ್ರಂಥಗಳಿಗೆ ಉತ್ಸಾಹಭರಿತ ಪ್ರತಿಕ್ರಿಯೆ ದೊರೆತಿದೆ. ಹಿಂದೂ ಧರ್ಮದ ಶಿಕ್ಷಣ ಸುಲಭ, ಸರಳ ಮತ್ತು ಶಾಸ್ತ್ರೀಯ ಭಾಷೆಯಲ್ಲಿ ನೀಡುವ ಸನಾತನದ ಗ್ರಂಥ ಸಂಪತ್ತು ಜಿಜ್ಞಾಸುಗಳನ್ನು ಆಕರ್ಷಿತಗೊಳಿಸುತ್ತಿದೆ. ಗ್ರಂಥ ಪ್ರದರ್ಶನ ಆರಂಭವಾದ ನಂತರ ಜನವರಿ ೧೦ ರಿಂದ ಫೆಬ್ರುವರಿ ೨ ಈ ೧೪ ದಿನದ ಕಾಲಾವಧಿಯಲ್ಲಿ ಕುಂಭಮೇಳದಲ್ಲಿನ ಮೋರಿ ಮುಕ್ತಿ ಚೌಕದಲ್ಲಿನ ಸನಾತನ ಗ್ರಂಥ ಪ್ರದರ್ಶನಕ್ಕೆ ೨೫ ಸಾವಿರಗಿಂತಲೂ ಹೆಚ್ಚಿನ ಜನರು ಭೇಟಿ ನೀಡಿದ್ದಾರೆ. ಇದರಲ್ಲಿ ಭಾರತದಲ್ಲಿನ ಎಲ್ಲಾ ರಾಜ್ಯಗಳ ಸಹಿತ ಅಮೆರಿಕ, ಆಸ್ಟ್ರೇಲಿಯ, ನೇಪಾಳ, ಕೆನಡಾ, ಇಂಡೋನೇಷಿಯಾ, ಮಲೇಶಿಯಾ ಈ ದೇಶದಲ್ಲಿನ ನಾಗರೀಕರ ಸಮಾವೇಶವಿದೆ.

ಗ್ರಂಥ ಪ್ರದರ್ಶನ ನೋಡಿ ಜಿಜ್ಞಾಸುಗಳು ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ, ಕೆಲವು ಜಿಜ್ಞಾಸುಗಳು ಸ್ವಂತ ಭಾಷೆಯಲ್ಲಿನ ಗ್ರಂಥದ ಎಲ್ಲಾ ಭಾಗಗಳ ಬೇಡಿಕೆ ನೀಡುತ್ತಿದ್ದಾರೆ. ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡುವ ಕೆಲವು ಜಿಜ್ಞಾಸುಗಳು ಮತ್ತೆ ಮತ್ತೆ ನೂತನ ಜಿಜ್ಞಾಸುಗಳನ್ನು ಕರೆದುಕೊಂಡು ಗ್ರಂಥ ಪ್ರದರ್ಶನ ಸ್ಥಳಕ್ಕೆ ಬರುತ್ತಿದ್ದಾರೆ. ಕೆಲವು ಜಿಜ್ಞಾಸುಗಳು ಅವರ ರಾಜ್ಯದಲ್ಲಿ ಸನಾತನದ ಗ್ರಂಥ ವಿತರಣೆಗಾಗಿ ಸ್ಥಳ ಉಪಲಬ್ಧ ಮಾಡಿ ಕೊಡುವ ಆಶ್ವಾಸನೆ ನೀಡಿದ್ದಾರೆ ಹಾಗೂ ಕೆಲವು ಜನರು ಸ್ವತಃ ಮತ್ತು ಆಪ್ತರಿಗಾಗಿ ಕೂಡ ಗ್ರಂಥಗಳ ಬೇಡಿಕೆ ನೀಡುತ್ತಿದ್ದಾರೆ. ಅನೇಕರು ಗ್ರಂಥ ತೆಗೆದುಕೊಂಡು ನಂತರ ಇತರ ಗ್ರಂಥದ ಬೇಡಿಕೆಗಾಗಿ ಸನಾತನದ ಜಾಲತಾಣ ಮತ್ತು ಅದಕ್ಕೆ ಸಂಪರ್ಕಿಸಲು ಸಂಪರ್ಕ ಸಂಖ್ಯೆಯನ್ನು ಕೇಳಿ ಪಡೆಯುತ್ತಿದ್ದಾರೆ. ಹಿಂದಿ, ಬಂಗಾಲಿ, ಕನ್ನಡ ಮತ್ತು ಮರಾಠಿ ಭಾಷೆಯಲ್ಲಿನ ಗ್ರಂಥಗಳಿಗೆ ವಿಶೇಷ ಪ್ರತಿಕ್ರಿಯೆ ಲಭಿಸುತ್ತಿದೆ.

ಸನಾತನದ ಗ್ರಂಥಗಳು ‘ಆನ್ಲೈನ್’ನಲ್ಲಿ ಲಭ್ಯ !

ಸನಾತನದ ವಿವಿಧ ೧೭ ಭಾಷೆಯಲ್ಲಿನ ಗ್ರಂಥಗಳು ಮತ್ತು ಸಾತ್ವಿಕ ಉತ್ಪಾದನೆಗಳು https://sanatanshop.com/ ಈ ಜಾಲತಾಣದಲ್ಲಿ ಲಭ್ಯವಿದೆ. ಜಿಜ್ಞಾಸುಗಳು ಗ್ರಂಥ ಮತ್ತು ಸಾತ್ವಿಕ ಉತ್ಪಾದನೆ ಬೇಕಿದ್ದರೆ 9167512161 ಈ ಸಂಖ್ಯೆಗೆ ಸಂಪರ್ಕಿಸಬಹುದು.
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!