ಯಾವಾಗಲೂ ಬಲದ ವಿಚಾರ ಮಾಡುವುದೇ ಉಪಾಯವಾಗಿದೆ

ಏಳಿ, ಎದ್ದೇಳಿ, ಧೀರರಾಗಿರಿ, ಶಕ್ತಿವಂತರಾಗಿರಿ !

ನೀವೆಲ್ಲರೂ ಎಲ್ಲಾ ಜವಾಬ್ದಾರಿಗಳನ್ನು ತಮ್ಮಲ್ಲೇ ತೆಗೆದುಕೊಳ್ಳಿರಿ ಹಾಗೂ ನೀವೇ ನಿಮ್ಮ ಭಾಗ್ಯದ ನಿರ್ಮಾಪಕರು ಎಂದು ಅರಿತುಕೊಳ್ಳಿ. ನಿಮಗೆ ಬೇಕಾಗಿರುವ ಎಲ್ಲಾ ಸಹಾಯ ಹಾಗೂ ಎಲ್ಲಾ ಬಲವು ನಿಮ್ಮೊಳಗೆಯೇ ಇದೆ; ಹಾಗಾಗಿ ನೀವೇ ನಿಮ್ಮ ಭವಿಷ್ಯವನ್ನು ರೂಪಿಸಿ. ಯಾವಾಗಲೂ ದುರ್ಬಲತೆಯ ವಿಚಾರವನ್ನು ಮಾಡುವುದರಿಂದ ಬಲವು ಪ್ರಾಪ್ತವಾಗುವುದಿಲ್ಲ. ಸತತವಾಗಿ ದುರ್ಬಲತೆಯ ವಿಚಾರವನ್ನು ಮಾಡುತ್ತಾ ಕುಳಿತುಕೊಳ್ಳುವುದು ಇದು ದುರ್ಬಲತೆಯನ್ನು ದೂರ ಮಾಡುವ ಉಪಾಯವಲ್ಲ. ಇದಕ್ಕಾಗಿ ಯಾವಾಗಲೂ ಬಲದ ವಿಚಾರವನ್ನು ಮಾಡುವುದೇ ಉಪಾಯವಾಗಿದೆ.

(ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪೂರ.)