೧. ಹಿಂದೂಗಳೇ ಇದನ್ನು ಗಮನದಲ್ಲಿಡಿ !
‘ನಾವು (ಹಿಂದೂಗಳು) ಒಟ್ಟಾಗಿರುವ ಅವಶ್ಯಕತೆ ಇದೆ; ಏಕೆಂದರೆ ನಾವು ವಿಭಜಿಸಲ್ಪಟ್ಟರೆ, ನಾವು ಕತ್ತರಿಸಲ್ಪಡುತ್ತೇವೆ. ನಮ್ಮ ನಾಶ ಖಚಿತವಿದೆ’, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಥುರಾದಲ್ಲಿ ಹೇಳಿಕೆ ನೀಡಿದ್ದಾರೆ.
೨. ಇದು ಭಾರತಕ್ಕೆ ಲಜ್ಜಾಸ್ಪದ ಸಂಗತಿ !
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ೩ ಗಂಟೆಗಳಿಗೊಮ್ಮೆ ಒಬ್ಬ ಮಹಿಳೆಯು ಅತ್ಯಾಚಾರಕ್ಕೊಳಗಾಗುತ್ತಾಳೆ. ೨೦೨೨ ರಲ್ಲಿ ದೇಶದಲ್ಲಿ ಒಟ್ಟು ೩೧ ಸಾವಿರದ ೫೧೬ ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣಗಳಲ್ಲಿ ೧೦೦ ಆರೋಪಿಗಳ ಪೈಕಿ ೨೭ ಜನರಿಗೆ ಮಾತ್ರ ಶಿಕ್ಷೆಯಾಗಿದೆ.
೩. ದೇಶದಿಂದ ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?
ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಫರಹಾತುಲ್ಲಾ ಘೋರಿ ಇವನು ಭಾರತದಲ್ಲಿ ಸ್ಥಳೀಯ ಭಯೋತ್ಪಾದಕ ಗುಂಪುಗಳನ್ನು (‘ಸ್ಲೀಪರ್ ಸೆಲ್’ಗಳನ್ನು) ‘ಭಾರತೀಯ ರೈಲ್ವೆ, ಇಂಧನ ಮತ್ತು ನೀರಿನ ಪೈಪ್ಲೈನ್ಗಳು, ಪೊಲೀಸರು ಮತ್ತು ಹಿಂದೂ ನಾಯಕರನ್ನು ಗುರಿಯಾಗಿಸಲು’ ಪ್ರಚೋದಿಸಿದ್ದಾನೆ.
೪. ಭಾರತದಲ್ಲಿ ಇಂತಹ ಕ್ರಮ ಯಾವಾಗ ?
ಬ್ರಿಟನ್ನಲ್ಲಿ ದ್ವೇಷಪೂರ್ಣ ಭಾಷಣಗಳಿಂದ ಮುಸ್ಲಿಮೇತರರ ವಿರುದ್ಧ ಫತ್ವಾ ಹೊರಡಿಸಿದ್ದ ಆರೋಪದಲ್ಲಿ ೨೪ ಮಸೀದಿಗಳ ತನಿಖೆ ಆರಂಭವಾಗಿದೆ. ಈ ಮಸೀದಿಗಳನ್ನು ಪಾಕಿಸ್ತಾನಿ ಮೂಲದವರು ನಡೆಸುತ್ತಿದ್ದಾರೆ. ಅದರಲ್ಲಿ ‘ಇಸ್ರೈಲ್ನ್ನು ನಾಶ ಮಾಡಿ’, ‘ಯಹೂದಿಗಳನ್ನು ಕೊಲ್ಲಿ’ ಮುಂತಾದ ಸಂದೇಶಗಳಿದ್ದವು.
೫. ಈಗ ದೇವಸ್ಥಾನಗಳ ಸರಕಾರೀಕರಣವನ್ನು ಸಹ ರದ್ದುಪಡಿಸಿ !
ಆಂಧ್ರಪ್ರದೇಶ ರಾಜ್ಯದ ದೇವಸ್ಥಾನಗಳಲ್ಲಿ ಕೇವಲ ಹಿಂದೂಗಳನ್ನೇ ನೇಮಿಸುವುದರೊಂದಿಗೆ ದೇವಸ್ಥಾನದ ಅರ್ಚಕರ ವೇತನವನ್ನು ಶೇ. ೫೦ ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೆ ವೇದಾಧ್ಯಯನ ಮಾಡುತ್ತಿರುವ ನಿರುದ್ಯೋಗಿ ಯುವಕರಿಗೆ ಮಾಸಿಕ ೩ ಸಾವಿರ ರೂಪಾಯಿ ಭತ್ತೆ ಕೊಡಲಾಗುವುದು.
೬. ದೇವಸ್ಥಾನಗಳಲ್ಲಿ ಕಳ್ಳತನ ಯಾರು ಮಾಡುತ್ತಾರೆ ಎಂದು ಗುರುತಿಸಿರಿ !
ಅಸ್ಸಾಂನ ಕಳ್ಳರಾದ ಅಲ್ತಾಬ್ ಅಲಿ ಮತ್ತು ಮೀರ್ ಹುಸೇನ್ ಮಡಿಕೇರಿಯ ಕೋಟೆ ಮಾರಿಯಮ್ಮ ದೇವಸ್ಥಾನದ ಬಾಗಿಲು ಮುರಿದು ೨ ಲಕ್ಷದ ೫೦ ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ.
೬. ಇಂತಹವರನ್ನು ಇಡೀ ದೇಶದಲ್ಲಿ ನಿಷೇಧಿಸಬೇಕು !
ಬರೇಲಿ (ಉತ್ತರಪ್ರದೇಶ) ದಲ್ಲಿ ಆಲಾ ಹಜರತ್ ಅವರ ಉರುಸ (ಮುಸ್ಲಿಮರ ಧಾರ್ಮಿಕ ಹಬ್ಬ) ದಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವಕರು ಮಧ್ಯಾಹ್ನ ಖಲೀಲ್ ಚೌಕ್ನಲ್ಲಿ ನಮಾಜ್ ಗಾಗಿ ರಸ್ತೆಯಲ್ಲಿ ಕುಳಿತಾಗ ಅವರನ್ನು ಪೊಲೀಸರು ಓಡಿಸಿದರು.

ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ಕಾಶ್ಮೀರದ ಪ್ರತಿಯೊಂದು ಕಬ್ರಸ್ತಾನ್ ಪಾಕಿಸ್ತಾನಿ ಭಯೋತ್ಪಾದಕರ ಗೋರಿಗಳಿವೆ!
ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮುಂಬೈ ಉಚ್ಚ ನ್ಯಾಯಾಲಯದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ!
ಎಐ’ ಆಧಾರಿತ ಕಾವಲು ವ್ಯವಸ್ಥೆಯಿಂದಾಗಿ ಅನಂತನಾಗನಲ್ಲಿ 3 ಶಂಕಿತ ಉಗ್ರರ ಬಂಧನ : Terrorists Nabbed