ಭಾರತದ ಗಡಿಗೆ ತಲುಪಿದ ಬಾಂಗ್ಲಾದೇಶಿ ಹಿಂದುಗಳ ಜನಸ್ತೊಮ; ಪ್ರವೇಶ ಅನುಮತಿಗೆ ಆಗ್ರಹ

ಜಲಾಶಯದಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಂದ ಸಾವಿರಾರು ಹಿಂದೂಗಳು ಭಾರತದಲ್ಲಿ ಪ್ರವೇಶ ಪಡೆಯಲು ಗಡಿಯಲ್ಲಿ ತಲುಪಿದ್ದಾರೆ. ಭಾರತದಲ್ಲಿ ಪ್ರವೇಶ ಸಿಗಲು ಬಾಂಗ್ಲಾದೇಶದ ಹಿಂದುಗಳು ಗಡಿಯಲ್ಲಿನ ನದಿ ಮತ್ತು ಕೆರೆಗಳಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ ನೀಡುತ್ತಿದ್ದಾರೆ. ಬಂಗಾಳದ ಕುಚಬಿಹಾರದ ಸೀತಾಲಕುಚಿಯಲ್ಲಿನ ಒಂದು ಜಲಾಶಯದಲ್ಲಿ ಹಿಂದುಗಳು ನಿಂತಿದ್ದಾರೆ. ಗಡಿ ಭದ್ರತಾ ಪಡೆಯವರು ಅವರಿಗೆ ಭಾರತದಲ್ಲಿ ಪ್ರವೇಶಸುವುದನ್ನು ತಡೆದಿದ್ದಾರೆ.

ಇಲ್ಲಿಯವರೆಗೆ ಭಾರತದಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಇದು ಎಲ್ಲಕ್ಕಿಂತ ದೊಡ್ಡ ಗುಂಪು ಎಂದು ಗಡಿ ಭದ್ರತಾ ಪಡೆ ಹೇಳಿದೆ. ಇವರು ಬಾಂಗ್ಲಾದೇಶದಲ್ಲಿನ ರಂಗಪುರಿ ಜಿಲ್ಲೆಯಲ್ಲಿನ ಧೋಯಿಖಾವಾ ಮತ್ತು ಗೆಂದುಗುರಿ ಗ್ರಾಮದವರಾಗಿದ್ದಾರೆ. ಸೇನಾಪಡೆಯಿಂದ ಅವರಿಗೆ ಅವರ ಸ್ವ ಗ್ರಾಮಕ್ಕೆ ಹಿಂತಿರುಗಲು ಹೇಳಲಾಗಿದೆ, ಆದರೆ ಅವರು ಕೇಳಲು ಸಿದ್ದರಿಲ್ಲ.