೧. ಸದ್ಗುರುಗಳು ತಮ್ಮ ಶಿಷ್ಯನಿಗೆ ಶಾರೀರಿಕ ಮತ್ತು ಮಾನಸಿಕ ಹೀಗೆ ಎರಡು ಸ್ವರೂಪದ ಬಲವನ್ನು ನೀಡುವುದು
‘ಸಾಧಕನ ದೃಷ್ಟಿಯಿಂದ ಅತ್ಯಂತ ಮೂಲಭೂತ ಮೂರು ಅವಶ್ಯಕತೆಗಳಿವೆ. ಒಂದು ನಿಶ್ಚಿತ ದಿಕ್ಕು, ಎರಡನೆಯದು ಪರಮ ನಿಷ್ಠೆ, ಮೂರನೆದ್ದು ಮಾರ್ಗಕ್ರಮಣ ಮಾಡಲು ಬೇಕಾಗುವ ಶಕ್ತಿ ಕೇವಲ ದಿಕ್ಕು ತಿಳಿದರೂ ಪ್ರಯೋಜನವಿಲ್ಲ ಅಥವಾ ನಿಷ್ಠೆಯಿದ್ದರೂ ಪ್ರಯೋಜನವಿಲ್ಲ. ಅಷ್ಟೇ ಅಲ್ಲ, ಶಕ್ತಿಯಿರುವುದು ಹೆಚ್ಚು ಮಹತ್ವದ್ದಾಗಿದೆ. ಅಧ್ಯಾತ್ಮದಲ್ಲಿ ಶಾರೀರಿಕ ಮತ್ತು ಮಾನಸಿಕ ಎರಡು ಸ್ವರೂಪದ ಬಲ ಆವಶ್ಯಕವಾಗಿವೆ. ಬಲವಿಲ್ಲದೆ ಉತ್ಸಾಹ ಮತ್ತು ಪ್ರತಿಜ್ಞೆ ನಿರ್ಮಾಣವಾಗುವುದಿಲ್ಲ. ಸದ್ಗುರುಗಳು ತಮ್ಮ ಶಿಷ್ಯನಿಗಾಗಿ ತಮಲ್ಲಿನ ಶಕ್ತಿಯನ್ನು ನೀಡಿ ಅದೇ ಕಾರ್ಯವನ್ನು ಮಾಡುತ್ತಿರುತ್ತಾರೆ.
೨. ಅನುಗ್ರಹವಾದ ಕ್ಷಣವೇ ನಿಜವಾದ ಸಾಧಕದೆಶೆಯ ಜನನವಾಗುವುದು
ಬಲ ಸಂಕ್ರಮಣವು ೪ ರೀತಿಯಲ್ಲಿ ಸಂಭವಿಸುತ್ತದೆ. – ಕಣ್ಣು, ಸ್ಪರ್ಶ, ಶಬ್ದ, ಸಂಕಲ್ಪ. ಯಾವುದೇ ರೀತಿಯಿಂದ ಬಲಸಂಕ್ರಮಣವನ್ನು ಮಾಡಿದರೂ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಯಾವ ವಿಧಾನವನ್ನು ಬಳಸಬೇಕು, ಎಂಬುದು ಸದ್ಗುರುಗಳಲ್ಲಿರುವ ಕ್ಷಮತೆ ಮತ್ತು ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ಆದರೂ, ಈ ಪ್ರಕ್ರಿಯೆಯನ್ನೇ ‘ಅನುಗ್ರಹ ಎಂದು ಕರೆಯುತ್ತಾರೆ. ಅನುಗ್ರಹವಾದ ಕ್ಷಣವೇ ನಿಜವಾದ ಸಾಧಕನ ಜನ್ಮವಾಗುತ್ತದೆ. ಈ ಕ್ಷಣದಿಂದಲೇ ಗುರು-ಶಿಷ್ಯರಲ್ಲಿನ ಸಂಬಂಧವು ತಂದೆ ಮಗನಂತೆ ಪ್ರತಿಷ್ಠಾಪಿಸುತ್ತದೆ ಮತ್ತು ಇಲ್ಲಿಂದಲೇ ಅಧ್ಯಾತ್ಮಜೀವನದ ಪ್ರಕ್ರಿಯೆ ಮುಂದುವರಿಯುತ್ತದೆ.
– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ಚಿಂತನಧಾರಾ)

ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !