ಮೇ ೨೬ ರ ದಾಳಿಯಲ್ಲಿ ೪೫ ಜನ ಹತ !

ತೇಲ್ ಅವಿವ್ (ಇಸ್ರೇಲ್) – ಇಸ್ರೇಲ್ ರಕ್ಷಣಾ ತಂಡ ಜೂನ್ ೨೧ ರಂದು ಗಾಝಾದ ದಕ್ಷಿಣದಲ್ಲಿನ ರಫಾಹನಗರದ ಮೇಲೆ ದಾಳಿ ಮಾಡಿದೆ. ಇದರ ಅಂತರ್ಗತ ನಗರದ ಹೊರಗೆ ‘ಅಲ್ ಮವಾಸಿ’ ಇಲ್ಲಿಯ ಪ್ಯಾಲೇಸ್ತೀನಿ ಜನರು ನಿರಾಶ್ರಿತರ ಶಿಬಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಇದರಲ್ಲಿ ೨೫ ಜನರು ಸಾವನ್ನಪ್ಪಿದ್ದು ೫೦ ಜನರು ಗಾಯಗೊಂಡಿದ್ದಾರೆ. ಪ್ಯಾಲೆಸಟೈನ ಆರೋಗ್ಯ ಸಚಿವಾಲಯವು ಈ ದಾಳಿಯ ಮಾಹಿತಿ ನೀಡಿದೆ; ಆದರೆ ಇಸ್ರೇಲ್ ರಕ್ಷಣಾ ದಳದಿಂದ ದಾಳಿ ಮಾಡಿರುವ ಯಾವುದೇ ಸೂಚನೆ ನೀಡಿಲ್ಲ. ಭಯೋತ್ಪಾದಕ ಜನರ ಪ್ರದೇಶದಿಂದ ಭಯೋತ್ಪಾದಕರು ಚಟುವಟಿಕೆ ನಡೆಸುತ್ತಿದ್ದಾರೆ’, ಎಂದು ಇಸ್ರೇಲ್ ಯಾವಾಗಲೂ ಹೇಳುತ್ತದೆ.
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಿಂದಾಗಿ ಲಕ್ಷಾಂತರ ಜನರು ಮೊದಲೇ ಆ ಪ್ರದೇಶವನ್ನು ತ್ಯಜಿಸಿ ಪಲಾಯನ ಮಾಡಿದ್ದಾರೆ. ಈ ಹಿಂದೆ ಮೇ ೨೬ ರಂದು ಇಸ್ರೇಲ್ ನಿಂದ ರಫಾಹ ನಿರಾಶ್ರಿತರ ಶಿಬಿರದ ಮೇಲೆ ವಾಯು ದಾಳಿ ನಡೆಸಿತ್ತು. ಅದರಲ್ಲಿ ೪೫ ಜನರು ಸಾವನ್ನಪ್ಪಿದ್ದರು ಹಾಗೂ ೨೦೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಇದರ ನಂತರ ಇಸ್ರೇಲ್ ದ್ವೇಷಿಗಳಿಂದ #AllEyesOnRafah (ಜಗತ್ತಿನ ಗಮನ ರಫಾಹ ಮೇಲೆ) ಈ ಹ್ಯಾಶ್ ಟ್ಯಾಗ್ ಉಪಯೋಗಿಸಿ ಇಸ್ರೇಲನ್ನು ಗುರಿ ಮಾಡಲಾಗಿತ್ತು. ಇದರಲ್ಲಿ ಭಾರತದಲ್ಲಿನ ಪ್ರಗತಿ(ಅಧೋ)ಪರ ಗುಂಪಿನಿಂದ ಇದನ್ನು ಬೆಂಬಲಿಸಿತ್ತು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !