‘ಸಂಸ್ಕೃತಿ ಯುವಾ ಸಂಸ್ಥೆ’ಯ ವತಿಯಿಂದ ಜೂನ 5 ರಂದು ಫ್ರಾನ್ಸನ ಸಂಸತ್ತಿನಲ್ಲಿ ಸನ್ಮಾನ ಸಮಾರಂಭ !
ಜೈಪುರ (ರಾಜಸ್ಥಾನ) – ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಜಾಗತಿಕ ಪ್ರಸಾರಕ್ಕಾಗಿ ಮಾಡಿರುವ ಅನನ್ಯ ಕೊಡುಗೆಗಾಗಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ 11ನೇ `ಭಾರತ ಗೌರವ ಪ್ರಶಸ್ತಿ’ ನೀಡಿ ಗೌರವಿಸಲಿದೆ. `ಸಂಸ್ಕೃತಿ ಯುವಾ ಸಂಸ್ಥೆ’ಯ ವತಿಯಿಂದ ಜೂನ 5, 2024 ರಂದು ಫ್ರಾನ್ಸ್ನ ಸಂಸತ್ತಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪಂಡಿತ ಸುರೇಶ ಮಿಶ್ರಾ ಘೋಷಿಸಿದ್ದಾರೆ.
![](https://static.sanatanprabhat.org/wp-content/uploads/sites/5/2024/06/05085749/shri_satshakti_bindatai_shri_chitshakti_anjalitai.jpg)
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪರವಾಗಿ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಸತ್ ಶಕ್ತಿ(ಸೌ.) ಬಿಂದಾ ಸಿಂಗಬಾಳ ಮತ್ತು ಚಿತ್ ಶಕ್ತಿ(ಸೌ.) ಅಂಜಲಿ ಗಾಡಗೀಳ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
Sachchidananda Parabrahman Dr Jayant Athavale (Founder, @SanatanSanstha) conferred the 11th ‘Bharat Gaurav’ Award by Sanskriti Yuva Sanstha (@BGAoffc) for His contributions to the spread of Spirituality and the uplift of Nation and Dharma.
Sachchidananda Parabrahman Dr… pic.twitter.com/J4TGToI96I
— Sanatan Sanstha (@SanatanSanstha) June 6, 2024
ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಉನ್ನತಿಗೆ ಅನನ್ಯ ಕೊಡುಗೆಗಾಗಿ ಗೌರವ
*28 ವರ್ಷಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಉನ್ನತಿಗಾಗಿ ಮೀಸಲಿಟ್ಟ `ಸಂಸ್ಕೃತಿ ಯುವಾ ಸಂಸ್ಥೆ’ಯು ಈ ವರ್ಷದ ಪ್ರತಿಷ್ಠಿತ `ಭಾರತ ಗೌರವ ಪ್ರಶಸ್ತಿ’ಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಅವರ ಅತ್ಯುತ್ತಮ ಸಾಮಾಜಿಕ ಕಾರ್ಯ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಅನನ್ಯ ಕೊಡುಗೆಗಾಗಿ ನೀಡಲಾಗುತ್ತಿದೆ.
ಈ ಮಹತ್ವಪೂರ್ಣ ಪ್ರಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರನ್ನು ಗೌರವಿಸಲು ಜಗತ್ತಿನಾದ್ಯಂತದ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ ಮತ್ತು ಈ ಸಮಾರಂಭ ಭಾರತೀಯ ಸಂಸ್ಕೃತಿಯ ಸಮೃದ್ಧ ಪರಂಪರೆಯ ಉತ್ಸವವನ್ನು ಆಚರಿಸುವ ಒಂದು ಮಹತ್ವಪೂರ್ಣ ವ್ಯಾಸಪೀಠವಾಗಲಿದೆ.*
The Founder of @SanatanSanstha, Sachchidananda Parabrahman Dr. Jayant Athavale to be awarded the 11th ‘Bharat Gaurav Award’!
The honor will be held in the French Parliament on June 5 on behalf of ‘Sanskrit Yuva Sanstha’!
Honoured for His unique contribution to the advancement… pic.twitter.com/xoZZen4Jsn
— Sanatan Prabhat (@SanatanPrabhat) June 4, 2024
`ಭಾರತ ಗೌರವ ಪ್ರಶಸ್ತಿ’ ಸಮಾರಂಭವು ಈ ಮೊದಲು `ಯುನೈಟೆಡ ಕಿಂಗಡಮ್ ಹೌಸ ಆಫ್ ಕಾಮನ್ಸ’ (ಬ್ರಿಟನ) ವಿಶ್ವ ಸಂಸ್ಥೆ ಮತ್ತು ಅಟ್ಲಾಂಟಿಸ ಹಾಗೂ ದುಬೈನಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಫ್ರಾನ್ಸ್ನ ಸಂಸತ್ತಿನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಯಾರು ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಪ್ರಸಾರದಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಿದ್ದಾರೆ. ಭಾರತ ಮತ್ತು ಭಾರತೀಯ ಸಮುದಾಯದ ಗಣ್ಯ ವ್ಯಕ್ತಿಗಳನ್ನು ಗೌರವಿಸುತ್ತದೆ.