೧೯೮೪ ರಿಂದ ೨೦೧೫ ರ ಅವಧಿಯಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರ ಸಂಖ್ಯೆ ೯೪% ರಷ್ಟು ಹೆಚ್ಚಳ !

  • ಮುಸಲ್ಮಾನರ ಸಂಖ್ಯೆ ೩೯ ಲಕ್ಷದಿಂದ ೭೭ ಲಕ್ಷಕ್ಕೆ ಏರಿಕೆ

  • ಹಿಂದೂ ಲಿಂಗಾಯತರ ಜನಸಂಖ್ಯೆಯಲ್ಲಿ ಕೇವಲ ೧೦% ರಷ್ಟು ಹೆಚ್ಚಳ

ಬೆಂಗಳೂರು – ಕರ್ನಾಟಕದಲ್ಲಿ ೧೯೮೪ ರಿಂದ ೨೦೧೫ ರ ಅವಧಿಯಲ್ಲಿ ಮುಸಲ್ಮಾನರ ಜನಸಂಖ್ಯೆಯು ಸುಮಾರು ದ್ವಿಗುಣಗೊಂಡಿದೆ. ಆದರೆ ಈ ಅವಧಿಯಲ್ಲಿ ಲಿಂಗಾಯತ ಹಿಂದೂಗಳ ಜನಸಂಖ್ಯೆಯು ಕೇವಲ ೧೦% ರಷ್ಟು ಮಾತ್ರ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆದ ಜಾತಿ ಗಣತಿಯ ಸಮೀಕ್ಷೆಯಿಂದ ಈ ಅಂಕಿ-ಅಂಶಗಳು ಬಹಿರಂಗವಾಗಿವೆ.

೧. ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯ ವರದಿಯ ಪ್ರಕಾರ, ೧೯೮೪ ರಲ್ಲಿ ಕರ್ನಾಟಕದ ಜಾತಿಗಳ ಜನಸಂಖ್ಯೆಯ ಅಂದಾಜು ಮಾಡಲು ರಚಿಸಲಾದ ವೆಂಕಟಸ್ವಾಮಿ ಆಯೋಗದ ಸಮೀಕ್ಷೆಯಲ್ಲಿ ಮುಸಲ್ಮಾನರ ಜನಸಂಖ್ಯೆ ೩೯ ಲಕ್ಷ ೬೩ ಸಾವಿರ ವರದಿಯಾಗಿತ್ತು, ಇದು ರಾಜ್ಯದ ಜನಸಂಖ್ಯೆಯ ೧೦.೯೭% ರಷ್ಟಿತ್ತು.

೨. ಇದೇ ಸಮೀಕ್ಷೆಯಿಂದ ತಿಳಿದುಬಂದ ಅಂಶವೆಂದರೆ, ಕರ್ನಾಟಕದಲ್ಲಿ ೬೧ ಲಕ್ಷ ೧೪ ಸಾವಿರ ವೀರಶೈವ-ಲಿಂಗಾಯತರಿದ್ದಾರೆ ಮತ್ತು ಅವರು ರಾಜ್ಯದ ಜನಸಂಖ್ಯೆಯ ೧೬.೯೨% ರಷ್ಟಿದ್ದಾರೆ. ಇದರ ಹೊರತಾಗಿ, ಒಕ್ಕಲಿಗ ಸಮುದಾಯದ ಜನಸಂಖ್ಯೆ ೪೨ ಲಕ್ಷ ೧೯ ಸಾವಿರ ಎಂದು ಹೇಳಲಾಗಿದ್ದು ಆಗ ರಾಜ್ಯದ ಜನಸಂಖ್ಯೆಯಲ್ಲಿ ಅವರ ಪಾಲು ೧೧.೬೮% ರಷ್ಟಿತ್ತು.

೩. ೧೯೮೪ ರ ಸಮೀಕ್ಷೆಯಲ್ಲಿ ರಾಜ್ಯದ ದಲಿತ ಜನಸಂಖ್ಯೆ ೫೭ ಲಕ್ಷ ೩೧ ಸಾವಿರವಾಗಿತ್ತು. ರಾಜ್ಯದ ಜನಸಂಖ್ಯೆಯ ಸುಮಾರು ೧೬% ರಷ್ಟು ಜನರು ದಲಿತರಿದ್ದರು.

೪. ೨೦೧೫ ರ ಸಮೀಕ್ಷೆಯಲ್ಲಿ ಈ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿತ್ತು. ಈ ಸಮೀಕ್ಷೆಯಿಂದ ತಿಳಿದುಬಂದ ಅಂಶವೆಂದರೆ, ೧೯೮೪ ರಿಂದ ೨೦೧೫ ರ ಅವಧಿಯಲ್ಲಿ ಕರ್ನಾಟಕದ ಮುಸಲ್ಮಾನರ ಜನಸಂಖ್ಯೆಯು ಸುಮಾರು ದ್ವಿಗುಣಗೊಂಡಿದೆ. ಈ ಸಮೀಕ್ಷೆಯ ಪ್ರಕಾರ, ೨೦೧೫ ರಲ್ಲಿ ಮುಸಲ್ಮಾನರ ಜನಸಂಖ್ಯೆ ೭೬ ಲಕ್ಷ ೯ ಸಾವಿರ ಇತ್ತು. ಇದರರ್ಥ, ಈ ೩೦ ವರ್ಷಗಳಲ್ಲಿ ರಾಜ್ಯದ ಮುಸಲ್ಮಾನರ ಜನಸಂಖ್ಯೆಯು ೯೪% ರಷ್ಟು ಹೆಚ್ಚಾಗಿದೆ.

೫. ಮುಸಲ್ಮಾನರ ಜನಸಂಖ್ಯೆಯು ದ್ವಿಗುಣಗೊಂಡಿರುವುದರಿಂದ, ಅವರು ಈಗ ಇತರ ಹಿಂದುಳಿದ ವರ್ಗಗಳಲ್ಲಿ ಅತಿ ದೊಡ್ಡ ವರ್ಗವಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಅವರ ಮೀಸಲಾತಿಯನ್ನು ೪% ರಿಂದ ೮% ಕ್ಕೆ ಹೆಚ್ಚಿಸುವ ಶಿಫಾರಸ್ಸನ್ನು ಸಹ ಮಾಡಲಾಗಿದೆ!

ಈ ವರದಿಯನ್ನು ವಿರೋಧಿಸಿದ್ದ ಕಾಂಗ್ರೆಸ್‌!

೨೦೧೫ ರ ಸಮೀಕ್ಷೆಗೆ ಕಾಂಗ್ರೆಸ್‌ನಲ್ಲೇ ವಿರೋಧ ವ್ಯಕ್ತವಾಗಿದೆ. ಕರ್ನಾಟಕದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು, “ಸಚಿವ ಸಂಪುಟದಲ್ಲಿ ೭ ಲಿಂಗಾಯತ ಸಚಿವರು ಇದ್ದೇವೆ ಮತ್ತು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದು ಹೇಳಿದ್ದರು. ಇದೀಗ ಒಕ್ಕಲಿಗ ಸಮುದಾಯದ ಅನೇಕ ಮುಖಂಡರು ಮತ್ತು ಸಂತರು ಈ ವರದಿಯನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. ತಮ್ಮ ಜನಸಂಖ್ಯೆಯನ್ನು ಕಡಿಮೆ ಅಂದಾಜು ಮಾಡಲಾಗಿದ್ದು, ತಮಗೆ ಅನ್ಯಾಯವಾಗಿದೆ ಎಂದು ಅವರು ವಾದಿಸುತ್ತಿದ್ದಾರೆ. ಏಪ್ರಿಲ್ ೧೭, ೨೦೨೫ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಗಿದೆ; ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಳ್ಳಲಾಗಿಲ್ಲ.

ಸಂಪಾದಕೀಯ ನಿಲುವು

ಕಳೆದ ೧೦ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಇನ್ನೆಷ್ಟು ಹೆಚ್ಚಳವಾಗಿದೆಯೋ ಊಹಿಸಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಿಂದಾಗಿ ಮುಂದಿನ ಕೆಲ ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ದೇಶವಾಗಲಿದೆ ಎಂದು ಹಿಂದೂಗಳಿಗೆ ಅರ್ಥವಾಗುತ್ತದೆಯೇ? ಅಥವಾ ಅಂತಹ ಇಸ್ಲಾಮಿಕ್ ದೇಶವನ್ನು ಸ್ವೀಕರಿಸಲು, ಮತಾಂತರ ಮತ್ತು ನರಸಂಹಾರವನ್ನು ಎದುರಿಸಲು ಅವರು ಸಿದ್ಧರಿದ್ದಾರೆಯೇ?