Hanuman Idol Vandalized : ಉತ್ತರ ಪ್ರದೇಶದಲ್ಲಿ ಹಿಂದೂ ಯುವಕನಿಂದ ಹನುಮಾನ್ ವಿಗ್ರಹ ಧ್ವಂಸ

ಆರೋಪಿ ಮನೋರೋಗಿ ಎಂದು ಪೊಲೀಸರ ಸಂದೇಹ

ಸಾಂದರ್ಭಿಕ ಚಿತ್ರ

ಅಜಮ್‌ಗಡ (ಉತ್ತರ ಪ್ರದೇಶ) – ಸಿಂಹಪೂರ್ ಮಾರುಕಟ್ಟೆಯ ಪೊಲೀಸ್ ಠಾಣೆಯ ಹಿಂದೆ ಅಮೃತ ಸರೋವರ ದಡದ ಮೇಲೆ ಕಟ್ಟಿರುವ ದೇವಾಲಯದಲ್ಲಿ ಸ್ಥಾಪಿಸಿರುವ ಹನುಮಂತನ ವಿಗ್ರಹವನ್ನು ಗಣೇಶ್ ಗುಪ್ತಾ ಎಂಬ ಯುವಕ ಧ್ವಂಸಗೊಳಿಸಿದ್ದಾನೆ. ಅವನು ದೇವಾಲಯದಲ್ಲಿ ಇಟ್ಟಿದ್ದ ತ್ರಿಶೂಲವನ್ನು ಕಿತ್ತೆಸೆದನು ಮತ್ತು ವಿರೋಧಿಸಿದ ಸ್ಥಳೀಯರನ್ನು ಓಡಿಸಿದನು. ಗುಪ್ತಾನನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಲು ಪ್ರಯತ್ನಿಸಿದನು. ವಿಗ್ರಹದ ಧ್ವಂಸದ ಘಟನೆಯ ನಂತರ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಬೇಗನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸ್ ಇನ್ಸ್‌ಪೆಕ್ಟರ್ ಅನುರಾಗ್ ಕುಮಾರ್ ಮಾತನಾಡಿ, ಪ್ರಾಥಮಿಕವಾಗಿ ಆರೋಪಿ ಮನೋರೋಗಿಯಂತೆ ಕಾಣುತ್ತಿದ್ದಾನೆ; ಆದರೆ ಈ ಬಗ್ಗೆ ತನಿಖೆ ನಡೆಯಬೇಕಾಗಿದೆ. ಆರೋಪಿಯ ಕೃತ್ಯಗಳು ಅಕ್ಷಮ್ಯ ಇದೆ. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಒಬ್ಬ ಹಿಂದೂ ಮನೋರೋಗಿ ಹಿಂದೂ ದೇವಸ್ಥಾನಕ್ಕೆ ಹೋಗಿ ಧ್ವಂಸ ಮಾಡುತ್ತಾನೆ, ಆದರೆ ಕಥಿತ ಮುಸ್ಲಿಂ ಮನೋರೋಗಿ ಮಸೀದಿಯನ್ನಲ್ಲ, ದೇವಸ್ಥಾನಕ್ಕೆ ಹೋಗಿ ಅದನ್ನು ಧ್ವಂಸ ಮಾಡುತ್ತಾನೆ, ಇದರಿಂದ ಯಾರು ನಿಜವಾದ ಮನೋರೋಗಿ ಮತ್ತು ಯಾರು ನಕಲಿ? ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!