
ಛತ್ತರಪುರ (ಮಧ್ಯಪ್ರದೇಶ) – ಇಲ್ಲಿ 77 ವರ್ಷದ ವೃದ್ಧನ ಮೇಲೆ ಹಲ್ಲೆ ಮಾಡಿದ ಡಾ. ರಾಜೇಶ ಮಿಶ್ರಾ ಅವರಿಗೆ ‘ಕಾರಣ ಕೇಳಿ’ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ಇಲಾಖಾ ವಿಚಾರಣೆಗೆ ಛತ್ತರಪುರ ವೈದ್ಯಕೀಯ ಪ್ರಾಧಿಕಾರ ಆದೇಶಿಸಿದೆ. ವೃದ್ಧನ ಹೆಸರು ಉಧವಲಾಲ ಜೋಶಿ ಆಗಿದ್ದು, ಏಪ್ರಿಲ್ 17 ರಂದು ಈ ಘಟನೆ ನಡೆದಿದೆ. ಡಾ. ಮಿಶ್ರಾ ಅವರು ಜೋಶಿಯವರನ್ನು ಎಳೆದುಕೊಂಡು ಹೋಗುತ್ತಿರುವ ಮತ್ತು ಆಸ್ಪತ್ರೆಯ ಸಮೀಪದ ಪೊಲೀಸ ಠಾಣೆಯಲ್ಲಿ ಕೂಡಿ ಹಾಕುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ನಂತರ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಡಾ. ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಉಧವಲಾಲ ಜೋಶಿ ಅವರು ತಮ್ಮ ಅನಾರೋಗ್ಯ ಪತ್ನಿಯನ್ನು ಹೊಟ್ಟೆನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಜೋಶಿ ಅವರು ಸರದಿಯಲ್ಲಿ ನಿಂತಿದ್ದಾಗ, ಕೆಲವು ಕಾರಣಗಳಿಗಾಗಿ ಡಾ. ಮಿಶ್ರಾ ಅವರೊಂದಿಗೆ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ಡಾ. ಮಿಶ್ರಾ ಅವರು ಜೋಶಿಯವರಿಗೆ ಕಪಾಳಕ್ಕೆ ಹೊಡೆದರು, ಕಾಲಿನಿಂದ ಒದ್ದರು ಮತ್ತು ಎಳೆದುಕೊಂಡು ಹೋಗುತ್ತಾ ಅವರ ಕನ್ನಡಕವನ್ನು ಮುರಿದರು. ಇದಕ್ಕೆ ಡಾ. ಮಿಶ್ರಾ ಅವರು, ‘ಜೋಶಿಯವರೇ ನನಗೆ ಕಪಾಳಕ್ಕೆ ಹೊಡೆದರು’ ಎಂದು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವು
|
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ