Jharkhand Karni Sena Chief Murder : ಜಾರ್ಖಂಡ; ಇಲ್ಲಿ ಅಪರಿಚಿತರಿಂದ ‘ರಜಪೂತ ಕರಣಿ ಸೇನೆ’ಯ ಪ್ರದೇಶಾಧ್ಯಕ್ಷರ ಹತ್ಯೆ

ರಜಪೂತ ಕರಣಿ ಸೇನೆ ಪ್ರದೇಶಾಧ್ಯಕ್ಷ ವಿನಯ ಸಿಂಗ್

ಜಮಶೇಡಪುರ (ಜಾರ್ಖಂಡ) – ‘ರಜಪೂತ ಕರಣಿ ಸೇನೆ’ಯ ಪ್ರದೇಶಾಧ್ಯಕ್ಷ ವಿನಯ ಸಿಂಗ್ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ವಿನಯ ಸಿಂಗ್ ಅವರು ಇಲ್ಲಿನ ಮಿನಿ ಪಂಜಾಬ ಎಂಬ ಹೋಟೆಲ್ ಬಳಿಯ ಗಲ್ಲಿಯೊಂದರಲ್ಲಿ ಹೋಗುತ್ತಿದ್ದಾಗ ದಾಳಿಕೋರರು ಅವರ ಮೇಲೆ ಗುಂಡು ಹಾರಿಸಿದರು. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ ಉಪಾಧೀಕ್ಷಕ ವಚನ ದೇಬ ಕುಜೂರ ಅವರು, ವಿನಯ ಸಿಂಗ ಅವರು ಮನೆಯಿಂದ ಬೆಳಿಗ್ಗೆ ಬೇಗನೆ ಹೊರಟಿದ್ದರು. ಬಹಳ ಸಮಯವಾದರೂ ಅವರು ಹಿಂತಿರುಗಲಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಹುಡುಕಾಡಿದಾಗ ಸಂಜೆ ಅವರ ಮೃತದೇಹ ಪತ್ತೆಯಾಗಿದೆ. ಸಿಂಗ್ ಅವರ ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಕರಣಿ ಸೇನೆಯಿಂದ ‘ರಸ್ತೆ ತಡೆ’ ಚಳವಳಿ

ಈ ಘಟನೆಯನ್ನು ವಿರೋಧಿಸಿ ಕರಣಿ ಸೇನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 33ರ ಡಿಮನಾ ಚೌಕಿಯಲ್ಲಿ ‘ರಸ್ತೆ ತಡೆ’ ಚಳವಳಿ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ನಂತರ ಮಧ್ಯರಾತ್ರಿ 1 ಗಂಟೆಗೆ ಪೊಲೀಸ ವರಿಷ್ಠಾಧಿಕಾರಿಗಳು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಈ ಚಳವಳಿಯನ್ನು ಹಿಂಪಡೆಯಲಾಯಿತು.

ಸಂಪಾದಕೀಯ ನಿಲುವು

ಜಾರ್ಖಂಡನ ಹಿಂದುದ್ರೋಹಿ ಜಾರ್ಖಂಡ ಮುಕ್ತಿ ಮೋರ್ಚಾ ಸರಕಾರದ ಆಡಳಿತದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ! ಇಂತಹ ರಾಜ್ಯದಲ್ಲಿ ಹಿಂದೂಗಳಿಗೆ ನ್ಯಾಯ ಸಿಗುವುದು ಅಸಾಧ್ಯವೇ ಆಗಿದೆ!