
ನವದೆಹಲಿ – ಭಾರತವು ಬಾಂಗ್ಲಾದೇಶದಲ್ಲಿನ ರೈಲು ಯೋಜನೆಗಾಗಿ ಮೀಸಲಿಟ್ಟ 5 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ತಡೆದಿದೆ. ಈ ಯೋಜನೆಯನ್ನು ಭಾರತದ ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸೇರಿಸಲು ಜಾರಿಗೆ ತರಲಾಗುತ್ತಿತ್ತು. ಈ ಯೋಜನೆಯಿಂದ ಬಾಂಗ್ಲಾದೇಶಕ್ಕೂ ಲಾಭವಾಗುತ್ತಿತ್ತು. ಬಾಂಗ್ಲಾದೇಶದ ಅಖೌರಾ-ಅಗರತಳಾ ಕ್ರಾಸ್ ಬಾರ್ಡರ್ ರೈಲ್ವೆ ಲಿಂಕ್, ಖುಲನಾ-ಮೊಂಗ್ಲಾ ಪೋರ್ಟ್ ರೈಲ್ವೆ ಲೈನ್ ಮತ್ತು ಢಾಕಾ-ಟೋಂಗಿ-ಜೋಯದೆಬಪುರ ರೈಲ್ವೆ ಯೋಜನೆಗಾಗಿ ಭಾರತವು ನಿಧಿಯನ್ನು ಪೂರೈಸುತ್ತಿತ್ತು. ಇದಲ್ಲದೇ, ಇನ್ನೂ 5 ರೈಲು ಯೋಜನೆಗಳಿಗಾಗಿ ಯೋಜನೆಗಳನ್ನು ತರುವುದರಲ್ಲಿತ್ತು. ಈಗ ಅದರ ಸಮೀಕ್ಷೆಯನ್ನು ನಿಲ್ಲಿಸಲಾಗಿದೆ.
ಬಾಂಗ್ಲಾದೇಶವು ಸತತವಾಗಿ ಭಾರತ ವಿರೋಧಿ ಧೋರಣೆ ಮುಂದುವರೆಸಿದ್ದರಿಂದ ಕೇಂದ್ರ ಸರಕಾರವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಊಹಿಸಲಾಗಿದೆ. ಭಾರತವು ಈಗ ಬಾಂಗ್ಲಾದೇಶದ ಬದಲು ನೇಪಾಳ ಮತ್ತು ಭೂತಾನ ಈ ದೇಶಗಳ ಮೂಲಕ ಈಶಾನ್ಯವನ್ನು ಸಂಪರ್ಕಿಸುವ ಪರ್ಯಾಯ ಆಯ್ಕೆಯನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಹಣವನ್ನು ನಿಲ್ಲಿಸುವ ಮೊದಲು, ಭಾರತವು ಇತ್ತೀಚೆಗೆ ಬಾಂಗ್ಲಾದೇಶಕ್ಕೆ ನೀಡಿದ ಭೂ ಮಾರ್ಗಗಳ ಮೂಲಕ ರಫ್ತು ಮಾಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಬಾಂಗ್ಲಾದೇಶವು ಈ ಹಿಂದೆ ಭಾರತೀಯ ಭೂಮಾರ್ಗದಿಂದ ಮೂಲಕ ನೇಪಾಳ ಮತ್ತು ಭೂತಾನ್ ದೇಶಗಳಿಗೆ ಸರಕುಗಳನ್ನು ಕಳುಹಿಸುತ್ತಿತ್ತು.
ಸಂಪಾದಕೀಯ ನಿಲುವುಈ ನಿರ್ಧಾರವನ್ನು ತೆಗೆದುಕೊಳ್ಳಲು ಭಾರತಕ್ಕೆ ಇಷ್ಟೊಂದು ಸಮಯ ಏಕೆ ಬೇಕಾಯಿತು ? ಹೀಗೆ ಬಾಂಗ್ಲಾದೇಶದೊಂದಿಗಿನ ಇನ್ನೂ ಎಷ್ಟು ಪ್ರಕಲ್ಪ ಮತ್ತು ಯೋಜನೆಗಳನ್ನು ಭಾರತವು ಕೈಬಿಡುವುದು ಅವಶ್ಯಕವಾಗಿದೆ ? |