ಕಾಶಿಯ ಮಾದರಿಯಲ್ಲಿ ವ್ಯವಸ್ಥೆ ಮಾಡುವಂತೆ ಬೇಡಿಕೆ

ಗಾಣಗಾಪುರ, ಏಪ್ರಿಲ್ ೨೨ (ವಾರ್ತಾ) – ರಾಜ್ಯದ ಅಫ್ಜಲಪುರ ತಾಲೂಕಿನ ಪ್ರಸಿದ್ಧ ಶ್ರೀ ದತ್ತಕ್ಷೇತ್ರ ಗಾಣಗಾಪುರದಲ್ಲಿ ಭಕ್ತರು ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಪ್ರದೇಶದ ಅಭಿವೃದ್ಧಿಯಾಗಬೇಕು ಎಂದು ಆಗ್ರಹಿಸಿ ಭಕ್ತರು ಮತ್ತು ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಏಪ್ರಿಲ್ ೧೭ ರಿಂದ ದೇವಾಲಯದ ಮುಂಭಾಗದ ಜಾಗದಲ್ಲಿ ಭಕ್ತರು, ದೇವಾಲಯದ ಅರ್ಚಕರು, ರಾಜಕೀಯ ಪಕ್ಷದ ಕಾರ್ಯಕರ್ತರು ಧರಣಿಗೆ ಕುಳಿತಿದ್ದಾರೆ. ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಾಟೀಕರ್ ಈ ಹೋರಾಟದ ನೇತೃತ್ವ ವಹಿಸಿದ್ದಾರೆ.
ಗಾಣಗಾಪುರ ಕ್ಷೇತ್ರವು ಶ್ರೀ ದತ್ತಾತ್ರೇಯರ ಅವತಾರವಾದ ಶ್ರೀ ನೃಸಿಂಹ ಸರಸ್ವತಿಯವರ ವಾಸ್ತವ್ಯ ಮತ್ತು ಅವತಾರ ಕಾರ್ಯದಿಂದ ಪವಿತ್ರವಾಗಿದೆ. ಇಲ್ಲಿ ಶ್ರೀ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕೆಗಳಿವೆ ಮತ್ತು ಕೆಟ್ಟ ಶಕ್ತಿಗಳ ತೊಂದರೆ ಇರುವ ವ್ಯಕ್ತಿಗಳು ಇಲ್ಲಿಗೆ ಬಂದು ವಾಸಮಾಡಿ ಮತ್ತು ಸಾಧನೆ ಮಾಡಿ ತೊಂದರೆಯಿಂದ ಮುಕ್ತರಾಗುತ್ತಿದ್ದಾರೆ ಎಂಬ ಅನುಭೂತಿಗಳನ್ನು ಇಂದಿಗೂ ಪಡೆಯುತ್ತಿದ್ದಾರೆ. ಈ ಸ್ಥಳಕ್ಕೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾವಿರಾರು ದತ್ತ ಭಕ್ತರು ಮತ್ತು ಭಕ್ತಾದಿಗಳು ಪ್ರತಿದಿನ ದೇವಾಲಯಕ್ಕೆ ದರ್ಶನಕ್ಕಾಗಿ ಬರುತ್ತಾರೆ; ಆದರೆ ಗಾಣಗಾಪುರದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇದರಿಂದ ವಿವಿಧ ರಾಜ್ಯಗಳಿಂದ ಬರುವ ಸಾವಿರಾರು ಭಕ್ತರು ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೆ ಇಲ್ಲಿ ವಾಸಿಸಬೇಕಾದ ಪರಿಸ್ಥಿತಿ ಇದೆ. ಜನತಾ ದಳದ ನಾಯಕ ಮತ್ತು ಸಂಸದ ಎಚ್.ಡಿ. ದೇವೇಗೌಡ ಅವರು ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದು ಈ ತೀರ್ಥಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
ಗಾಣಗಾಪುರದ ಹೋರಾಟಗಾರರು ಸರಕಾರಕ್ಕೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪ್ರಸ್ತುತ ದೇವಾಲಯಕ್ಕೆ ಹೋಗುವ ಮಾರ್ಗವು ಕಿರಿದಾಗಿದ್ದು, ಎರಡೂ ಬದಿಗಳಲ್ಲಿ ಅಂಗಡಿಗಳು, ಮನೆಗಳು ದಟ್ಟವಾಗಿವೆ. ಅದರಲ್ಲಿ ಮುಖ್ಯವಾಗಿ ‘ಶ್ರೀ ಕ್ಷೇತ್ರ ಗಾಣಗಾಪುರ ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಬೇಕು, ದತ್ತ ಮಂದಿರ ಮತ್ತು ಭೀಮಾ-ಅಮರಜಾ ಸಂಗಮ ಸ್ಥಳದ ಬಳಿಯ ದೇವಾಲಯವನ್ನು ಹೊಸದಾಗಿ ಮತ್ತು ಉತ್ತಮವಾಗಿ ನಿರ್ಮಿಸಬೇಕು. ಕಾಶಿಯ ಮಾದರಿಯಲ್ಲಿ ಇಲ್ಲಿ ಸುಸಜ್ಜಿತ ಕಾರಿಡಾರ್ ಇರಬೇಕು, ಭಕ್ತರಿಗಾಗಿ ಭಕ್ತನಿವಾಸ, ದೊಡ್ಡ ವಾಹನ ನಿಲುಗಡೆ ಸ್ಥಳ, ಸುಸಜ್ಜಿತ ಮಹಾಪ್ರಸಾದ ವಿತರಣಾ ಕೇಂದ್ರ, ಶೌಚಾಲಯಗಳು, ಸ್ನಾನಗೃಹಗಳು, ಸಾಮಾನುಗಳನ್ನು ಇಡಲು ಕೊಠಡಿಗಳು ಇರಬೇಕು. ಭೀಮಾ-ಅಮರಜಾ ಸಂಗಮ ಕ್ಷೇತ್ರದಲ್ಲಿ ನದಿಯ ಕೊಳೆಯನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸುಂದರವಾದ ದೇವಾಲಯವನ್ನು ನಿರ್ಮಿಸುವುದರ ಜೊತೆಗೆ ಉತ್ತಮ ಘಾಟ್ಗಳನ್ನು ನಿರ್ಮಿಸಬೇಕು.
ಗಾಣಗಾಪುರದಿಂದ ಮಹಾರಾಷ್ಟ್ರಕ್ಕೆ ಹೋಗಲು ಬಸ್ಗಳ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದ ಮಹಾರಾಷ್ಟ್ರದಿಂದ ಅಲ್ಲಿಗೆ ಹೋಗಲು ಮತ್ತು ಬರಲು ಭಕ್ತರಿಗೆ ಅನಾನುಕೂಲವಾಗುತ್ತದೆ. ಈ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂಗಳು ತಮ್ಮ ತೀರ್ಥಕ್ಷೇತ್ರಗಳ ಅಭಿವೃದ್ಧಿಗಾಗಿ ಧರಣಿ ಸತ್ಯಾಗ್ರಹ ಮಾಡಬೇಕಾಗಿರುವುದು ದುರದೃಷ್ಟಕರ! |