‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಗೋರಕ್ಷಪೀಠ ಪೀಠಾಧಿಪತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸನಾತನ ಸಂಸ್ಥೆಯ ಕಾರ್ಯ ಉತ್ತಮವಾಗಿ ಆಗುತ್ತಿದೆ. ಈ ಕಾರ್ಯಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಪ್ರಸ್ತುತ ಹಿಂದೂಗಳಲ್ಲಿ ಒಡಕು ಮೂಡಿಸಲು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹಿಂದೂಗಳನ್ನು ಹೆಚ್ಚೆಚ್ಚು ಸಂಘಟಿಸುವುದು ಅವಶ್ಯಕವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚೆಚ್ಚು ಹಿಂದೂಗಳನ್ನು ಸಂಘಟಿಸಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸನಾತನ ಸಂಸ್ಥೆಗೆ ಆಶೀರ್ವದಿಸಿದರು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 83 ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಗೋವಾದಲ್ಲಿ ಮೇ 17 ರಿಂದ 19, 2025 ರವರೆಗೆ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ. ಯೋಗಿ ಆದಿತ್ಯನಾಥ ಅವರಿಗೆ ಏಪ್ರಿಲ್ 21 ರಂದು ಆಹ್ವಾನ ನೀಡಲಾಯಿತು. ಆ ಸಮಯದಲ್ಲಿ ಅವರು ಮಾತನಾಡಿದರು.
🕉️ “Unite Hindus in greater numbers!” – Yogi Adityanath, CM of Uttar Pradesh
📜 Invitation extended to Hon. CM Yogi Adityanath & Peethadheeshwar of Goraksha Peeth for the ‘Sanatan Rashtra Shankhnad Mahotsav’
Delegation led by MLA Dr. R.K. Patel Ji (@DrRkPatelMLA) & H.H.… pic.twitter.com/FRKCrbSN2D
— Sanatan Prabhat (@SanatanPrabhat) April 21, 2025
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ‘ಸ್ವಾಗತ ಸಮಿತಿ’ಯ ಸದ್ಗುರು ಡಾ. ಚಾರುದತ್ತ ಪಿಂಗಳೆ, ಜೌನಪುರದ ಮಡಿಯಾಹು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ. ರವೀಂದ್ರಕುಮಾರ ಪಟೇಲ ಮತ್ತು ಶ್ರೀ. ವಿಶ್ವನಾಥ ಕುಲಕರ್ಣಿ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಕ್ನೋ) ದ ಮುಖ್ಯಮಂತ್ರಿ ಕಚೇರಿಯಲ್ಲಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾದರು. ಈ ಸಮಯದಲ್ಲಿ, ಸನಾತನ ಸಂಸ್ಥೆಯ 25 ವರ್ಷಗಳ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಮೊದಲು ಮಾಹಿತಿ ನೀಡಲಾಯಿತು. ಈ ಸಮಯದಲ್ಲಿ, ಮುಖ್ಯಮಂತ್ರಿಗಳು ‘ಮುಂದಿನ ಯೋಜನೆಗಳನ್ನು ಪರಿಶೀಲಿಸಿ ಕಾರ್ಯಕ್ರಮಕ್ಕೆ ಬರುವ ಬಗ್ಗೆ ತಿಳಿಸುತ್ತೇನೆ’ ಎಂದು ಹೇಳಿದರು.
मुख्यमंत्री श्री @myogiadityanath जी महाराज से आज लखनऊ में जनपद जौनपुर के मडियाहूं विधान सभा क्षेत्र से माननीय विधायक डॉ. आर.के. पटेल जी ने शिष्टाचार भेंट की।
इस अवसर पर डॉ. चारुदत्त पिंगड़े जी एवं श्री विश्वनाथ कुलकर्णी जी भी उपस्थित रहे।@DrRkPatelMLA pic.twitter.com/5LjstBwOR4
— Yogi Adityanath Office (@myogioffice) April 21, 2025
ಈ ಸಮಯದಲ್ಲಿ, ಸನಾತನ ಸಂಸ್ಥೆ ನಿರ್ಮಿಸಿದ್ದ ಶ್ರೀರಾಮನ ಸಾತ್ವಿಕ ಚಿತ್ರವಿರುವ ಪ್ರತಿಮೆ ಮತ್ತು ಹಿಂದೂ ಜನಜಾಗೃತಿ ಸಮಿತಿಯಿಂದ ರಚಿಸಲಾದ ‘ಹಿಂದೂ ರಾಷ್ಟ್ರ ಅವಶ್ಯಕ ಕ್ಯುಂ?’, ‘ಹಿಂದೂ ರಾಷ್ಟ್ರ ಸ್ಥಾಪನಾ ಕಿ ದಿಶಾ’, ‘ಹಿಂದೂ ರಾಷ್ಟ್ರ ಖಂಡನ ಏವಂ ಆಕ್ಷೇಪ’ ಮತ್ತು ‘ಹಲಾಲ್ ಜಿಹಾದ್’ ಪುಸ್ತಕಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.