Baba Ramdev On Sharbat Jihad : ಸರಬತ ಜಿಹಾದ’ನ ಉಲ್ಲೇಖವಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವೆವು !

ದೆಹಲಿ ಉಚ್ಛ ನ್ಯಾಯಾಲಯದ ಟೀಕೆಯ ನಂತರ ಹಿಂದೆ ಸರಿದ ಯೋಗಖುಷಿ ರಾಮದೇವಬಾಬಾ !

ಯೋಗ ಋಷಿ ರಾಮದೇವ್ ಬಾಬಾ

ನವದೆಹಲಿ – ಯೋಗ ಋಷಿ ರಾಮದೇವ ಬಾಬಾರವರು ಕೆಲವು ದಿನಗಳ ಹಿಂದೆ ‘ಸರಬತ ಜಿಹಾದ’ ಬಗ್ಗೆ ಹೇಳಿಕೆ ನೀಡಿದ್ದರು. ಅದರ ವೀಡಿಯೊ ಪ್ರಸಾರವಾಗಿತ್ತು. ಈ ಸಂಬಂಧ ದೆಹಲಿ ಉಚ್ಛ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು `ಈ ಹೇಳಿಕೆಯಿಂದ ನ್ಯಾಯಾಲಯದ ವಿವೇಕಕ್ಕೆ ಆಘಾತವಾಗಿದೆ, ಈ ಹೇಳಿಕೆಯು ಕ್ಷಮೆಗೆ ಯೋಗ್ಯವಲ್ಲ,’ ಈ ಶಬ್ಧಗಳೊಂದಿಗೆ ಟೀಕೆಸಿದೆ. ಆ ನಂತರ, ಯೋಗಋಷಿ ರಾಮದೇವಬಾಬಾ ರವರ ನ್ಯಾಯವಾದಿಗಳು, `ನಾವು ಇಂತಹ ಎಲ್ಲಾ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುತ್ತೇವೆ’ ಎಂದು ಹೇಳಿದರು. ಅನಂತರ, ನ್ಯಾಯಾಲಯವು ರಾಮದೇವಬಾಬಾ ಅವರು ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳುವ ಪ್ರತಿಜ್ಞಾ ಪತ್ರ ನೀಡಬೇಕು. ರಾಮದೇವಬಾಬಾರವರು ಇಂತಹ ವಿಷಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು ಮತ್ತು ಅದನ್ನು ಬಹಿರಂಗಪಡಿಸಬಾರದು” ಎಂದು ಹೇಳಿದೆ.

1. ಏಪ್ರಿಲ್ 3 ರಂದು ರಾಮದೇವಬಾಬಾರವರು ಪತಂಜಲಿ ಸರಬತನ ಲೋಕಾರ್ಪಣೆ ಮಾಡಿದರು. ಆ ಸಮಯದಲ್ಲಿ, ಅವರು ‘ಎಕ್ಸ್’ ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿ, `ಒಂದು ಸಂಸ್ಥೆ ಸರಬತ ತಯಾರಿಸುತ್ತದೆ. ಇದರಿಂದ ಬರುವ ಹಣದಿಂದ ಅವರು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸುತ್ತದೆ. ‘ಲವ್ ಜಿಹಾದ್’ ಮತ್ತು ‘ವೋಟ್ ಜಿಹಾದ್’ನಂತೆಯೇ ‘ಸರಬತ ಜಿಹಾದ್’ ಕೂಡ ನಡೆಯುತ್ತಿದೆ’ ಎಂದು ಹೇಳಿದ್ದರು.

2. ಇದಾದ ನಂತರ, ‘ರುಹ ಅಫ್ಜಾ’ ಎಂಬ ಸರಬತ ತಯಾರಿಸುವ ‘ಹಮದರ್ದ’ ಸಂಸ್ಥೆಯು ಇದರ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.