ಉತ್ಸಾಹಿ, ನಗುಮುಖದ ಮತ್ತು ತಳಮಳದಿಂದ ಸೇವೆ ಮಾಡುವ ಚಿ. ವಿಕ್ರಮ ಡೊಂಗರೆ ಹಾಗೂ ಶಾಂತ, ಪ್ರೇಮಮಯಿ, ಸಾಧಕರೊಂದಿಗೆ ಆತ್ಮೀಯತೆ ಬೆಳೆಸುವ ಮತ್ತು ಭಾವಪೂರ್ಣ ಸೇವೆ ಮಾಡುವ ಚಿ.ಸೌ.ಕಾಂ. ಯೋಗಿತಾ ಪಾಲನ !

ಸನಾತನದ ರಾಮನಾಥಿ, ಗೋವಾ ಇಲ್ಲಿನ ಆಶ್ರಮದಲ್ಲಿದ್ದು ಸಾಧನೆ ಮಾಡುತ್ತಿರುವ ಚಿ. ವಿಕ್ರಮ ಡೊಂಗರೆ ಮತ್ತು ಚಿ.ಸೌ.ಕಾಂ. ಯೋಗಿತಾ ಪಾಲನ ಇವರ ವಿವಾಹವು 22.04.2025 (ಚೈತ್ರ ಕೃಷ್ಣ ನವಮಿ) ನೆರವೇರಿತು. ಈ ನಿಮಿತ್ತ ಅವರ ಬಂಧುಗಳು ಮತ್ತು ಸಾಧಕರಿಗೆ ಕಂಡುಬಂದ ಅವರ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ.

ಚಿ.ಸೌ.ಕಾಂ. ಯೋಗಿತಾ ಪಾಲನ ಅವರ ಗುಣವೈಶಿಷ್ಟ್ಯಗಳು

ಚಿ.ಸೌ.ಕಾಂ. ಯೋಗಿತಾ ಪಾಲನ

ಚಿ.ಸೌ.ಕಾಂ. ಯೋಗಿತಾ ಪಾಲನ ಇವರಿಗೆ ಗುರುಗಳ ಬಗ್ಗೆ ಭಾವ ಇರುವುದರಿಂದ ಸಾಧಕರಿಂದ ಭಾವಜಾಗೃತಿಯ ಉತ್ತಮ ಪ್ರಯತ್ನಗಳನ್ನು ಮಾಡಿಸಿಕೊಳ್ಳುವುದು

ಯೋಗಿತಾ ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಬಗ್ಗೆ ಬಹಳಷ್ಟು ಭಾವಯಿದೆ. ಅವರು ಆಶ್ರಮ ಮಟ್ಟದ ಭಾವಸತ್ಸಂಗ ಮತ್ತು ಸಾಧಕರ ವೈಯಕ್ತಿಕ ಸಾಧನೆಯ ವರದಿಗಳನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿ ‘ವಿವಿಧ ಕೃತಿಗಳನ್ನು ಮಾಡುವಾಗ ಭಾವವನ್ನು ಹೇಗೆ ಇಟ್ಟುಕೊಳ್ಳಬೇಕು ?’, ಎಂಬುದರ ಕುರಿತು ಅವರಿಗೆ ಹೊಸ ಅಂಶಗಳು ಹೊಳೆಯುತ್ತವೆ. ಆ ಅಂಶಗಳನ್ನು ಅವರು ಸತ್ಸಂಗದಲ್ಲಿ ಉತ್ತಮ ರೀತಿಯಲ್ಲಿ ಮಂಡಿಸುತ್ತಾರೆ. ಭಾವಸತ್ಸಂಗವನ್ನು ತೆಗೆದುಕೊಳ್ಳುತ್ತಿರುವಾಗ ಅವಳಲ್ಲಿ ಶರಣಾಗತಿ ಭಾವ ಕಾಣಿಸುತ್ತದೆ. ಆಗ ‘ಅವರು ದೇವರನ್ನು ಮತ್ತು ಗುರುದೇವರನ್ನು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಾರೆ’, ಎಂದು ಅನಿಸುತ್ತದೆ.’

1. ಶ್ರೀಮತಿ ಭಾರತಿ ಪಾಲನ (ಚಿ.ಸೌ.ಕಾಂ. ಯೋಗಿತಾ ಅವರ ತಾಯಿ, ಆಧ್ಯಾತ್ಮಿಕ ಮಟ್ಟ ಶೇ. 62, ವಯಸ್ಸು 68 ವರ್ಷ), ಫೋಂಡಾ, ಗೋವಾ.

1 ಅ. ಶಾಂತ ಸ್ವಭಾವ : ‘ಯೋಗಿತಾ ಚಿಕ್ಕಂದಿನಿಂದಲೂ ಶಾಂತ ಸ್ವಭಾವದವಳಾಗಿದ್ದು, ಅವಳು ಎಂದಿಗೂ ಯಾರಿಗೂ ತೊಂದರೆ ಕೊಟ್ಟಿಲ್ಲ.

1 ಆ. ಸ್ವಾವಲಂಬಿ : ಅವಳು ಸ್ವಾವಲಂಬಿಯಾಗಿದ್ದು, ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ಅವಳು ಚಿಕ್ಕಂದಿನಿಂದಲೂ ತನ್ನ ಅಭ್ಯಾಸವನ್ನು ತಾನೇ ಪೂರ್ಣಗೊಳಿಸುತ್ತಿದ್ದಳು.

೧ ಇ. ತೃಪ್ತ ಮನೋಭಾವ : ಅವಳು ಎಂದಿಗೂ ಯಾವುದೇ ವಸ್ತುವಿಗಾಗಿ ಹಠ ಅಥವಾ ಬೇಡಿಲ್ಲ. ಈಗ ಅವಳು ಸಾಧನೆಯಿಂದಾಗಿ ಹೆಚ್ಚು ಸ್ಥಿರ ಮತ್ತು ತೃಪ್ತಳಾಗಿದ್ದಾಳೆ.

2. ಶ್ರೀ. ವಿನೋದ ಪಾಲನ (ಚಿ.ಸೌ.ಕಾಂ. ಯೋಗಿತಾ ಅವರ ಸಹೋದರ), ಪುಣೆ

2 ಅ. ತ್ಯಾಗದ ಮನೋಭಾವ : ‘ಯೋಗಿತಾಳಲ್ಲಿ ತ್ಯಾಗ ಮಾಡುವ ಮನೋಭಾವವಿದೆ. ಅವಳು ತನ್ನಲ್ಲಿರುವ ವಸ್ತುಗಳನ್ನು ಸುಲಭವಾಗಿ ಇತರರಿಗೆ ಕೊಡುತ್ತಾಳೆ. ತನಗೆ ಇಷ್ಟವಾದ ಪದಾರ್ಥಗಳನ್ನು ತನಗಾಗಿ ಸ್ವಲ್ಪ ಇಟ್ಟುಕೊಂಡು ಇತರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಡುತ್ತಾಳೆ.

2 ಆ. ಚಿಕ್ಕ ಮಕ್ಕಳೊಂದಿಗೆ ಸ್ನೇಹ ಬೆಳೆಯುವುದು : ಚಿಕ್ಕ ಮಕ್ಕಳಿಗೆ ಯೋಗಿತಾ ಬೇಕೆನಿಸುತ್ತಾಳೆ. ಅವಳು ಸುಲಭವಾಗಿ ಚಿಕ್ಕ ಮಕ್ಕಳಿಗೆ ಅಚ್ಚುಮೆಚ್ಚಿನವಳಾಗುತ್ತಾಳೆ. ಅವಳಲ್ಲಿ ಮುಗ್ಧತೆ ಮತ್ತು ಮನಸ್ಸಿನ ನಿರ್ಮಲತೆ ಇರುವುದರಿಂದ ಅವಳು ಚಿಕ್ಕ ಮಕ್ಕಳಿಗೆ ಅವರ ಗೆಳತಿಯಂತೆಯೇ ಕಾಣುತ್ತಾಳೆ.

2 ಇ. ಸಾಧಕರೊಂದಿಗೆ ಆತ್ಮೀಯತೆ ಹೊಂದಿರುವುದು : ಯೋಗಿತಾಳಿಗೆ ಆಶ್ರಮದ ಎಲ್ಲ ಸಾಧಕರು ಹತ್ತಿರದವರೆಂದು ಅನಿಸುತ್ತದೆ, ಹಾಗೂ ಸಾಧಕರಿಗೂ ಯೋಗಿತಾ ಹತ್ತಿರದವಳೆಂದು ಅನಿಸುತ್ತಾಳೆ. ‘ಎಲ್ಲ ಸಾಧಕರೂ ನಮ್ಮ ಕುಟುಂಬದವರೇ ಆಗಿದ್ದಾರೆ ’, ಎಂದು ಅವಳಿಗೆ ಅನಿಸುತ್ತದೆ.

3. ಸೇವೆಗೆ ಸಂಬಂಧಿಸಿದ ಸಾಧಕರು, ಸನಾತನ ಆಶ್ರಮ, ರಾಮನಾಥಿ, ಗೋವಾ.

3 ಅ. ಅನಾಸಕ್ತ : ‘ಯೋಗಿತಾಳಿಗೆ ಲೌಕಿಕ ವಿಷಯಗಳ ಬಗ್ಗೆ ಆಸಕ್ತಿ ಇಲ್ಲ. ಅವಳಿಗೆ ‘ಬಟ್ಟೆ, ಆಭರಣ ಅಥವಾ ವಿಭಿನ್ನ ರೀತಿಯ ತಿಂಡಿ-ತಿನಿಸು’ಗಳಲ್ಲಿ ವಿಶೇಷ ಆಸಕ್ತಿ ಇರುವುದಿಲ್ಲ. ಏನು ಇದೆಯೋ ಅದನ್ನು ಅವಳು ಸಂತೋಷದಿಂದ ಸ್ವೀಕರಿಸುತ್ತಾಳೆ.

3 ಆ. ನಗುಮುಖ : ಯೋಗಿತಾ ಯಾವಾಗಲೂ ನಗುಮುಖದಿಂದ ಇರುತ್ತಾಳೆ. ಆಶ್ರಮ ಮಟ್ಟದ ಕೆಲವು ಸಮಷ್ಟಿ ಸೇವೆಗಳು ಅವಳಿಗಿವೆ. ಅವುಗಳನ್ನು ಮಾಡುವಾಗ ಅವಳಿಗೆ ಕೆಲವೊಮ್ಮೆ ದೈಹಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಿದ್ದರೂ, ಅವಳು ನಗುಮುಖದಿಂದ ಇರುತ್ತಾಳೆ. ಮಾತಿನ ಚತುರತೆ ಮತ್ತು ಹಾಸ್ಯ ಪ್ರವೃತ್ತಿಯಿಂದ ಅವಳು ಇತರರನ್ನು ನಗಿಸುತ್ತಾಳೆ.

3 ಇ. ಸಹನಶೀಲತೆ : ಯೋಗಿತಾ ಸಹನಶೀಲಳಾಗಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರುತ್ತಾಳೆ. ತನಗೆ ಆಗುತ್ತಿರುವ ತೊಂದರೆಗಳು ಅಥವಾ ಅಡಚಣೆಗಳನ್ನು ಇತರರಿಗೆ ಹೇಳದೆ ಅವುಗಳನ್ನು ಎದುರಿಸಲು ಪ್ರಯತ್ನಿಸುತ್ತಾಳೆ.

3 ಈ. ಪ್ರೇಮಭಾವ : ಪ್ರೇಮಭಾವ ಇರುವುದರಿಂದ ಯೋಗಿತಾಳಿಗೆ ಇತರರಿಗೆ ಸಹಾಯ ಮಾಡುವ ತಳಮಳ ಬಹಳಷ್ಟಿದೆ. ಕೆಲವು ಬಾರಿ ಅವಳ ದೈಹಿಕ ಸ್ಥಿತಿ ಚೆನ್ನಾಗಿರುವುದಿಲ್ಲ ಅಥವಾ ಆಧ್ಯಾತ್ಮಿಕ ಮಟ್ಟದಲ್ಲಿ ಕೆಲವು ತೊಂದರೆಗಳಾಗುತ್ತಿರುತ್ತದೆ. ಆದರೂ ಅವಳು ಇತರರಿಗೆ ಸಹಾಯ ಮಾಡಲು ಸಿದ್ಧಳಾಗಿರುತ್ತಾಳೆ. ಸಾಧಕರು ಸಹ ಅವಳಿಗೆ ತಮ್ಮವಳೆ ಎಂದು ಸಹಾಯ ಕೇಳುತ್ತಾರೆ.

3 ಉ. ಪರಿಪೂರ್ಣ ಸೇವೆ ಮಾಡುವುದು : ಯೋಗಿತಾ ಯಾವಾಗಲೂ ಪರಿಪೂರ್ಣ ಸೇವೆ ಮಾಡಲು ಒಲವು ತೋರುತ್ತಾಳೆ. ಭಕ್ತಿಸತ್ಸಂಗದ ಸಂಹಿತೆಯಲ್ಲಿ ಕೆಲವು ಪದಗಳು ಅಥವಾ ವ್ಯಾಕರಣದ ತಪ್ಪುಗಳಿದ್ದರೆ ಅವು ಅವಳಿಗೆ ನಿಖರವಾಗಿ ಗಮನಕ್ಕೆ ಬರುತ್ತವೆ.

3 ಊ. ಗುರುಗಳ ಬಗ್ಗೆ ಭಾವಯಿರುವುದರಿಂದ ಸಾಧಕರಿಂದ ಭಾವಜಾಗೃತಿಯ ಉತ್ತಮ ಪ್ರಯತ್ನಗಳನ್ನು ಮಾಡಿಸಿ ಕೊಳ್ಳುವುದು : ಯೋಗಿತಾಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರ ಬಗ್ಗೆ ಬಹಳಷ್ಟು ಭಾವವಿದೆ. ಅವಳು ಆಶ್ರಮ ಮಟ್ಟದ ಭಾವಸತ್ಸಂಗ ಮತ್ತು ಸಾಧಕರ ವ್ಯಷ್ಟಿ ಸಾಧನೆಯ ವರದಿಗಳನ್ನು ತೆಗೆದುಕೊಳ್ಳುತ್ತಾಳೆ. ಅದರಲ್ಲಿ ‘ವಿವಿಧ ಕೃತಿಗಳನ್ನು ಮಾಡುವಾಗ ಭಾವವನ್ನು ಹೇಗೆ ಇಟ್ಟುಕೊಳ್ಳಬೇಕು ?’, ಎಂಬುದರ ಕುರಿತು ಅವಳಿಗೆ ಹೊಸ ಅಂಶಗಳು ಹೊಳೆಯುತ್ತವೆ. ಆ ಅಂಶಗಳನ್ನು ಅವಳು ಸತ್ಸಂಗದಲ್ಲಿ ಉತ್ತಮ ರೀತಿಯಲ್ಲಿ ಮಂಡಿಸುತ್ತಾಳೆ ಮತ್ತು ಸಾಧಕರಿಂದ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಾಳೆ. ಅವಳು ಭಾವಸತ್ಸಂಗವನ್ನು ತೆಗೆದುಕೊಳ್ಳುತ್ತಿರುವಾಗ ಅವಳಲ್ಲಿ ಶರಣಾಗತಿ ಭಾವ ಕಾಣಿಸುತ್ತದೆ. ಆಗ ‘ಅವಳು ದೇವರನ್ನು ಮತ್ತು ಗುರುದೇವರನ್ನು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದಾಳೆ’, ಎಂದು ಅನಿಸುತ್ತದೆ. ಅವಳ ಪ್ರಾರ್ಥನೆಯನ್ನು ಕೇಳಿ ಭಾವಜಾಗೃತಿ ಉಂಟಾಗುತ್ತದೆ.’

ಚಿ. ವಿಕ್ರಮ ಡೊಂಗರೆ ಮತ್ತು ಚಿ.ಸೌ.ಕಾಂ. ಯೋಗಿತಾ ಪಾಲನ ಅವರಿಗೆ ಶುಭವಿವಾಹದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಹಾರ್ದಿಕ ಶುಭಾಶಯಗಳು !

ಚಿ. ವಿಕ್ರಮ ಡೊಂಗರೆ

ಚಿ. ವಿಕ್ರಮ ಡೊಂಗರೆ ಅವರ ಗುಣವೈಶಿಷ್ಟ್ಯಗಳು

ಶ್ರೀ. ವಿಕ್ರಮ ಡೊಂಗರೆ ಇವರು ಇಂಜಿನಿಯರ್ (ಎಲೆಕ್ಟ್ರಾನಿಕ್ಸ್ ಇಂಜಿನಿಯರ್) ಆಗಿದ್ದಾರೆ. ಅವರು ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ‘ಸನಾತನ ಪ್ರಭಾತ ವೆಬ್‌ಸೈಟ್‌’ದ ಸಮನ್ವಯದ ಸೇವೆಯನ್ನು ಮಾಡುತ್ತಾರೆ.

1. ಸೌ. ನೇಹಾ ಪ್ರಭು (ಶ್ರೀ. ವಿಕ್ರಮ ಅವರ ಚಿಕ್ಕಮ್ಮನ ಮಗಳು), ಸನಾತನ ಆಶ್ರಮ, ರಾಮನಾಥಿ, ಗೋವಾ.

1 ಅ. ಆಧಾರ ಅನಿಸುವುದು : ‘ವಿಕ್ರಮ ದಾದಾ ನನಗೆ ಯಾವಾಗಲೂ ಸಹಾಯ ಮಾಡುತ್ತಾರೆ. ನನ್ನ ತಂದೆ (ಕೈ. ಕಿಶೋರ ಘಾಟೆ) ಅನಾರೋಗ್ಯದಿಂದ ಬಳಲುತ್ತಿದ್ದರು. ತಂದೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಅವರ ನಿಧನರಾದರು. ಆಗ ವಿಕ್ರಮ ದಾದಾ ನನಗೆ ಬಹಳ ಸಹಾಯ ಮಾಡಿದರು. ಆಗ ನನಗೆ ದಾದಾರ ಆಧಾರ ಅನಿಸಿತು.

1 ಆ. ಅಭ್ಯಾಸಪೂರ್ಣ ಸೇವೆ ಮಾಡುವುದು : ದಾದಾ ಸಮಾಜದ ಪ್ರತಿಷ್ಠಿತ ಹಿಂದುತ್ವನಿಷ್ಠರ ಸಂದರ್ಶನಗಳನ್ನು (ಪಾಡ್ ಕಾಸ್ಟ್) ತೆಗೆದುಕೊಳ್ಳುವ ಸೇವೆಯನ್ನು ಮಾಡುತ್ತಾರೆ. ಆ ಸಮಯದಲ್ಲಿ ಅವರು ಅಭ್ಯಾಸಪೂರ್ವಕವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ‘ಅವರು ಬಹಳ ಬುದ್ಧಿವಂತರಾಗಿದ್ದು, ತಮ್ಮ ಸೇವೆಯ ಜವಾಬ್ದಾರಿಯನ್ನು ಅವರು ಚೆನ್ನಾಗಿ ನಿರ್ವಹಿಸುತ್ತಾರೆ’, ಎಂದು ನನಗೆ ಅನಿಸುತ್ತದೆ.’

2. ಕು. ಮಾನಸಿ ಪ್ರಭು (ಶ್ರೀ. ವಿಕ್ರಮ ಅವರ ಸೋದರ ಸೊಸೆ), ಸನಾತನ ಆಶ್ರಮ, ರಾಮನಾಥಿ, ಗೋವಾ.

2 ಅ. ಸಾಧನೆಯಲ್ಲಿ ಸಹಾಯ ಮಾಡುವುದು : ‘ವಿಕ್ರಮ ಮಾಮ ನನಗೆ ಸಾಧನೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತಾರೆ. ಸಾಧನೆಯಲ್ಲಿ ಬರುವ ಅಡಚಣೆಗಳ ಬಗ್ಗೆ ನಾನು ಮಾಮನೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ. ಆಗ ಅವರು ನನಗೆ ಸುಲಭವಾಗಿ ಸರಿಯಾದ ಪರಿಹಾರವನ್ನು ಹೇಳುತ್ತಾರೆ.

2 ಆ. ಉತ್ಸಾಹ ಮತ್ತು ಆನಂದದಿಂದ ಸೇವೆ ಮಾಡುವುದು : ಮಾಮಾ ಬಳಿ ಅನೇಕ ಸೇವೆಗಳ ಜವಾಬ್ದಾರಿ ಇದೆ; ಆದರೆ ಅವರ ಮುಖದಲ್ಲಿ ಎಂದಿಗೂ ಒತ್ತಡ ಕಾಣಿಸುವುದಿಲ್ಲ. ಅವರು ಯಾವಾಗಲೂ ಉತ್ಸಾಹಭರಿತ ಮತ್ತು ಆನಂದದಿಂದ ಇರುತ್ತಾರೆ. ‘ಸೇವೆ ಇನ್ನಷ್ಟು ಹೇಗೆ ಉತ್ತಮಗೊಳಿಸಬಹುದು ?, ಎಂದು ಅವರು ನಿರಂತರವಾಗಿ ವಿಚಾರ ಮಾಡುತ್ತಿರುತ್ತಾರೆ.’

3. ಶ್ರೀ. ಚೇತನ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ.

3 ಅ. ‘ವಿಕ್ರಮ ದಾದಾ ಯಾವಾಗಲೂ ಉತ್ಸಾಹಿಯಾಗಿರುತ್ತಾರೆ ಮತ್ತು ಅವರು ಇತರರನ್ನು ಸಹ ಉತ್ಸಾಹಿಗಳನ್ನಾಗಿ ಮಾಡುತ್ತಾರೆ.

3 ಆ. ಸಾಧಕರ ತಪ್ಪುಗಳನ್ನು ಪ್ರೀತಿಯಿಂದ ಹೇಳಿ ಅವರಿಗೆ ಪ್ರಯತ್ನ ಮಾಡಲು ಮಾರ್ಗದರ್ಶನ ಮಾಡುವುದು : ‘ಸನಾತನ ಪ್ರಭಾತ ವೆಬ್‌ಸೈಟ್‌’ದ ಕುರಿತು ಸೇವೆ ಮಾಡುವ ಸಾಧಕರ ಪ್ರತಿ ವಾರ ಸತ್ಸಂಗ ಇರುತ್ತದೆ. ಸತ್ಸಂಗದಲ್ಲಿ ಸಾಧಕರು ತಮ್ಮ ತಪ್ಪನ್ನು ಹೇಳಿದ ನಂತರ, ‘ಪ್ರಯತ್ನಗಳನ್ನು ಹೇಗೆ ಮಾಡಬೇಕು ?’, ಎಂಬುದರ ಕುರಿತು ವಿಕ್ರಮ ದಾದಾ ಹೇಳುತ್ತಾರೆ. ಆಗ ಸಂಬಂಧಪಟ್ಟ ಸಾಧಕ ಉತ್ಸಾಹದಿಂದ, ‘‘ಈಗ ನಾನು ಪ್ರಯತ್ನಿಸುತ್ತೇನೆ ಮತ್ತು ಇಂತಹ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳುತ್ತೇನೆ,’’ ಎಂದು ಹೇಳುತ್ತಾನೆ. ವಿಕ್ರಮ ದಾದಾ ಸಾಧಕರ ತಪ್ಪನ್ನು ಪ್ರೀತಿಯಿಂದ ಹೇಳುತ್ತಾರೆ. ಆದ್ದರಿಂದ ಸಾಧಕರಿಗೆ ಬೇಸರವಾಗುವುದಿಲ್ಲ ಮತ್ತು ಅವರು ಕಲಿಯುವ ಮನೋಭಾವದಲ್ಲಿರುತ್ತಾರೆ.

3 ಇ. ಸಾಧಕರ ಸೇವೆಯಲ್ಲಿನ ತೊಂದರೆಗಳನ್ನು ನಿವಾರಿಸುವುದು : ಒಮ್ಮೆ ನಾನು ಅವರಿಗೆ ಕರ್ನಾಟಕದ ಕೆಲವು ಸಾಧಕರ ತೊಂದರೆಗಳನ್ನು ತಿಳಿಸಿದೆ. ಆಗ ಅವರು, ‘‘ಚಿಂತಿಸಬೇಡಿ. ನಾನು ಆ ಸಾಧಕರೊಂದಿಗೆ ಮಾತನಾಡುತ್ತೇನೆ. ಆ ಸಾಧಕರು ಸೇವೆಗಾಗಿ ಸಮಯ ನೀಡುತ್ತಾರೆ, ಹಾಗಾಗಿ ನಾನು ಸ್ವಲ್ಪ ಸಮಯ ತೆಗೆದುಕೊಂಡು ಅವರ ತೊಂದರೆಗಳನ್ನು ಅರ್ಥಮಾಡಿಕೊಳ್ಳುತ್ತೇನೆ,’’ ಎಂದರು. ದಾದಾ ಸಾಧಕರಿಗೆ ದೂರವಾಣಿ ಕರೆ ಮಾಡಿ ಅವರ ತೊಂದರೆಗಳನ್ನು ತಿಳಿದುಕೊಂಡು ಅವರಿಗೆ ಮಾರ್ಗದರ್ಶನ ನೀಡಿದರು. ಆದ್ದರಿಂದ ಆ ಸಾಧಕರು ಮೊದಲಿನಗಿಂತಲೂ ಹೆಚ್ಚು ಉತ್ಸಾಹದಿಂದ ಸೇವೆ ಮಾಡಲು ಪ್ರಾರಂಭಿಸಿದರು.’

4. ‘ಸನಾತನ ಪ್ರಭಾತ’ದ ಜಾಲತಾಣದ ಸೇವೆಗೆ ಸಂಬಂಧಿಸಿದ ಸಾಧಕರು

4 ಅ. ಸಹಜತೆ : ‘ವಿಕ್ರಮ ದಾದಾ ಅವರಲ್ಲಿ ಸಹಜತೆ ಇರುವುದರಿಂದ ಸಾಧಕರು ಅವರಿಗೆ ಸೇವೆಯ ಕುರಿತಾದ ತೊಂದರೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ದಾದಾ ಸಾಧಕರ ತೊಂದರೆಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ.

4 ಆ. ನಿಯೋಜನೆಯೊಂದಿಗೆ ಸೇವೆ ಮಾಡುವುದು : ಸನಾತನ ಪ್ರಭಾತ ಜಾಲತಾಣದ ಸಮನ್ವಯದ ಸೇವೆಯನ್ನು ಮಾಡುವಾಗ ದಾದಾ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವರದಿಗಳು ಮತ್ತು ಲೇಖನಗಳು ಓದುಗರಿಗೆ ಬೇಗ ತಲುಪುವಂತೆ ಉತ್ತಮವಾಗಿ ನಿಯೋಜನೆ ಮಾಡುತ್ತಾರೆ. ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಕಾರ್ಯಕ್ರಮಗಳ ಸಮಯದಲ್ಲಿ ದಾದಾ ಸಾಧಕರ ಸತ್ಸಂಗವನ್ನು ತೆಗೆದುಕೊಂಡು ಸೇವೆಗಳ ನಿಯೋಜನೆಯನ್ನು ಮಾಡಿಕೊಡುತ್ತಾರೆ.

4 ಇ. ಸಾಧಕರಿಗೆ ಸೇವೆಯಲ್ಲಿ ಸಹಾಯ ಮಾಡುವುದು : ದಾದಾ ಸಹಸಾಧಕರಿಗೆ ಸೇವೆಯಲ್ಲಿ ಉತ್ತಮವಾಗಿ ಸಹಾಯ ಮಾಡುತ್ತಾರೆ. 2024 ರಲ್ಲಿ ಸನಾತನ ಪ್ರಭಾತ ವೆಬ್‌ಸೈಟ್‌ ಸಂಬಂಧಿಸಿದ ಸೇವೆ ಮಾಡುವ ಸಾಧಕರಿಗಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. ದಾದಾ ಅವರ ಮಾರ್ಗದರ್ಶನದೊಂದಿಗೆ, ಶಿಬಿರವನ್ನು ಯೋಜಿಸುವುದು, ವಿಷಯಗಳನ್ನು ಆಯ್ಕೆ ಮಾಡುವುದು ಇತ್ಯಾದಿ ಸೇರಿದಂತೆ ಎಲ್ಲಾ ಸೇವೆಗಳನ್ನು ಸಾಧಕರು ಚೆನ್ನಾಗಿ ಮಾಡಿದರು.’

5. ಶ್ರೀ. ಮನೋಜ ಕಾತ್ರೆ, ಪುಣೆ

5 ಅ. ನಗುಮುಖದ ಸ್ವಭಾವ : ‘ವಿಕ್ರಮ ದಾದಾ ಯಾವಾಗಲೂ ಆನಂದದಲ್ಲಿರುತ್ತಾರೆ ಮತ್ತು ಇತರರೊಂದಿಗೆ ನಗುತ್ತಾ ಮಾತನಾಡುತ್ತಾರೆ. ಅವರೊಂದಿಗೆ ಮುಕ್ತವಾಗಿ ಮಾತನಾಡಬಹುದು. ಅವರೊಂದಿಗೆ ಮಾತನಾಡಿದ ನಂತರ ಸಾಧಕರಲ್ಲಿ ಉತ್ಸಾಹ ಹೆಚ್ಚುತ್ತದೆ.

5 ಆ. ಸಕಾರಾತ್ಮಕ ಮನೋಭಾವ : ಜುಲೈ 2024 ರಲ್ಲಿ ರಾಮನಾಥಿ ಆಶ್ರಮದಲ್ಲಿ ಒಂದು ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರಕ್ಕೆ ಕೆಲವೇ ದಿನಗಳು ಬಾಕಿ ಇದ್ದುದರಿಂದ ಶಿಬಿರದ ಪೂರ್ವಸಿದ್ಧತೆಗಾಗಿ ಕಡಿಮೆ ಸಮಯವಿತ್ತು. ಆ ಸಮಯದಲ್ಲಿ ವಿಕ್ರಮ ದಾದಾ ಯಾವಾಗಲೂ ‘ಶಿಬಿರದ ಎಲ್ಲ ಸೇವೆಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ’, ಎಂದು ಹೇಳುತ್ತಿದ್ದರು ಮತ್ತು ಸೇವೆಯ ಯೋಜನೆಯನ್ನು ಮಾಡಿಕೊಡುತ್ತಿದ್ದರು. ಆ ಸಮಯದಲ್ಲಿ ‘ಸದಾ ಸಕಾರಾತ್ಮಕವಾಗಿ ಹೇಗೆ ಇರಬೇಕು ?’, ಎಂಬುದನ್ನು ನಾನು ಕಲಿತೆ.

5 ಇ. ಪ್ರೇಮಭಾವ : ವಿಕ್ರಮ ದಾದಾ ಸೇವೆಯಲ್ಲಿರುವ ಎಲ್ಲ ಸಾಧಕರನ್ನು ಒಗ್ಗೂಡಿಸಿದ್ದಾರೆ. ಈ ಕಾರಣದಿಂದ ಅನೇಕ ಸಾಧಕರು ಮನೆಯಲ್ಲಿಯೇ ಇದ್ದುಕೊಂಡು ತಮ್ಮ ಕೌಟುಂಬಿಕ ಜವಾಬ್ದಾರಿ, ಉದ್ಯೋಗ, ವ್ಯವಹಾರ ಇತ್ಯಾದಿಗಳನ್ನು ನೋಡಿಕೊಳ್ಳುತ್ತಾ ಈ ಸೇವೆಯನ್ನು ನಿಯಮಿತವಾಗಿ ಮಾಡುತ್ತಿದ್ದಾರೆ. ಯಾವುದೇ ಸಾಧಕ ಬಹಳ ದಿನಗಳಿಂದ ಸೇವೆ ಮಾಡುತ್ತಿಲ್ಲದಿದ್ದರೆ, ದಾದಾ ಸ್ವತಃ ಅವರಿಗೆ ಸಂಪರ್ಕಿಸಿ ಆತ್ಮೀಯತೆಯಿಂದ ವಿಚಾರಿಸುತ್ತಾರೆ. ದಾದಾರ ಸೇವೆಯ ತಳಮಳ ಮತ್ತು ಮುಂದಾಳತ್ವದಿಂದ ಈ ಶಿಬಿರವನ್ನು ಆಯೋಜಿಸಲು ಸಾಧ್ಯವಾಯಿತು. ಅನೇಕ ದಿನಗಳಿಂದ ಒಟ್ಟಿಗೆ ಸೇವೆ ಮಾಡುತ್ತಿದ್ದರೂ ಪರಸ್ಪರ ಭೇಟಿಯಾಗದ ಸಾಧಕರು ಶಿಬಿರದ ಕಾರಣದಿಂದ ರಾಮನಾಥಿ ಆಶ್ರಮದಲ್ಲಿ ಭೇಟಿಯಾದರು ಮತ್ತು ಅವರಲ್ಲಿ ಪರಸ್ಪರ ಆತ್ಮೀಯತೆ ಹೆಚ್ಚಾಯಿತು.

5 ಈ. ಭಾವಪೂರ್ಣವಾಗಿ ಮಾತನಾಡುವುದು: ವಿಕ್ರಮ ದಾದಾ ಶಾಂತವಾಗಿ ಮತ್ತು ಸಂಯಮದಿಂದ ಮಾತನಾಡುತ್ತಾರೆ. ‘ದಾದಾ ಸತ್ಸಂಗ ಮತ್ತು ಶಿಬಿರಗಳಲ್ಲಿ ವಿಷಯಗಳನ್ನು ಮಂಡಿಸುವಾಗ ಅವರು ಮಾತನಾಡುತ್ತಿದ್ದರೆ ಕೇಳುತ್ತಲೇ ಇರಬೇಕು’, ಎನಿಸುತ್ತದೆ. ಅವರು ಭಾವಪೂರ್ಣವಾಗಿ ವಿಷಯಗಳನ್ನು ಮಂಡಿಸುವುದರಿಂದ ಅವರ ಮಾತುಗಳು ಅಂತರಂಗವನ್ನು ತಲುಪಿ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ.

5 ಉ. ಶಿಬಿರದ ಸಮಯದಲ್ಲಿ ರಾಮನಾಥಿ ಆಶ್ರಮಕ್ಕೆ ಹೋದ ನಂತರ ಬಹಳ ವರ್ಷಗಳ ನಂತರ ನಾನು ವಿಕ್ರಮ ದಾದಾರನ್ನು ನೋಡಿದೆ. ಆಗ ಅವರ ಮುಖದಲ್ಲಿ ಬಹಳ ತೇಜಸ್ಸು ಕಾಣಿಸುತ್ತಿತ್ತು.

‘ಹೇ ಶ್ರೀಕೃಷ್ಣ, ವಿಕ್ರಮ ದಾದಾರಂತಹ ಆದರ್ಶ ಸಾಧಕರ ಸತ್ಸಂಗವನ್ನು ನನಗೆ ನೀಡುತ್ತಿರುವುದಕ್ಕಾಗಿ ಕೃತಜ್ಞತೆ !’ (13.04.2025)

6. ಸೇವೆಯ ತಳಮಳ

ಅ. ವಿಕ್ರಮ ದಾದಾ ಅವರು ‘ಸನಾತನ ಪ್ರಭಾತ’ದ ಓದುಗರ ಸಂಖ್ಯೆ ಹೆಚ್ಚಾಗಬೇಕು, ಹಾಗೂ ಅದರಲ್ಲಿನ ಮಾಹಿತಿ ಸಾಧ್ಯವಾದಷ್ಟು ಅಧಿಕ ಜನರಿಗೆ ತಲುಪಬೇಕು, ಇದಕ್ಕಾಗಿ ಏನು ಮಾಡಬಹುದು ?, ಎಂದು ವಿಚಾರ ಮಾಡುತ್ತಿರುತ್ತಾರೆ. ಅದಕ್ಕಾಗಿ ಅವರು ಹಗಲಿರುಳು ಶ್ರಮಿಸಲು ಸಿದ್ಧರಿರುತ್ತಾರೆ.

ಆ. ದಾದಾ ಅವರಿಗೆ ‘ಸನಾತನ ಪ್ರಭಾತ’ದ ಕೀರ್ತಿ ಜಗತ್ತಿನಾದ್ಯಂತ ಹರಡಬೇಕು’, ಎಂಬ ತಳಮಳವಿದೆ. ದಾದಾ ಜಗತ್ತಿನಾದ್ಯಂತ ಇರುವ ವಿವಿಧ ಹಿಂದುತ್ವನಿಷ್ಠರು, ಚಿಂತಕರು ಮತ್ತು ಧರ್ಮಪ್ರೇಮಿಗಳನ್ನು ಸಂಪರ್ಕಿಸಿ ಅವರಿಗೆ ಸನಾತನ ಪ್ರಭಾತ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಹಿಂದುತ್ವನಿಷ್ಠರಿಂದ ಜಗತ್ತಿನಾದ್ಯಂತ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯಗಳು ಅಥವಾ ಧರ್ಮದ ಮೇಲಿನ ಆಘಾತಗಳ ಕುರಿತು ಸನಾತನ ಪ್ರಭಾತ ಪತ್ರಿಕೆಗೆ ಮಾಹಿತಿ ಪಡೆಯುವುದು ಸುಲಭವಾಗುತ್ತಿದೆ.

ಇ. ಮೊದಲಿನಿಂದಲೂ ‘ಸನಾತನ ಪ್ರಭಾತ’ ನಿಯತಕಾಲಿಕೆಯ ವಿವಿಧ ಆಂದೋಲನಗಳು ನಡೆಯುತ್ತಿದ್ದವು; ಆದರೆ ಈಗ ತೆಗೆದುಕೊಳ್ಳಲಾಗುವ ಆಂದೋಲನಗಳನ್ನು ಸಮಾಜಮುಖಿಯಾಗಿ ಮಾಡುವಾಗ ‘ಆಡಳಿತ, ಸರಕಾರ ಇತ್ಯಾದಿ ವಿವಿಧ ಹಂತಗಳಲ್ಲಿ ಅದರ ಪರಿಣಾಮಗಳು, ಈ ಎಲ್ಲದರ ವರದಿಗಾರಿಕೆ ಮತ್ತು ಅವುಗಳ ವಿಡಿಯೋಗಳನ್ನು ಸಿದ್ಧಪಡಿಸಿ ಅದರಲ್ಲಿ ದೊರೆತ ಯಶಸ್ಸನ್ನು ಪ್ರಸಾರ ಮಾಡುವುದು’, ಇದರಲ್ಲಿಯೂ ವಿಕ್ರಮ ದಾದಾರ ಪ್ರಮುಖ ಪಾತ್ರವಿದೆ.

ಈ. ಡಿಸೆಂಬರ 2022 ರಲ್ಲಿ ದಾದಾರ ತಂದೆಯವರಿಗೆ (ಶ್ರೀ. ಅರುಣ ಡೊಂಗರೆ, ವಯಸ್ಸು 72 ವರ್ಷ) ಹೃದಯದ ಶಸ್ತ್ರಚಿಕಿತ್ಸೆ ಆಗಿತ್ತು. ಆಗ ವಿಕ್ರಮ ದಾದಾ ತಂದೆಯವರ ಆರೈಕೆಗಾಗಿ ದೇವದ, ಪನವೇಲ ಇಲ್ಲಿನ ಸನಾತನದ ಆಶ್ರಮದಲ್ಲಿ 3 ತಿಂಗಳು ವಾಸ್ತವ್ಯ ಇದ್ದರು. ತಂದೆಯವರ ಸೇವೆ ಮಾಡುತ್ತಲೇ ವರದಿಗಳ ಸಂಪಾದನೆ, ಸಮನ್ವಯ ಇತ್ಯಾದಿ ಸೇವೆಗಳನ್ನು ದಾದಾ ಮಾಡಿದರು. ಈ ಎಲ್ಲದರ ಪರಿಣಾಮವೆಂದರೆ ‘ಪರಾತ್ಪರ ಗುರು ಡಾಕ್ಟರರು ಪ್ರಾರಂಭಿಸಿದ ‘ಸನಾತನ ಪ್ರಭಾತ’ದ ಹೆಸರು ಇಂದು ಭಾರತದಾದ್ಯಂತ ಹರಡುತ್ತಿದೆ ಮತ್ತು ಅದಕ್ಕೆ ಒಂದು ಮುತ್ತು ರತ್ನಗಳನ್ನು ಜೋಡಿಸುವ ಸೇವೆಯನ್ನು ಶ್ರೀ. ವಿಕ್ರಮ ಮಾಡುತ್ತಿದ್ದಾರೆ’, ಎಂದು ಅನಿಸುತ್ತದೆ.’

– ‘ಸನಾತನ ಪ್ರಭಾತ’ನ ನಿಯತಕಾಲಿಕೆಗೆ ಸಂಬಂಧಿಸಿದ ಸೇವೆ ಮಾಡುವ ಸಾಧಕರು, ರಾಮನಾಥಿ, ಫೋಂಡಾ, ಗೋವಾ. (13.04.2025)

‘ಸನಾತನ ಪ್ರಭಾತ’ದ ಕೀರ್ತಿ ಜಗತ್ತಿನಾದ್ಯಂತ ಹರಡಬೇಕು’, ಎಂಬ ತಳಮಳದಿಂದ ದೇಶ-ವಿದೇಶಗಳ ಹಿಂದುತ್ವನಿಷ್ಠರನ್ನು ‘ಸನಾತನ ಪ್ರಭಾತ’ದ ಕಾರ್ಯಕ್ಕೆ ಜೋಡಿಸುವ ಒಬ್ಬ ಬಹುಮುಖ ವ್ಯಕ್ತಿತ್ವ – ಶ್ರೀ. ವಿಕ್ರಮ ಡೊಂಗರೆ !

1. ಕಲಿಯುವ ಮನೋಭಾವ : ‘ವಿಕ್ರಮ ದಾದಾರ ವ್ಯಕ್ತಿತ್ವ ಬಹುಮುಖವಾಗಿದೆ. ಅವರು ‘ಸನಾತನ ಪ್ರಭಾತ’ ನಿಯತಕಾಲಿಕೆಯ ಕುರಿತಾದ ಸೇವೆಗಳನ್ನು ಮಾಡುವಾಗ ವಿವಿಧ ವಿಷಯಗಳನ್ನು ಕಲಿತಿದ್ದಾರೆ, ಉದಾಹರಣೆಗೆ ಚಲನಚಿತ್ರಗಳನ್ನು (ವಿಡಿಯೋ) ಮಾಡುವುದು, ಅವುಗಳನ್ನು ಸಂಕಲನ ಮಾಡುವುದು, ವರದಿಗಳನ್ನು ಭಾಷಾಂತರಿಸುವುದು ಮತ್ತು ಸಂಪಾದಿಸುವುದು ಇತ್ಯಾದಿ. ಆದ್ದರಿಂದ ಯಾವುದೇ ಸೇವೆಯಲ್ಲಿ ಸಾಧಕರ ಕೊರತೆಯಿದ್ದರೆ ದಾದಾ ಆ ಸೇವೆಯನ್ನು ಸ್ವತಃ ಮಾಡುತ್ತಾರೆ.

2. ಅಧ್ಯಯನಶೀಲ ಮನೋಭಾವ : ದಾದಾ ಯಾವುದೇ ಸೇವೆಯ ಅಧ್ಯಯನವನ್ನು ಸರ್ವಾಂಗೀಣವಾಗಿ ಮಾಡಲು ಪ್ರಯತ್ನಿಸುತ್ತಾರೆ. ಆದ್ದರಿಂದ ಸಾಧಕರಿಗೆ ಆ ಸೇವೆಯ ಅನೇಕ ಸೂಕ್ಷ್ಮ ವಿಷಯಗಳನ್ನು ಕಲಿಯಲು ಸಿಗುತ್ತದೆ. ಆಯಾ ಸೇವೆಗಳ ಯೋಜನೆಯನ್ನು ಮಾಡುವಾಗ ದಾದಾ ಮಾಡಿದ ಅಧ್ಯಯನದ ಲಾಭವಾಗುತ್ತದೆ.

3. ‘ಸನಾತನ ಪ್ರಭಾತ’ದಲ್ಲಿ ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುವುದು : ‘ಸನಾತನ ಪ್ರಭಾತ’ಗೆ 25 ವರ್ಷಗಳು ಪೂರ್ಣಗೊಳ್ಳುತ್ತಿರುವಾಗ ದಿನಪತ್ರಿಕೆಯಲ್ಲಿ ಕಾಲಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಅವರು ಕೇವಲ ಸೂತ್ರಗಳನ್ನು ಮಂಡಿಸದೆ ಅದಕ್ಕಾಗಿ ಪ್ರಯತ್ನಿಸುತ್ತಾರೆ, ಹಾಗೂ ಸಾಧಕರಿಗೂ ಅದೇ ರೀತಿ ಮಾಡಲು ಪ್ರೇರೇಪಿಸುತ್ತಾರೆ.

4. ಸಾಮಾಜಿಕ ಮಾಧ್ಯಮಗಳನ್ನು ಕೌಶಲ್ಯದಿಂದ ಉಪಯೋಗಿಸಿ ಪ್ರಸಾರ ಮಾಡುವುದು : ‘ಸನಾತನ ಪ್ರಭಾತ’ದ ‘ಯೂ ಟ್ಯೂಬ್ ಚಾನೆಲ್’ ಅನ್ನು ಪ್ರಾರಂಭಿಸಿ ಅದರಲ್ಲಿ ವಿವಿಧ ಹಿಂದುತ್ವನಿಷ್ಠರ ಸಂದರ್ಶನಗಳನ್ನು ತೆಗೆದುಕೊಳ್ಳುವುದು, ಅವುಗಳನ್ನು ಪ್ರಸಾರ ಮಾಡುವುದು, ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ, ಪ್ರಯಾಗರಾಜನಲ್ಲಿ ನಡೆದ ಕುಂಭಮೇಳ ಇತ್ಯಾದಿ ಮಹತ್ವದ ಸ್ಥಳಗಳಲ್ಲಿ ‘ಸನಾತನ ಪ್ರಭಾತ’ದ ವರದಿಗಾರರನ್ನು ನಿಯೋಜಿಸುವುದು, ಅಲ್ಲಿಗೆ ಹೋಗಿ ವಿಶೇಷ ಸಂದರ್ಶನಗಳನ್ನು ತೆಗೆದುಕೊಳ್ಳುವುದು, ನೇರ ವರದಿ ಮಾಡುವುದು, ಈ ಎಲ್ಲದರ ವಿಡಿಯೋಗಳನ್ನು ಸಿದ್ಧಪಡಿಸಿ ಅವುಗಳನ್ನು ಪ್ರಸಾರ ಮಾಡುವುದು ಇತ್ಯಾದಿ ಸೇವೆಗಳಲ್ಲಿ ವಿಕ್ರಮ ದಾದಾ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

5. ದೇಶ-ವಿದೇಶಗಳ ಹಿಂದುತ್ವನಿಷ್ಠರನ್ನು ‘ಸನಾತನ ಪ್ರಭಾತ’ದ ಕಾರ್ಯದೊಂದಿಗೆ ಜೋಡಿಸುವುದು : ವಿಕ್ರಮ ದಾದಾ ದೇಶ-ವಿದೇಶಗಳ ಹಿಂದುತ್ವನಿಷ್ಠರು ಆಯೋಜಿಸಿದ ಕಾರ್ಯಕ್ರಮಗಳ ವರದಿಗಾರಿಕೆ ಮಾಡುವುದು, ಆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅವರ ಸಂದರ್ಶನಗಳನ್ನು ತೆಗೆದುಕೊಂಡು ಅದರ ವಿಡಿಯೋಗಳನ್ನು ಸಿದ್ಧಪಡಿಸಿ ಅವುಗಳನ್ನು ಪ್ರಸಾರ ಮಾಡುವುದು, ಇಂತಹ ಸೇವೆಗಳನ್ನು ಸಹ ಮಾಡುತ್ತಾರೆ. ಇದರಿಂದ ದೇಶ-ವಿದೇಶಗಳ ಅನೇಕ ಹಿಂದುತ್ವನಿಷ್ಠರು ‘ಸನಾತನ ಪ್ರಭಾತ’ದ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಸೇವೆಯ ತೀವ್ರ ತಳಮಳವಿರುವ ಶ್ರೀ. ವಿಕ್ರಮ ಡೊಂಗರೆ !

‘ಶ್ರೀ. ವಿಕ್ರಮ ಡೊಂಗರೆ ಅವರ ಕುರಿತು ಹೇಳುವುದಾದರೆ, ಯಾವಾಗ ನೋಡಿದರೂ ಅವರಿಗೆ ಸೇವೆಯ ಹೊರತಾಗಿ ಬೇರೇನೂ ಹೊಳೆಯುವುದಿಲ್ಲ. ನಾವು ಕಳೆದ 4-5 ವರ್ಷಗಳಿಂದ ಒಟ್ಟಿಗೆ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದೆವು. ಅವರು ನನ್ನ ಬಹಳ ಕಾಳಜಿ ತೆಗೆದುಕೊಂಡರು. ನಮ್ಮ ಕೋಣೆಯ ಸಾಮೂಹಿಕ ಸ್ವಚ್ಛತೆಯನ್ನು ಅವರು ಪ್ರತಿ ತಿಂಗಳು 5-6 ಗಂಟೆಗಳ ಕಾಲ ಒಬ್ಬರೇ ಮಾಡುತ್ತಿದ್ದರು. ಕೋಣೆಯ ದಿನನಿತ್ಯದ ಸ್ವಚ್ಛತಾ ಸೇವೆ ನಡೆಯುತ್ತಿರುವಾಗಲೂ ಅವರ ಸೇವೆಯ ನಿಮಿತ್ತ ದೂರವಾಣಿ ಸಂಭಾಷಣೆ ನಡೆಯುತ್ತಲೇ ಇರುತ್ತಿತ್ತು. ಅವರಿಗೆ ಆಂಗ್ಲ ಭಾಷೆಯ ಮೇಲೆ ಪ್ರಭುತ್ವವಿದೆ. ಪ್ರತಿಷ್ಠಿತ ಅತಿಥಿಗಳೊಂದಿಗೆ ಅವರು ಆಂಗ್ಲ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ಅವರಲ್ಲಿ ಪ್ರೇಮಭಾವ ಬಹಳಷ್ಟಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಅವರ ಮನಸ್ಸಿನಲ್ಲಿ ಬಹಳ ಭಾವವಿದೆ. ಅವರ ಸ್ವಭಾವ ಮುಕ್ತವಾಗಿದ್ದು, ಅವರು ಸದಾ ಆನಂದಮಯ ಸ್ಥಿತಿಯಲ್ಲಿರುತ್ತಾರೆ.’

– ಶ್ರೀ. ದೇವದತ್ತ ಕುಲಕರ್ಣಿ (ವಯಸ್ಸು 82 ವರ್ಷ, ಆಧ್ಯಾತ್ಮಿಕ ಮಟ್ಟ ಶೇ. 64), ಸನಾತನ ಆಶ್ರಮ, ರಾಮನಾಥಿ, ಗೋವಾ. (19.04.2025)