|
ಅಮೃತಸರ (ಪಂಜಾಬ) – ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿ.ಕೆ.ಐ.) ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಸೇರಿದ 13 ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಅಪ್ರಾಪ್ತ ವಯಸ್ಸಿನ ಭಯೋತ್ಪಾದಕನೂ ಸೇರಿದ್ದಾನೆ. (ಪಂಜಾಬ್ನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೂ ಖಲಿಸ್ತಾನಿ ಭಯೋತ್ಪಾದನೆಯ ಕಡೆಗೆ ತಿರುಗುತ್ತಿರುವುದರಿಂದ ಅಲ್ಲಿನ ಭಯೋತ್ಪಾದನೆಯ ಬೇರುಗಳನ್ನು ಕಿತ್ತುಹಾಕುವುದು ಅವಶ್ಯಕವಾಗಿದೆ! – ಸಂಪಾದಕರು) ನಾಲ್ಕು ದಿನಗಳ ಕಾಲ ನಡೆದ ಪಂಜಾಬ ಪೊಲೀಸರ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಎರಡು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಐ.ಎಸ್.ಐ. ಸಹಾಯದಿಂದ ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್’ ನೆಲೆಗಳನ್ನು ನಡೆಸುತ್ತಿತ್ತು. ‘ಈ ಭಯೋತ್ಪಾದಕರು ರಾಜ್ಯದ ಪೊಲೀಸ ಠಾಣೆಗಳ ಮುಖ್ಯಸ್ಥರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಭಯೋತ್ಪಾದಕರನ್ನು ಬಂಧಿಸುವ ಸಾಧ್ಯತೆ ಇದೆ.
🚨13 Khalistani terrorists arrested in Punjab
They were operating a base with the help of ISI and had plotted attacks on senior police officials and police stations across Punjab.
This incident shows how deeply Khalistani terrorism has infiltrated Punjab! If this isn’t… pic.twitter.com/WEdkvJiXsQ
— Sanatan Prabhat (@SanatanPrabhat) April 20, 2025
1. ಜಾಲಂಧರನ ಗುಪ್ತಚರ ಇಲಾಖೆ ಮತ್ತು ಬಟಾಲಾದ ಪೊಲೀಸರು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದರು. ಸತನಾಮ ಸಿಂಗ ಉರ್ಫ್ ಸತ್ತಾ ಎಂಬಾತ ಫ್ರಾನ್ಸನಿಂದ ಮತ್ತು ಜಸ್ವಿಂದರ ಸಿಂಗ ಉರ್ಫ್ ಮನ್ನು ಅಗವಾನ ಎಂಬಾತ ಗ್ರೀಸನಿಂದ ಈ ನೆಲೆಗಳನ್ನು ನಡೆಸುತ್ತಿದ್ದರು.
2. 2010 ರಲ್ಲಿ ಪಂಜಾಬನಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದವು. ಆ ಸಮಯದಲ್ಲಿ ಸತನಾಮ ಸಿಂಗ್ ಹೆಸರು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
3. ಬಂಧಿತ ಭಯೋತ್ಪಾದಕರಿಂದ 2 ಗ್ರೆನೇಡ್ಗಳು, 1 ಗ್ರೆನೇಡ್ ಲಾಂಚರ್, 2.5 ಕೆಜಿ ತೂಕದ ಅತ್ಯಾಧುನಿಕ ಸ್ಫೋಟಕಗಳು, ಡಿಟೋನೇಟರ್ಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
4. ಪೊಲೀಸ ಮಹಾನಿರ್ದೇಶಕ ಗೌರವ ಯಾದವ ಅವರು ಮಾತನಾಡಿ, ಈ ಭಯೋತ್ಪಾದಕರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಸೂಚನೆಗಳ ಮೇರೆಗೆ ಭಾರತ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಬಂಧಿತ ಭಯೋತ್ಪಾದಕರು ಅನೇಕ ಪೊಲೀಸ ಠಾಣೆಗಳನ್ನು ಗುರಿಯಾಗಿಸುವ ಸಂಚನ್ನೂ ರೂಪಿಸಿದ್ದರು.
ಸಂಪಾದಕೀಯ ನಿಲುವು
|