Waqf Amendment Backlash : ‘ವಕ್ಫ್ ಕಾಯ್ದೆ ಎಂದರೆ ಮುಸಲ್ಮಾನರ ಭೂಮಿಯನ್ನು ಕಬಳಿಸುವ ಸರಕಾರದ ಭಯಾನಕ ಯೋಜನೆ!’

ಭಾಜಪ ಸಂಸದ ನಿಶಿಕಾಂತ್ ದುಬೆ ಮತ್ತು  ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸರಕಾರವು ಜಾರಿಗೊಳಿಸಿರುವ ವಕ್ಫ್ ಕಾಯ್ದೆ, ನಿಸ್ಸಂದೇಹವಾಗಿ ಮುಸಲ್ಮಾನರ ಭೂಮಿಯನ್ನು ಕಸಿದುಕೊಳ್ಳಲು ಸರಕಾರದ ಭಯಾನಕ ಯೋಜನೆಯಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ ಅವರು ಸರಕಾರದ ವಿರುದ್ಧ ಗುಡುಗಿದ್ದಾರೆ. ಖುರೇಶಿ ಅವರು ಮಾತು ಮುಂದುವರೆಸಿ, ‘ಸರ್ವೋಚ್ಚ ನ್ಯಾಯಾಲಯವು ಇದರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂಬ ಖಚಿತತೆ ನನಗಿದೆ. ಭಾಜಪದ ಅಪಪ್ರಚಾರ ವ್ಯವಸ್ಥೆಯು ತಪ್ಪು ಮಾಹಿತಿಯನ್ನು ಹರಡುವ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದೆ.’ ಎಂದು ಹೇಳಿದರು.

ನೀವು ಚುನಾವಣಾ ಆಯುಕ್ತರಲ್ಲ, ಕೇವಲ ಮುಸಲ್ಮಾನ ಆಯುಕ್ತರಾಗಿದ್ದಿರಿ! – ಸಂಸದ ನಿಶಿಕಾಂತ್ ದುಬೆ

ಎಸ್.ವೈ. ಖುರೇಶಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಭಾಜಪ ಸಂಸದ ನಿಶಿಕಾಂತ ದುಬೆ ಅವರು ಖುರೇಶಿ ಅವರನ್ನು ಉದ್ದೇಶಿಸಿ, ‘ನೀವು ಚುನಾವಣಾ ಆಯುಕ್ತರಲ್ಲ, ಕೇವಲ ಮುಸಲ್ಮಾನ ಆಯುಕ್ತರಾಗಿದ್ದಿರಿ,’’ಎಂದು ಪ್ರತಿಕ್ರಿಯಿಸಿದ್ದಾರೆ. ದುಬೆ ಅವರು ಖುರೇಶಿ ಅವರನ್ನು ಉದ್ದೇಶಿಸಿ, ‘ನಿಮ್ಮ ಅಧಿಕಾರಾವಧಿಯಲ್ಲಿ ಜಾರ್ಖಂಡನ ಸಂತಾಲ ಪರಗಣ ಜಿಲ್ಲೆಯಲ್ಲಿ ಅಸಂಖ್ಯಾತ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತೀಯ ಮತದಾರರನ್ನಾಗಿ ಮಾಡಲಾಯಿತು. ಮಹಮ್ಮದ ಪೈಗಂಬರ ಅವರ ಇಸ್ಲಾಂ ಧರ್ಮವು ಕ್ರಿ.ಶ. 712 ರಲ್ಲಿ ಭಾರತಕ್ಕೆ ಬಂದಿತು. ಅದಕ್ಕೂ ಮೊದಲು ಈ ಭೂಮಿ ಹಿಂದೂ, ಬುಡಕಟ್ಟು, ಜೈನ ಮತ್ತು ಬೌದ್ಧರದ್ದಾಗಿತ್ತು. ನಾವು ಈ ದೇಶದ ಜನರ ಏಕತೆಯನ್ನು ಹೆಚ್ಚಿಸಬೇಕು. ದೇಶವನ್ನು ಒಂದುಗೂಡಿಸಿ, ಇತಿಹಾಸವನ್ನು ಉಳಿಸಿ. ಈ ದೇಶವನ್ನು ಎರಡು ತುಂಡುಗಳಾಗಿ ವಿಭಜಿಸಿ ಪಾಕಿಸ್ತಾನವನ್ನು ರಚಿಸಲಾಗಿದೆ. ಈಗ ಮತ್ತೆ ದೇಶ ವಿಭಜನೆಯಾಗುವುದಿಲ್ಲ.’ ಎಂದು ಹೇಳಿದರು.

ಇತ್ತೀಚೆಗೆ ದುಬೆ ಅವರು ವಕ್ಫ್ ಕಾಯ್ದೆಯ ಕುರಿತು ಭಾರತದ ಮುಖ್ಯ ನ್ಯಾಯಾಧೀಶರ ಬಗ್ಗೆ, ‘ಭಾರತದಲ್ಲಿನ ಅಂತರ್ಯುದ್ಧಕ್ಕೆ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರೇ ಕಾರಣರಾಗಿದ್ದಾರೆ,’’ಎಂದು ಹೇಳಿಕೆ ನೀಡಿದ್ದರು. ಅದಕ್ಕಾಗಿ ಅವರ ವಿರುದ್ಧ ಟೀಕೆಗಳು ಬಂದಿದ್ದವು. ಭಾರತೀಯ ಜನತಾ ಪಕ್ಷವು ಅವರ ಮುಖ್ಯ ನ್ಯಾಯಾಧೀಶರ ಕುರಿತಾದ ಹೇಳಿಕೆಯಿಂದ ದೂರವಿತ್ತು.

 

ಮಾಧ್ಯಮಗಳ ಹಿಂದೂದ್ವೇಷ!

ಈ ಘಟನೆಯ ಸುದ್ದಿಯನ್ನು ಪ್ರಸಾರ ಮಾಡುವಾಗ ಎಲ್ಲಾ ಮಾಧ್ಯಮಗಳು ದುಬೆ ಅವರ ಹೇಳಿಕೆಯನ್ನು ಪ್ರಮುಖವಾಗಿ ಪ್ರಕಟಿಸಿದವು, ಆದರೆ ಖುರೇಶಿ ಅವರ ಹೇಳಿಕೆಯನ್ನು ಸುದ್ದಿಯ ಕೆಳಭಾಗದಲ್ಲಿ ಒಂದು-ಎರಡು ಸಾಲುಗಳಲ್ಲಿ ಪ್ರಕಟಿಸಿದವು.

 

ಸಂಪಾದಕೀಯ ನಿಲುವು

  • ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ ಅವರೊಳಗಿನ ‘ಮುಸಲ್ಮಾನ’ ಜಾಗೃತ !
  • ‘ಮುಸಲ್ಮಾನರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಮೊದಲು ಮುಸಲ್ಮಾನರೇ ಆಗಿರುತ್ತಾರೆ’ ಎಂದು ಹೇಳುವುದು ಖುರೇಶಿ ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ದೇಶದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದ ಹಮೀದ್ ಅನ್ಸಾರಿ ಅವರೂ ಈ ಹಿಂದೆ ಇಂತಹ ಹೇಳಿಕೆಗಳನ್ನು ನೀಡಿದ್ದರು ಎಂಬುದನ್ನು ಜನ ಮರೆತಿಲ್ಲ!
  • ಇದರಿಂದ ಖುರೇಶಿ ಅವರು ಹಿಂದೂಗಳ ದೇವಸ್ಥಾನಗಳು, ಬಡ ಹಿಂದೂಗಳ ಮನೆಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿಯ ಕೃತ್ಯವನ್ನು ಬೆಂಬಲಿಸುತ್ತಿದ್ದಾರೆ ! ಅಂತಹ ವ್ಯಕ್ತಿಯು ಹುದ್ದೆಯಲ್ಲಿದ್ದಾಗ ಪಾರದರ್ಶಕ ಆಡಳಿತ ನಡೆಸಿರಬಹುದೇ? ಹಾಗಾಗಿ, ಅಂತಹವರು ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ತನಿಖೆ ನಡೆಯಬೇಕು!