
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸರಕಾರವು ಜಾರಿಗೊಳಿಸಿರುವ ವಕ್ಫ್ ಕಾಯ್ದೆ, ನಿಸ್ಸಂದೇಹವಾಗಿ ಮುಸಲ್ಮಾನರ ಭೂಮಿಯನ್ನು ಕಸಿದುಕೊಳ್ಳಲು ಸರಕಾರದ ಭಯಾನಕ ಯೋಜನೆಯಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ ಅವರು ಸರಕಾರದ ವಿರುದ್ಧ ಗುಡುಗಿದ್ದಾರೆ. ಖುರೇಶಿ ಅವರು ಮಾತು ಮುಂದುವರೆಸಿ, ‘ಸರ್ವೋಚ್ಚ ನ್ಯಾಯಾಲಯವು ಇದರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ಎಂಬ ಖಚಿತತೆ ನನಗಿದೆ. ಭಾಜಪದ ಅಪಪ್ರಚಾರ ವ್ಯವಸ್ಥೆಯು ತಪ್ಪು ಮಾಹಿತಿಯನ್ನು ಹರಡುವ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದೆ.’ ಎಂದು ಹೇಳಿದರು.
🚨 Waqf Act is a sinister govt plan to grab Muslim land! – ex-CEC S.Y. Quraishi shows his true colours!
MP Nishikant Dubey: “You weren’t an Election Commissioner, but a Muslim Commissioner!”
Defending Waqf Board’s temple & land grab? Probe his tenure! 🔍🇮🇳
🚨 Quraishi’s remark… pic.twitter.com/eIj1JZXq58
— Sanatan Prabhat (@SanatanPrabhat) April 21, 2025
ನೀವು ಚುನಾವಣಾ ಆಯುಕ್ತರಲ್ಲ, ಕೇವಲ ಮುಸಲ್ಮಾನ ಆಯುಕ್ತರಾಗಿದ್ದಿರಿ! – ಸಂಸದ ನಿಶಿಕಾಂತ್ ದುಬೆಎಸ್.ವೈ. ಖುರೇಶಿ ಅವರ ಈ ವಿವಾದಾತ್ಮಕ ಹೇಳಿಕೆಗೆ ಭಾಜಪ ಸಂಸದ ನಿಶಿಕಾಂತ ದುಬೆ ಅವರು ಖುರೇಶಿ ಅವರನ್ನು ಉದ್ದೇಶಿಸಿ, ‘ನೀವು ಚುನಾವಣಾ ಆಯುಕ್ತರಲ್ಲ, ಕೇವಲ ಮುಸಲ್ಮಾನ ಆಯುಕ್ತರಾಗಿದ್ದಿರಿ,’’ಎಂದು ಪ್ರತಿಕ್ರಿಯಿಸಿದ್ದಾರೆ. ದುಬೆ ಅವರು ಖುರೇಶಿ ಅವರನ್ನು ಉದ್ದೇಶಿಸಿ, ‘ನಿಮ್ಮ ಅಧಿಕಾರಾವಧಿಯಲ್ಲಿ ಜಾರ್ಖಂಡನ ಸಂತಾಲ ಪರಗಣ ಜಿಲ್ಲೆಯಲ್ಲಿ ಅಸಂಖ್ಯಾತ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತೀಯ ಮತದಾರರನ್ನಾಗಿ ಮಾಡಲಾಯಿತು. ಮಹಮ್ಮದ ಪೈಗಂಬರ ಅವರ ಇಸ್ಲಾಂ ಧರ್ಮವು ಕ್ರಿ.ಶ. 712 ರಲ್ಲಿ ಭಾರತಕ್ಕೆ ಬಂದಿತು. ಅದಕ್ಕೂ ಮೊದಲು ಈ ಭೂಮಿ ಹಿಂದೂ, ಬುಡಕಟ್ಟು, ಜೈನ ಮತ್ತು ಬೌದ್ಧರದ್ದಾಗಿತ್ತು. ನಾವು ಈ ದೇಶದ ಜನರ ಏಕತೆಯನ್ನು ಹೆಚ್ಚಿಸಬೇಕು. ದೇಶವನ್ನು ಒಂದುಗೂಡಿಸಿ, ಇತಿಹಾಸವನ್ನು ಉಳಿಸಿ. ಈ ದೇಶವನ್ನು ಎರಡು ತುಂಡುಗಳಾಗಿ ವಿಭಜಿಸಿ ಪಾಕಿಸ್ತಾನವನ್ನು ರಚಿಸಲಾಗಿದೆ. ಈಗ ಮತ್ತೆ ದೇಶ ವಿಭಜನೆಯಾಗುವುದಿಲ್ಲ.’ ಎಂದು ಹೇಳಿದರು. ಇತ್ತೀಚೆಗೆ ದುಬೆ ಅವರು ವಕ್ಫ್ ಕಾಯ್ದೆಯ ಕುರಿತು ಭಾರತದ ಮುಖ್ಯ ನ್ಯಾಯಾಧೀಶರ ಬಗ್ಗೆ, ‘ಭಾರತದಲ್ಲಿನ ಅಂತರ್ಯುದ್ಧಕ್ಕೆ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರೇ ಕಾರಣರಾಗಿದ್ದಾರೆ,’’ಎಂದು ಹೇಳಿಕೆ ನೀಡಿದ್ದರು. ಅದಕ್ಕಾಗಿ ಅವರ ವಿರುದ್ಧ ಟೀಕೆಗಳು ಬಂದಿದ್ದವು. ಭಾರತೀಯ ಜನತಾ ಪಕ್ಷವು ಅವರ ಮುಖ್ಯ ನ್ಯಾಯಾಧೀಶರ ಕುರಿತಾದ ಹೇಳಿಕೆಯಿಂದ ದೂರವಿತ್ತು. |
ಮಾಧ್ಯಮಗಳ ಹಿಂದೂದ್ವೇಷ!ಈ ಘಟನೆಯ ಸುದ್ದಿಯನ್ನು ಪ್ರಸಾರ ಮಾಡುವಾಗ ಎಲ್ಲಾ ಮಾಧ್ಯಮಗಳು ದುಬೆ ಅವರ ಹೇಳಿಕೆಯನ್ನು ಪ್ರಮುಖವಾಗಿ ಪ್ರಕಟಿಸಿದವು, ಆದರೆ ಖುರೇಶಿ ಅವರ ಹೇಳಿಕೆಯನ್ನು ಸುದ್ದಿಯ ಕೆಳಭಾಗದಲ್ಲಿ ಒಂದು-ಎರಡು ಸಾಲುಗಳಲ್ಲಿ ಪ್ರಕಟಿಸಿದವು. |
ಸಂಪಾದಕೀಯ ನಿಲುವು
|