ಸ್ಕಾಟ್ಲೆಂಡ್ ಸಂಸತ್ತಿನಲ್ಲಿ ಹಿಂದೂದ್ವೇಷದ ವಿರುದ್ಧ ಪ್ರಸ್ತಾವನೆ ಮಂಡನೆ!

ಎಡಿನಬರ್ಗ್ (ಸ್ಕಾಟ್ಲೆಂಡ್) – ಯುರೋಪಿನ ಸ್ಕಾಟ್ಲೆಂಡ್ ದೇಶದ ಸಂಸತ್ತಿನಲ್ಲಿ ಹಿಂದೂದ್ವೇಷದ ವಿರುದ್ಧ ನಿರ್ಣಯವನ್ನು ಮಂಡಿಸಲಾಗಿದೆ. ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಮೊದಲ ಬಾರಿಗೆ ಅಧಿಕೃತವಾಗಿ ಖಂಡಿಸಲಾಗಿದೆ. ಅಲ್ಬಾ ಪಕ್ಷದ ಸಂಸದ ಆಶ್ ರೇಗನ್ ಈ ನಿರ್ಣಯವನ್ನು ಮಂಡಿಸಿದ್ದರು. ಸ್ಕಾಟ್ಲೆಂಡ್ ನಲ್ಲಿ ವಾಸಿಸುವ ಹಿಂದೂ ಸಮುದಾಯವು ಎದುರಿಸುತ್ತಿರುವ ತಾರತಮ್ಯ, ದ್ವೇಷ ಮತ್ತು ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತುವುದು ಈ ನಿರ್ಣಯದ ಉದ್ದೇಶವಾಗಿದೆ. ಈ ಪ್ರಸ್ತಾವನೆಯಲ್ಲಿ ಸ್ಕಾಟ್ಲೆಂಡ್ ನ ಹಿಂದೂ ಸಮುದಾಯವು ತಾರತಮ್ಯ, ಬಹಿಷ್ಕಾರ ಮತ್ತು ದ್ವೇಷವನ್ನು ಎದುರಿಸುತ್ತಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

1. ಸಂಸತ್ತಿನಲ್ಲಿ ಮಂಡಿಸಲಾದ ಈ ನಿರ್ಣಯಕ್ಕೆ ಕಾಲಿನ್ ಬೀಟಿ, ಸ್ಟೆಫಾನಿ ಕ್ಯಾಲಗನ್ ಮತ್ತು ಕೆವಿನ್ ಸ್ಟೀವರ್ಟ್ ಸೇರಿದಂತೆ ಅನೇಕ ಸಂಸದರು ಬೆಂಬಲ ನೀಡಿದ್ದಾರೆ.

2. ಪ್ರಸ್ತಾವನೆಯನ್ನು ಮಂಡಿಸಿದ ಆಶ್ ರೇಗನ್ ಅವರು, “ಈ ಪ್ರಸ್ತಾವನೆಯು ಕೇವಲ ಸಾಂಕೇತಿಕವಲ್ಲ, ಬದಲಿಗೆ ನಿರ್ದಿಷ್ಟ ಬದಲಾವಣೆಗೆ ಕರೆ ನೀಡುತ್ತದೆ” ಎಂದು ಹೇಳಿದರು.

3. ಗಾಂಧಿಯನ್ ಪೀಸ್ ಸೊಸೈಟಿಯ ‘ಸ್ಕಾಟ್ಲೆಂಡ್ ನಲ್ಲಿ ಹಿಂದೂಫೋಬಿಯಾ (ಹಿಂದೂಗಳ ಬಗ್ಗೆ ತಿರಸ್ಕಾರ): ಪೂರ್ವಗ್ರಹವನ್ನು ಅರ್ಥಮಾಡಿಕೊಳ್ಳುವುದು, ಪರಿಹರಿಸುವುದು ಮತ್ತು ಅದನ್ನು ಮೀರುವುದು’ ಎಂಬ ವರದಿಯ ಆಧಾರದ ಮೇಲೆ ಈ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಈ ವರದಿಯನ್ನು ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಧ್ರುವ ಕುಮಾರ, ಅಧ್ಯಕ್ಷ ಅನುರಂಜನ ಝಾ, ಸುಖಿ ಬೈನ್ಸ, ಅಜಿತ ತ್ರಿವೇದಿ ಮತ್ತು ‘ಇಂಡಿಯನ್ ಕೌನ್ಸಿಲ್ ಆಫ್ ಸ್ಕಾಟ್ಲೆಂಡ್ ಅಂಡ್ ಯುಕೆ’ ಅಧ್ಯಕ್ಷ ನೀಲ ಝಾಲಾ ಅವರು ಬರೆದಿದ್ದಾರೆ.

ಸ್ಕಾಟ್ಲೆಂಡ್ ನಲ್ಲಿರುವ 30 ಸಾವಿರ ಹಿಂದೂಗಳು!

ದೇವಸ್ಥಾನಗಳ ಮೇಲಿನ ದಾಳಿಗಳು, ಕಾರ್ಯ ಸ್ಥಳಗಳಲ್ಲಿ ಹಿಂದೂ ಉದ್ಯೋಗಿಗಳೊಂದಿಗೆ ತಾರತಮ್ಯ, ಹಿಂದೂ ಹಬ್ಬಗಳು ಮತ್ತು ಸಂಪ್ರದಾಯಗಳ ಬಗ್ಗೆ ಅಪಹಾಸ್ಯ, ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಂಸ್ಕೃತಿಕ ನಿರ್ಲಕ್ಷ್ಯ, ಹಾಗೂ ಕೆಲವೊಮ್ಮೆ ದೈಹಿಕ ಅಥವಾ ಮಾನಸಿಕ ದಾಳಿಗಳು ಸೇರಿದಂತೆ ಅನೇಕ ಆಘಾತಕಾರಿ ಸಂಗತಿಗಳನ್ನು ಈ ವರದಿಯಲ್ಲಿ ಬಹಿರಂಗವಾಗಿವೆ. ಈ ಎಲ್ಲಾ ಘಟನೆಗಳನ್ನು ಸ್ಕಾಟ್ಲೆಂಡ್ ನಲ್ಲಿ ವಾಸಿಸುವ 30 ಸಾವಿರ ಹಿಂದೂಗಳು ಅನುಭವಿಸಿದ್ದಾರೆ.

ಸಂಪಾದಕೀಯ ನಿಲುವು

ವಿದೇಶಗಳಲ್ಲಿ ಹಿಂದೂದ್ವೇಷದ ವಿರುದ್ಧ ಸಂಸತ್ತಿನಲ್ಲಿ ಪ್ರಸ್ತಾವನೆಗಳನ್ನು ಮಂಡಿಸಲಾಗುತ್ತಿದೆ; ಆದರೆ ಭಾರತದಲ್ಲಿ ಹಿಂದೂದ್ವೇಷ ಮಾತ್ರವಲ್ಲ, ಹಿಂದೂಗಳ ಮೇಲೆ ದಾಳಿಗಳಾಗುತ್ತಿದ್ದರೂ ಬೆರಳೆಣಿಕೆಯಷ್ಟು ಹಿಂದೂ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಕೂಡ ಹಿಂದೂಗಳ ಬೆಂಬಲಕ್ಕೆ ಮುಂದೆ ಬರುತ್ತಿಲ್ಲ, ಇಂತಹ ನಾಯಕರಿಗೆ ಮತ ಹಾಕಿ ಆಯ್ಕೆ ಮಾಡಿದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ