
ದೇವಸ್ಥಾನಗಳು ಊರಿನ ಕೇಂದ್ರಸ್ಥಾನವಾಗಿರುತ್ತಿದ್ದವು. ದೇವಸ್ಥಾನವನ್ನು ನಾನು ಒಂದು ಸಾಮಾಜಿಕ ಸಂಸ್ಥೆಯೆಂದು ತಿಳಿಯತ್ತೇನೆ. ಕೆಲವು ದೇವಸ್ಥಾನಗಳಲ್ಲಿ ಒಂದು ಗೋಲಾಕಾರದ ಕಲ್ಲು ಇರುತ್ತದೆ. ಅದರ ಹೆಸರು ರಂಗಶಿಲೆ. ಅಲ್ಲಿ ನೀವು ದೇವರಿಗೆ ನರ್ತನೆ, ಕೀರ್ತನ, ಭಜನೆ ಅರ್ಪಣೆ ಮಾಡುತ್ತೀರಿ. ನೃತ್ಯ ಕಲಿತ ನಂತರ ‘ಅರಂಗೇಟ್ರಮ್’ (ಎಲ್ಲರ ಮುಂದೆ ಪ್ರಸ್ತುತಪಡಿಸುವುದು) ಮಾಡಲಾಗುತ್ತದೆ, ದಕ್ಷಿಣದಲ್ಲಿ ಅದನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿದೆ. ಇದು ಎಲ್ಲಿಂದ ಬರುತ್ತದೆ ? ಈಗಲೂ ಕೆಲವು ಮಕ್ಕಳು ದೇವಸ್ಥಾನಗಳಿಗೆ ಹೋಗಿ ನೃತ್ಯ ಕಲಿಯುತ್ತಾರೆ. ದೇವಸ್ಥಾನಗಳ ಸುತ್ತಲೂ ಸಂತೆ ಸೇರುತ್ತಿತ್ತು. ಸುತ್ತಮುತ್ತಲಿನ ಹಳ್ಳಿಯ ಜನರು ಅಲ್ಲಿಗೆ ಬರುತ್ತಾರೆ. ಅಲ್ಲಿ ವಸ್ತುವಿನಿಮಯದ ಜೊತೆಗೆ ವಿಚಾರ ವಿನಿಮಯವೂ ನಡೆಯುತ್ತಿತ್ತು. ಜನರು ಸತ್ಯಪ್ರಮಾಣ ಮಾಡಲು ದೇವಸ್ಥಾನಕ್ಕೆ ಬರುತ್ತಿದ್ದರು. ಆಗ ನಗರದ ಹಾಗೂ ಹಳ್ಳಿಯ ಜನರ ಪೂರ್ಣ ಜೀವನ ದೇವಸ್ಥಾನವನ್ನೇ ಅವಲಂಬಿಸಿರುತ್ತಿತ್ತು.
– ಡಾ. ಗೋ.ಬಂ.ದೇಗಲೂರಕರ್, ಪುರಾತತ್ತ್ವಶಾಸ್ತ್ರ ಮತ್ತು ಮೂರ್ತಿಶಾಸ್ತ್ರದ ಅಭ್ಯಾಸಕರು
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft