ಅಕ್ಷಯ ತೃತೀಯಾ(ಅಕ್ಷಯ ತದಿಗೆ) ನಿಮಿತ್ತದಿಂದ ಗ್ರಾಹಕರಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಉಡುಗೊರೆಯಾಗಿ ಕೊಡುವಂತೆ ಸ್ವರ್ಣೋದ್ಯಮಿಗಳನ್ನು ಉದ್ಯುಕ್ತಗೊಳಿಸಿ !

ಸಾಧಕರಿಗೆ ಸೂಚನೆ

ಮುಂಬರುವ ೧೦.೫.೨೦೨೪ ರಂದು ಅಕ್ಷಯ ತದಿಗೆ ಇದೆ. ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ಗ್ರಾಹಕರು ಬಹಳ ಪ್ರಮಾಣದಲ್ಲಿ ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಖರೀದಿಸುವ ಗ್ರಾಹಕರಿಗೆ ಚಿನ್ನದ ಅಂಗಡಿಯವರು ಗ್ರಂಥ ಅಥವಾ ಇತರ ವಸ್ತುಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಸನಾತನದ ಗ್ರಂಥಗಳನ್ನು ಸಮಾಜದ ಹೆಚ್ಚಿನ ಜನರಿಗೆ ತಲುಪಿಸುವ ದೃಷ್ಟಿಯಿಂದ ಸಾಧಕರು ಎಲ್ಲೆಡೆಯ ಚಿನ್ನದ ವ್ಯಾಪಾರಿಗಳನ್ನು ಸಂಪರ್ಕಿಸಬೇಕು. ಅವರಿಗೆ ಸನಾತನವು ಪ್ರಕಾಶಿಸಿದ ಗ್ರಂಥ ಹಾಗೂ ಕಿರು ಗ್ರಂಥಗಳ ಬಗ್ಗೆ ಮಾಹಿತಿಯನ್ನು ಹೇಳಬೇಕು ಅದೇರೀತಿ ಆಭರಣ, ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮ ಈ ಸಂದರ್ಭದಲ್ಲಿನ ಗ್ರಂಥಗಳನ್ನೂ ತೋರಿಸಬೇಕು ಸನಾತನವು ಸಾತ್ತ್ವಿಕ ಆಭರಣಗಳ ಕುರಿತು ಗ್ರಂಥಗಳನ್ನು ಪ್ರಕಾಶನ ಮಾಡಿರುತ್ತದೆ. ಆ ಗ್ರಂಥಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಯಾವ ಭಾಷೆಯಲ್ಲಿ ಗ್ರಂಥಗಳು ಲಭ್ಯ ಇವೆ ಅವುಗಳ ಮುಂದೆ ಝ್() ಗುರುತು ಹಾಕಲಾಗಿದೆ.

ಚಿನ್ನದ ಅಂಗಡಿಯವರು ಗ್ರಾಹಕರಿಗೆ ಸನಾತನ ಗ್ರಂಥ ಮತ್ತು ಕಿರುಗ್ರಂಥಗಳನ್ನು ಉಡುಗೊರೆಯಾಗಿ ನೀಡಿದರೆ, ಅವರಿಂದ ವ್ಯಾಪಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮದ ಸೇವೆಯೂ ಆಗುತ್ತದೆ ಎಂದು ಹೇಳುವ ಮೂಲಕ ಸಾಧಕರು ಅವರನ್ನು ಉದ್ಯುಕ್ತಗೊಳಿಸಬೇಕು.